ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ: ಸರ್ಕಾರಿ ಜೊತೆಗ ಖಾಸಗಿ ಬಸ್​ ಕೂಡ ಬಂದ್

Published : Dec 13, 2020, 10:08 PM IST
ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ: ಸರ್ಕಾರಿ ಜೊತೆಗ ಖಾಸಗಿ ಬಸ್​ ಕೂಡ ಬಂದ್

ಸಾರಾಂಶ

ಸರ್ಕಾರಿ ಬಸ್​ಗಳಿಲ್ಲದಿದ್ದರೆ ಖಾಸಗಿ ಬಸ್​ನಲ್ಲಿ ಓಡಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅವರಿಗೂ ಈಗ ನಟರಾಜ್​ ಶಾಕ್​..

ಬೆಂಗಳೂರು, (ಡಿ.11): ಇಂದು (ಭಾನುವಾರ) ಸಂಜೆ ಮುಷ್ಕರ ಹಿಂಪಡೆಯುತ್ತೇವೆ ಎಂದು ಘೋಷಿಸಿದ್ದ ಸಾರಿಗೆ ನಿಗಮಗಳ ನೌಕರರ ಸಂಘಟನೆ ನಾಯಕರು, ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್​ನಲ್ಲಿ ವರಸೆ ಬದಲಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ.  ಸೋಮವಾರ ಸರ್ಕಾರಿ ಬಸ್​ಗಳಷ್ಟೇ ಅಲ್ಲ, ಖಾಸಗಿ ಬಸ್​ಗಳೂ ಇರುವುದಿಲ್ಲ. 

ಹೌದು.. ಖಾಸಗಿ ಬಸ್​ ಮಾಲೀಕರ ಸಂಘವು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ಸೋಮವಾರ (ಡಿ.14) ಸರ್ಕಾರಿ ಹಾಗೂ ಖಾಸಗಿ ಬಸ್​ಗಳ ಸಂಚಾರವಿಲ್ಲ ಇಡೀ ರಾಜ್ಯವೇ ಸ್ತಬ್ಧವಾಗಲಿದೆ.

ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು: ಬಸ್ ಬಂದ್...!

ಈ ಬಗ್ಗೆ ಪ್ರತಿಕ್ರಿಯಿಸಿರುವ  ಖಾಸಗಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಹೋರಾಟಗಳು ಬ್ರೋಕರ್​ಗಳ ಕೈಯಲ್ಲಿ ಇರಬಾರದು. ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ಇದು ಸಾರಿಗೆ ಸಚಿವ ಸವದಿಯವರ ವೈಫಲ್ಯ. ನಾವು ಕೊಟ್ಟಿದ್ದ ಹಲವಾರು ಮನವಿಗಳು ಕಸದ ಬುಟ್ಟಿಯಲ್ಲಿವೆ. ಪೊಳ್ಳು ಭರವಸೆಗಳಿಗೆ ಯಾರೂ ಕೂಡ ಬಗ್ಗಬೇಡಿ ಎಂದು ನೌಕರರ ಬಳಿ ಕೋರಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಬಸ್​ಗಳಿಲ್ಲದಿದ್ದರೆ ಖಾಸಗಿ ಬಸ್​ನಲ್ಲಿ ಓಡಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅವರಿಗೂ ಈಗ ನಟರಾಜ್​ ಶಾಕ್​ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ
ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!