PSI Recruitment Scam: ನಾಪತ್ತೆಯಾಗಿರುವ ದಿವ್ಯಾ ಶ್ರೀ ಕಾಶ್ಮೀರದಲ್ಲಿ?

Published : Apr 28, 2022, 08:03 AM IST
PSI Recruitment Scam: ನಾಪತ್ತೆಯಾಗಿರುವ ದಿವ್ಯಾ ಶ್ರೀ ಕಾಶ್ಮೀರದಲ್ಲಿ?

ಸಾರಾಂಶ

*  ಪಿಎ​ಸ್‌ಐ ನೇಮ​ಕ ಪರೀಕ್ಷೆ ಅಕ್ರ​ಮ ಆರೋಪಿ *  ಈವರೆಗೆ 16 ಮಂದಿ ಬಂಧಿಸಿದ ಸಿಐಡಿ  *  ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ದಿವ್ಯಾ 

ಯಾದಗಿರಿ(ಏ.28):  ಪಿಎಸ್‌ಐ ಪರೀಕ್ಷೆ ಅಕ್ರ​ಮದ(PSI Recruitment Scam) ಪ್ರಮುಖ ಆರೋಪಿ, ಜ್ಞಾನ​ಸುಧಾ ಕಾಲೇ​ಜಿನ ಮಾಲಕಿ ಕಲಬುರಗಿಯ ದಿವ್ಯಾ ಹಾಗರಗಿ(Divya Hagaragi) ವಿರುದ್ಧ ನ್ಯಾಯಾ​ಲ​ಯ​ದಿಂದ ಅರೆಸ್ಟ್‌ ವಾರೆಂಟ್‌ ಜಾರಿ​ಯಾ​ಗು​ತ್ತಿ​ದ್ದಂತೆ ಆಕೆಯ ಬಂಧನಕ್ಕೆ ಸಿಐಡಿ(CID) ಪಡೆ ಭಾರೀ ಕಸರತ್ತು ನಡೆಸುತ್ತಿದೆ. ಆಕೆ ಗೋವಾ, ಕಾಶ್ಮೀರದಲ್ಲಿ(Kashmir) ತಲೆಮರೆಸಿಕೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿವೆ.

ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ದಿವ್ಯಾ ಮಹಾರಾಷ್ಟ್ರ(Maharashtra) ಹಾಗೂ ತೆಲಂಗಾಣದಲ್ಲಿ(Telangana) ಅಡಗಿರಬಹುದು ಎಂಬ ಮಾತುಗಳು ಆರಂಭದಲ್ಲಿ ಕೇಳಿಬಂದಿದ್ದವು. ಅಫಜಲ್ಪುರ ಮಾರ್ಗ ಮಧ್ಯೆ ಕಾರು ಚಾಲಕನ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವ ಆಧಾರದ ಮೇಲೆ ಇಂಥ ಸಂಶಯ ವ್ಯಕ್ತಪಡಿಸಲಾಗಿತ್ತು. ಮತ್ತೊಬ್ಬ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್‌(RD Patil) ಮಹಾರಾಷ್ಟ್ರದ ಸೊಲ್ಲಾಪು​ರ-ಪುಣೆ ಬಳಿ ಸಿಕ್ಕ ಬಳಿಕ, ದಿವ್ಯಾ ಕೂಡ ಮಹಾರಾಷ್ಟ್ರದಲ್ಲೇ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನಗಳು ಮೂಡಿವೆ.

PSI Recruitment Scam: ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗೆ ಸಿಐಡಿ ತಕರಾರು

ಪ್ರಕ​ರ​ಣಕ್ಕೆ ಸಂಬಂಧಿಸಿ ತಕ್ಷಣ ಕಾರ್ಯಾ​ಚ​ರ​ಣೆ​ಗಿ​ಳಿದ ಸಿಐಡಿ ಈವರೆಗೆ 16 ಮಂದಿ ಬಂಧಿಸಿದೆ. ಇಷ್ಟಾ​ದರೂ ದಿವ್ಯಾ ಬಂಧ​ನಕ್ಕೆ ವಿಳಂಬ​ವಾ​ಗು​ತ್ತಿ​ರುವುದು ತನಿಖಾ ಸಂಸ್ಥೆಗೆ ತಲೆ​ನೋ​ವಾಗಿ ಪರಿ​ಣ​ಮಿ​ಸಿದೆ. ದಿವ್ಯಾ ಕಾಶ್ಮೀರದಲ್ಲಿದ್ದರೆ, ಗೋವಾದ ಹೋಟೆಲೊಂದರಲ್ಲಿ ಪ್ರಭಾವಿಗಳ ನೆರವಿನಿಂದ ಭೂಗತರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ​ಯಾ​ದರೂ ಇವೆಲ್ಲ ಸದ್ಯ ಊಹಾ​ಪೋ​ಹ​ಗ​ಳ​ಷ್ಟೆ.

ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಸರೆಂಡರ್ ಆಗದಿದ್ರೆ ಆಸ್ತಿ ಜಪ್ತಿ..!

ಕಲಬುರಗಿ:  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ(Divya Hagaragi) & ಟೀಂಗೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗಿದೆ. ವಾರದೊಳಗೆ ಶರಣಾಗದಿದ್ರೆ ಆಸ್ತಿ ಜಪ್ತಿಯ ಎಚ್ಚರಿಕೆ ನೀಡಲಾಗಿದ್ದು, ಇದು ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿಗೆ ತೀವ್ರ ನಡುಕ ಸೃಷ್ಟಿಸುವಂತದ ಆದೇಶವಾಗಿದೆ. 

ಪಿಎಸ್‌ಐ ಪರೀಕ್ಷೆ ಅಕ್ರಮ- ಶೀಘ್ರ ಸರ್ಕಾರಕ್ಕೆ ಮಧ್ಯಂತರ ವರದಿ?

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಸಿಐಡಿ, ನಾಪತ್ತೆಯಾಗಿರುವವರ ಪತ್ತೆಗೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಕಲಬುರಗಿಯ(Kalaburagi) ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಕೆಲಸ ನೌಕರರು ಕಳೆದ 16 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಸಿಐಡಿ(CID) ಎಲ್ಲಾ ಪ್ರಯತ್ನ ನಡೆಸಿದ್ರೂ ಪತ್ತೆಯಾಗಿಲ್ಲ. ಇವರ ಬಂಧನಕ್ಕಾಗಿಯೇ ಸಿಐಡಿ ಆರು ತಂಡ ರಚಿಸಿ ಹಗಲಿರುಳು ಶೋಧ ನಡೆಸುತ್ತಿದ್ರೂ ದಿವ್ಯಾ ಹಾಗರಗಿ ಆಂಡ್ ಟೀಂ ಸುಳಿವು ಸಿಕ್ಕಿಲ್ಲ.

ಇದರಿಂದಾಗಿ ನಾಪತ್ತೆಯಾದವರ ವಿರುದ್ಧ ಬಿಗಿ ಕ್ರಮಕ್ಕೆ ಮುಂದಾಗಿರುವ ಸಿಐಡಿ, ನ್ಯಾಯಾಲಯದ(Court) ಮೂಲಕ ಅರೆಸ್ಟ್ ವಾರೆಂಟ್(Arrest Warrant) ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇವರು ಸಂಘಟಿತ ಅಪರಾಧಿಗಳು, ಇವರಿಗೆ ಜಾಮೀನು(Bail) ನೀಡಬಾರದು. ಜೊತೆಗೆ ದಿವ್ಯಾ ಸೇರಿ 6 ಆರೋಪಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಇಸ್ಯೂ ಮಾಡಬೇಕು ಎಂದು ಸಿಐಡಿ ಕಲಬುರಗಿ ಜಿಲ್ಲಾ ಮೂರನೇ ಸಸೆನ್ಸ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಸಿಐಡಿ ಮನವಿ ಪುರಸ್ಕರಿಸಿದ ನ್ಯಾಯಾಲಯ, ದಿವ್ಯಾ ಹಾಗರಗಿ ಮತ್ತು ಐವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ