ಸಿಎಂಗಾಗಿ ರಸ್ತೆ ವಿಭಜಕವೇ ತೆರವು : ಸಾರ್ವಜನಿಕರ ಟೀಕೆ

Published : Jan 11, 2019, 07:53 AM IST
ಸಿಎಂಗಾಗಿ ರಸ್ತೆ ವಿಭಜಕವೇ ತೆರವು : ಸಾರ್ವಜನಿಕರ ಟೀಕೆ

ಸಾರಾಂಶ

ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ಬಯ​ಸದೇ ಇದ್ದರೂ, ಸಮಾ​ರಂಭದ ಆಯೋ​ಜ​ಕರೂ ಕೋರದೆ ಇದ್ದರೂ ಸಿಎಂ ಅವರ ಸುಗಮ ಸಂಚಾ​ರ​ಕ್ಕಾಗಿ ರಸ್ತೆ ವಿಭ​ಜ​ಕ​ವನ್ನು ತೆರ​ವು​ಗೊ​ಳಿ​ಸಿದ್ದು ಸಾರ್ವ​ಜ​ನಿ​ಕ​ರಿಂದ ಟೀಕೆಗೆ ಒಳ​ಗಾ​ಯಿ​ತು. 

ಬೆಂಗಳೂರು :  ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರು ಹಾಗೂ ಬೆಂಗಾವಲು ಪಡೆ ವಾಹನಗಳ ಸಂಚಾರಕ್ಕಾಗಿ ಪೊಲೀಸರು ರಸ್ತೆ ವಿಭಜಕವನ್ನೇ (ಡಿವೈಡರ್‌) ತೆರವುಗೊಳಿಸಿದ ಘಟನೆ ಗುರು​ವಾರ ನಡೆ​ದಿ​ದೆ.

ಖುದ್ದು ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ಬಯ​ಸದೇ ಇದ್ದರೂ, ಸಮಾ​ರಂಭದ ಆಯೋ​ಜ​ಕರೂ ಕೋರದೆ ಇದ್ದರೂ ಸಿಎಂ ಅವರ ಸುಗಮ ಸಂಚಾ​ರ​ಕ್ಕಾಗಿ ರಸ್ತೆ ವಿಭ​ಜ​ಕ​ವನ್ನು ತೆರ​ವು​ಗೊ​ಳಿ​ಸಿದ್ದು ಸಾರ್ವ​ಜ​ನಿ​ಕ​ರಿಂದ ಟೀಕೆಗೆ ಒಳ​ಗಾ​ಯಿ​ತು. 

ಗುರುವಾರ ನಿಮ್ಹಾನ್ಸ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಿಮ್ಹಾನ್ಸ್‌ ಮುಂಭಾಗದ ರಸ್ತೆಯುದ್ದಕ್ಕೂ ಡಿವೈಡರ್‌ ಇದ್ದಿದ್ದರಿಂದ ಡೈರಿ ವೃತ್ತದಲ್ಲಿ ‘ಯು’ ತಿರುವು ಪಡೆದೇ ವಾಪಸ್‌ ಬರಬೇಕಿತ್ತು. 

ಹಾಗಾಗಿ ಶಾಂತಿನಗರ ಕಡೆಯಿಂದ ಬಂದ ಮುಖ್ಯಮಂತ್ರಿ ಅವರ ಕಾರು ಮತ್ತು ಬೆಂಗಾವಲು ವಾಹನಗಳು ನಿಮ್ಹಾನ್ಸ್‌ ಆವರಣಕ್ಕೆ ನೇರ​ವಾಗಿ ತೆರ​ಳಲು ಅನು​ವಾ​ಗು​ವಂತೆ ನಿಮ್ಹಾನ್ಸ್‌ ಮುಖ್ಯದ್ವಾರದ ಮುಂಭಾಗದ ರಸ್ತೆಯ ಡಿವೈಡರ್‌ಅನ್ನೇ ತೆರವುಗೊಳಿಸಲಾ​ಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!