
ಸಾಮಾನ್ಯರಿಗೆ ಅನ್ವಯವಾಗುವ ನಿಯಮಗಳು RSSಗೂ ಅನ್ವಯವಾಗಬೇಕು. ನಿಯಮಗಳಿಂದ ವಿನಾಯಿತಿ ಪಡೆಯುವ ನೈತಿಕ ಹಕ್ಕು ಆರ್ಎಸ್ಎಸ್ಗಿಲ್ಲ. ಸಂಘ ಸಂಸ್ಥೆ, ಟ್ರಸ್ಟ್ ರೀತಿ RSS ನೊಂದಣೆಯಾಗಲಿ ಎಂದು ಪ್ರಿಯಾಂಕ್ ಒತ್ತಾಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹಾಗೂ ಆರ್ಎಸ್ಎಸ್ ನಡುವಿನ ವಾಕ್ಸಮರ, ಆರೋಪಗಳು ಇಂದು ನಿನ್ನೆಯದಲ್ಲ. ಇದೀಗ ತೀವ್ರಗೊಂಡಿದೆ. ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ನೋಂದಣಿ, ಆದಾಯ ಮೂಲಕ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಘದ ಕಾನೂನು ಮಾನ್ಯತೆ, ಆದಾಯದ ಮೂಲ.. ಖರ್ಚಿನ ಸ್ಪಷ್ಟತೆ ಕೊಡಿ. ರಾಷ್ಟ್ರೀಯತೆ, ಶಿಸ್ತಿನ ಬಗ್ಗೆ ಮಾತಾಡೋ RSS ಪಾರದರ್ಶಕತೆ ಪ್ರದರ್ಶಿಸಲಿ. ಕಾನೂನು ಪಾಲನೆಯಲ್ಲಿ RSS ಮಾದರಿಯಾಗಲಿ ಎಂದು ಪ್ರಿಯಾಂಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರವೇನು?