2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಏಪ್ರಿಲ್‌-ಅಕ್ಟೋಬರ್‌ ಬಂಪರ್‌!

Published : Nov 14, 2024, 06:37 PM ISTUpdated : Nov 14, 2024, 09:34 PM IST
2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಏಪ್ರಿಲ್‌-ಅಕ್ಟೋಬರ್‌ ಬಂಪರ್‌!

ಸಾರಾಂಶ

2025ರ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ. ಕೆಲವು ಹಬ್ಬಗಳು ವಾರಾಂತ್ಯದಲ್ಲಿ ಬಂದರೂ, ಅವುಗಳಿಗೆ ರಜೆ ಘೋಷಿಸಿಲ್ಲ.

ಬೆಂಗಳೂರು (ನ.14): 2024ರ ವರ್ಷ ಕೊನೆಗೊಳ್ಳಲು ಒಂದೂವರೆ ತಿಂಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ (public holidays 2025) 2025ರ ಸಾರ್ವತ್ರಿಕ ಹಾಗೂ ಪರಿಮಿತ ರಜಾದಿನಗಳ  (restricted holiday 2025) ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ. ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ರಜೆ ಪಟ್ಟಿಯಲ್ಲಿ ಭಾನುವಾರದಂದು ಬರುವ ಗಣರಾಜ್ಯೋತ್ಸವ (ಜನವರಿ 26), ಯುಗಾದಿ ಹಬ್ಬ (ಮಾರ್ಚ್‌ 30), ಮೊಹರಂ ಕಡೇ ದಿನ (ಜುಲೈ 6) ಹಾಗೂ ಮಹಾಲಯ ಅಮವಾಸ್ಯೆ (ಸೆಪ್ಟೆಂಬರ್‌ 9) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ (ನವೆಂಬರ್‌ 8) ರಜಾ ದಿನವನ್ನು ನಮೂದು ಮಾಡಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಏಪ್ರಿಲ್‌ ಹಾಗೂ ಅಕ್ಟೋಬರ್‌ ತಿಂಗಳು ಭರ್ಜರಿ ರಜಾ ತಿಂಗಳಾಗಿದ್ದು, ಕ್ರಮವಾಗಿ 4 ಹಾಗೂ 5 ಸಾರ್ವತ್ರಿಕ ರಜೆಗಳು ಸಿಗಲಿದೆ.

ಅದರೊಂದಿಗೆ ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ದಿನಾಂಕವಾರಸಾರ್ವತ್ರಿಕ ರಜಾದಿನ
ಜ.14ಮಂಗಳವಾರಮಕರ ಸಂಕ್ರಾಂತಿ
ಫೆ. 26ಬುಧವಾರಮಹಾಶಿವರಾತ್ರಿ
ಮಾ.31ಸೋಮವಾರರಂಜಾನ್‌
ಏ.10ಗುರುವಾರಮಹಾವೀರ ಜಯಂತಿ
ಏ.14ಸೋಮವಾರಡಾ.ಬಿಆರ್‌ ಅಂಬೇಡ್ಕರ್‌ ಜಯಂತಿ
ಏ.18ಶುಕ್ರವಾರಗುಡ್‌ಫ್ರೈಡೇ
ಏ.30ಬುಧವಾರಬಸವ ಜಯಂತಿ, ಅಕ್ಷತ ತೃತೀಯ
ಮೇ.1ಗುರುವಾರಕಾರ್ಮಿಕರ ದಿನಾಚರಣೆ
ಜೂ.7ಶನಿವಾರಬಕ್ರೀದ್‌
ಆ. 15ಶುಕ್ರವಾರಸ್ವಾತಂತ್ರ್ಯ ದಿನಾಚರಣೆ
ಆ.27ಬುಧವಾರವರಸಿದ್ದಿ ವಿನಾಯಕ ವ್ರತ
ಸೆ. 5ಶುಕ್ರವಾರಈದ್‌ಮಿಲಾದ್‌
ಅ.1ಬುಧವಾರಮಹಾನವಮಿ, ಆಯುಧಪೂಜೆ, ವಿಜಯದಶಮಿ
ಅ.2ಗುರುವಾರಗಾಂಧಿ ಜಯಂತಿ
ಅ. 7ಮಂಗಳವಾರಮಹರ್ಷಿ ವಾಲ್ಮೀಕಿ ಜಯಂತಿ
ಅ.20ಸೋಮವಾರನರಕ ಚತುದರ್ಶಿ
ಅ.22ಬುಧವಾರಬಲಿಪಾಡ್ಯಮಿ, ದೀಪಾವಳಿ
ನ.1ಶನಿವಾರಕನ್ನಡ ರಾಜ್ಯೋತ್ಸವ
ಡಿ. 25ಗುರುವಾರಕ್ರಿಸ್‌ಮಸ್‌

ಇದನ್ನೂ ಓದಿ: ಅಬ್ಬಬ್ಬಾ... ಪ್ರೀತಿಯ ಬೆಕ್ಕಿಗೆ 1.5 ಲಕ್ಷ ರೂಪಾಯಿ ಕೊಟ್ಟು ಹೇರ್‌ಕಟ್‌ ಮಾಡಿಸಿದ ಮಾಜಿ ಕ್ರಿಕೆಟಿಗ!

ಇದನ್ನೂ ಓದಿ:  ₹67,538 ಕೋಟಿ ಮೌಲ್ಯದ ಅಮೆಜಾನ್‌ ಷೇರು ಮಾರಾಟ ಮಾಡಿದ ಜೆಫ್‌ ಬೆಜೋಸ್‌ ಮಾಜಿ ಪತ್ನಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ