ಕರ್ನಾಟಕವನ್ನ ಬಿಹಾರ, ಯುಪಿ ಮಾಡಲು ಹೊರಟಿದ್ದಾರಾ? ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Published : Sep 15, 2025, 11:52 AM IST
Priyank kharge

ಸಾರಾಂಶ

ಸೌಜನ್ಯ ಪ್ರಕರಣದ ತನಿಖೆ ಬಗ್ಗೆ ಬಿಜೆಪಿ ನಡೆಸುತ್ತಿರುವ ರಾಜಕೀಯ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರ ಭಾಷೆ ಹಾಗೂ ನಡೆ ಬಗ್ಗೆಯೂ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಲಾಂಗು, ಚಾಕು, ಚೂರಿ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಕಲಬುರಗಿ (ಸೆ.15): ಬಿಜೆಪಿಯವರಿಗೆ ಏನು ಬೇಕು ಎನ್ನುವುದಾದರೂ ಅವರು ತೀರ್ಮಾನಿಸಲಿ. ಧರ್ಮಸ್ಥಳ ಚಲೋ ಯಾರಿಗೋಸ್ಕರ ಮಾಡಿದ್ರು? ಸೌಜನ್ಯ ಮನೆಗೆ ಬಿಜೆಪಿಯವರು ಹೋಗಿದ್ದಾಗ ಯಾರ ಮೇಲೆ ಆಪಾದನೆ ಮಾಡಿದ್ರು? ಅವರಿಗೆ ಕಾಮನ್‌ಸೆನ್ಸ್ ಏನಾದ್ರೂ ಇದೆಯಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಎಸ್.ಐ.ಟಿ ತನಿಖೆ ನಿಧಾನಗತಿಯಲ್ಲಿದೆ ಎಂಬ ಬಿಜೆಪಿಯ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರಿಗೆ ತಲೆಕೆಡಿಸಿಕೊಂಡು ರಾಜಕೀಯ ಮಾಡುವುದಷ್ಟೇ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ತಲೆ ಕಡೀರಿ, ತೊಡೆ ಮುರಿಯಿರಿ ಇವೆಲ್ಲ ಬಿಜೆಪಿಯವ್ರ ಭಾಷೆ:

ಧರ್ಮಸ್ಥಳ ಚಲೋ ನಾಲ್ಕು ದಿನ, ಚಾಮುಂಡೇಶ್ವರಿ ಚಲೋ ಎರಡು ದಿನ, ಮದ್ದೂರು ಚಲೋ ನಾಲ್ಕು ದಿನ ಇಷ್ಟೇನಾ ಬಿಜೆಪಿಯವರಿಗೆ ಬರುವುದು? ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ NDRF ನಿಯಮ ಸರಿಪಡಿಸಿ ಅಂತ ಮೋದಿಗೆ ಕೇಳುವುದು ಬಿಟ್ಟು ಆ ಚಲೋ.. ಈ ಚಲೋ ಮಾಡ್ತಾರೆ. ತಲೆ ಕಡೀರಿ, ತೊಡೆ ಮುರಿಯಿರಿ ಇವೆಲ್ಲ ಬಿಜೆಪಿಯವರ ಬಾಯಲ್ಲಿ ಬರೋ ಮಾತುಗಳು. ಇವರು ತಮ್ಮ ಮಕ್ಕಳ ಜೊತೆ ಡೈನಿಂಗ್ ಟೇಬಲ್‌ ಅಲ್ಲಿ ಊಟ ಮಾಡುವಾಗ ತಮ್ಮ ಮಕ್ಕಳಿಗೆ ಈ ರೀತಿ ಹೇಳ್ತಾರಾ? ಮಗಾ ನೀನು ಮಚ್ಚು ಹಿಡಿ, ತಲೆ ಕಡಿ, ತೊಡೆ ಮುರಿ ಅಂತ ತಮ್ಮ ಮಕ್ಕಳಿಗೂ ಹೇಳ್ತಾರಾ? ಬಿಜೆಪಿಯವರು ತಮ್ಮ ಮಕ್ಕಳಿಗೆ ಲಾಂಗು, ಚಾಕು ಚೂರಿ ಕೊಟ್ಟಿದ್ದಾರಾ? ಏನು ಬಾಷೆರೀ ಇವರದ್ದು? ಈ ರೀತಿ ಮಾತಾಡಿ ಏನು ಸಾಧನೆ ಮಾಡಲು ಹೊರಟಿದ್ದಾರೆ ಇವರು? ಕರ್ನಾಟಕವನ್ನು ಯುಪಿ, ಬಿಹಾರ ಮಾಡಲು ಹೊರಟಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.

ಆ ಸಿಟಿ ರವಿ, ಪ್ರತಾಪ್ ಸಿಂಹ ಹಾಗೂ ಇತರ ಬಾಡಿಗೆ ಬಾಷಣಕಾರರು ಯಾವತ್ತಾದರೂ ಒಂದು ಸಾರಿ ಅವರ ಮಕ್ಕಳಿಗೆ ಈ ರೀತಿ ಹೇಳಿದ್ದಾರಾ? ಎಲ್ಲಿ ಗಲಾಟೆ ನಡೆಯುತ್ತೋ ? ಎಲ್ಲಿ ಕೋಮು ಗಲಭೆ ಆಗುತ್ತೋ ? ಎಲ್ಲಿ ಶವ ಬೀಳುತ್ತವೆ ಅಲ್ಲೇ ರಾಜಕೀಯ ಮಾಡೋದಷ್ಟೇ ಬಿಜೆಪಿಯವರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರ ಈ ರಾಜಕೀಯ ತಂತ್ರಗಳು ರಾಜ್ಯದ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿವೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಜನತೆಗೆ ಜವಾಬ್ದಾರಿಯುತ ರಾಜಕೀಯದ ಅಗತ್ಯವಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌