10 ಪದಗಳಿಗೆ ಸಿಗುತ್ತೆ 10 ಸಾವಿರ! ನೀವೂ ಟ್ರೈ ಮಾಡಿ

Suvarna News   | Asianet News
Published : Oct 15, 2020, 10:56 AM ISTUpdated : Oct 15, 2020, 11:10 AM IST
10 ಪದಗಳಿಗೆ ಸಿಗುತ್ತೆ 10 ಸಾವಿರ! ನೀವೂ ಟ್ರೈ ಮಾಡಿ

ಸಾರಾಂಶ

ಹನಿಗವನ/ಚುಟುಕು ಸ್ಪರ್ಧೆ | ಬದುಕು/ಜೀವನ ಚುಟುಕು, ಹನಿಗವನ ಬರೆಯುವ ವಿಷಯ | 'ಹತ್ತು' ಪದಗಳಿಗೆ ಸಿಗುತ್ತೆ 'ಹತ್ತು' ಸಾವಿರ 

ನಾನು ನನ್ನ ಗೀಚು ಶೀರ್ಷಿಕೆಯಲ್ಲಿ ಕನ್ನಡ ಹನಿಗವನ, ಚುಟುಕು ಸ್ಪರ್ಧೆಗೆ ಆಹ್ವಾನ ಮಾಡಲಾಗಿದೆ. ಬದುಕು/ಜೀವನದ ಚುಟುಕು, ಹನಿಗವನ ಬರೆಯುವ ವಿಷಯ. ದಕ್ಷಿಣ ಕನ್ನಡದ ಕುಮಾರಪುರ ಪ್ರಕಾಶನ ಗಂಗಾ ಫಾರ್ಮ್ಸ್ ಆಯೋಜಿಸಿರುವ ನಾನು ಮತ್ತು ನನ್ನ ಗೀಚು ಶೀರ್ಷಿಕೆಯಲ್ಲಿ ಕನ್ನಡ ರಾಜ್ಯೋತ್ಸವ-2020 ಹಾಗೂ ಕವಿ, ವಾಗ್ಮಿ, ಬರಹಗಾರಾದ ನಿವೖತ್ತ ಪ್ರಾಚಾರ್ಯ ದಿ.  ಕ.ನೋ.ಗೌ. ರ ಹತ್ತನೇ ವರ್ಷದ ಪುಣ್ಯತಿಥಿ ಸ್ಮರಣಾರ್ಥ ರಾಜ್ಯದ ಕನ್ನಡದ  ಬರಹಗಾರರಿಗೆ ಹನಿಗವನ/ಚುಟುಕು ಸ್ಪರ್ಧೆ ಏರ್ಪಡಿಸಿದೆ.

ಉತ್ಯುತ್ತಮವಾಗಿ ಆಯ್ಕೆ ಯಾದ ಮೊದಲ ಕವನ 10,001/- ರೂ ನಗದು ಹಾಗೂ ಪ್ರಶಸ್ತಿ ಪತ್ರ, ಎರಡನೆಯ ಹಾಗೂ ಮೂರನೆಯ ಬಹುಮಾನವಾಗಿ ತಲಾ ರೂ 5001/- ಹಾಗೂ ರೂ 2001/- ನಗದು ಹಾಗೂ ಪ್ರಶಸ್ತಿ ಪತ್ರ ಪಡೆಯಲಿದೆ.

ರಾಜ್ಯಾದ್ಯಂತ ಸರಳ ದಸರಾ, 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ: ಸರ್ಕಾರದ ಮಾರ್ಗಸೂಚಿ

ಉತ್ತಮವೆಂದು ಕಂಡು ಬಂದ ಮೊದಲ 40 ಬರಹಗಳಿಗೆ ಪ್ರಶಸ್ತಿ ಹಾಗೂ ಹೀಗೆ ಆಯ್ಕೆಯಾದ ಎಲ್ಲ ಹನಿಗವನ/ಚುಟುಕುಗಳನ್ನು ನಾನು ನನ್ನ ಗೀಚು-2020 ಶಿರ್ಷಿಕೆಯಲ್ಲಿ ವರ್ಷಾಂತ್ಯ/ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ.

ನಿಬಂಧನೆಗಳು

1. ಬರಹಗಳನ್ನು ಸ್ವಚ್ಛ ಕನ್ನಡ ಭಾಷೆಯಲ್ಲಿ ಬರೆದಿರಬೇಕು(ಆಂಗ್ಲ ಅಥವಾ ಇತರ ಬೇರೆ ಭಾಷೆಯ ಪದಗಳನ್ನು ಖಡ್ಡಾಯವಾಗಿ ಬಳಸುವಂತಿಲ್ಲ. ಸಂಸ್ಕೖತ ಪದಗಳ ಬದಲಾಗಿ ಕನ್ನಡ ತದ್ಭವ ರೂಪದ ಪದ ಬಳಸಿರಬೇಕು)

2. ಗರಿಷ್ಟ ಹತ್ತು ಪದಗಳು ಯಾ 40 ಅಕ್ಷರಗಳನ್ನು  (ಸರಳ/ಸಂಯುಕ್ತ) ಹೊಂದಿರಬೇಕು.

3. ಬರಹ ಸ್ವಂತದ್ದಾಗಿರಬೇಕು. ಹಿಂದೆಲ್ಲೂ ಪ್ರಕಟವಾಗಿರಬಾರದು. ಕೖತಿ ಚೌರ್ಯಕ್ಕೆ ಆಸ್ಪದವಿಲ್ಲ .
ಬರಹಗಾರೇ ಇದಕ್ಕೆ ನೇರ ಹೊಣೆ. 

4. ಒಬ್ಬರು ಒಂದು ಕವನವನ್ನು ಮಾತ್ರ ಕಳುಹಿಸಬಹುದಾಗಿದೆ.

5. ಬರಹವನ್ನು ಅಚ್ಚುಕಟ್ಟಾಗಿ ಕನ್ನಡ ಕಂಪ್ಯೂಟರ್ ಅಕ್ಷರಗಳಲ್ಲಿ ಬಿಳಿ ಹಾಳೆಯಲ್ಲಿ ಮುದ್ರಿಸಿ ನೇರವಾಗಿ
"ನಾನು ನನ್ನ ಗೀಚು, ಕುಮಾರಪುರ ಪ್ರಕಾಶನ, ಗಂಗಾ ಫಾರ್ಮ್ಸ್, ಕೊಂಬಾರು ಅಂಚೆ ದ.ಕ.574230 ಅಥವಾ ಶ್ರೀ ಕಾರ್ತಿಕ್ ಪಿ.ಕೆ ಇವರ  ಕನ್ನಡ ಸಾಹಿತ್ಯ (kannadasahithya) ಇನ್ಸ್ಟಗ್ರಾಂ  ಪುಟವನ್ನು ಫಾಲೋ ಮಾಡಿ ಸಂದೇಶ ಬಾಕ್ಸಿಗೆ/Direct Message ಹಾಕಿ ಅಥವಾ  ಮುಖಪುಟದ (ಫೇಸ್ ಬುಕ್)ನ ನಾನು ನನ್ನ ಗೀಚು ಬ್ಲಾಗ್ ನ್ನು ಫಾಲೋಮಾಡಿ  ಕಮೆಂಟ್ಸ್ ಬಾಕ್ಸ್ ಗೆ ಹಾಕುವುದು ಅಥವಾ ವಾಟ್ಸಪ್ ಸಂಖ್ಯೆ *9019941619 ಕ್ಕೆ,   ನಿಮ್ಮ ಹೆಸರು ಮತ್ತು ವಾಟ್ಸಪ್ ಸಂಖ್ಯೆ ಅಥವಾ ಇ ಮೈಲ್ ನ್ನು  ಕೊನೆಯಲ್ಲಿ/ ಪ್ರತ್ಯೇಕವಾಗಿ ಬರೆದು ಕಳುಹಿಸಬೇಕು. (ಆಯ್ಕೆ ಮಂಡಳಿಗೆ ನಿಮ್ಮ ಬರಹಗಳನ್ನು ಆಯ್ಕೆಗಾಗಿ ನೀಡುವಾಗ ಹೆಸರು ರಹಿತ ವಾಗಿ ನೀಡಲು ನಮಗೆ ಸಾದ್ಯವಾಗುವಂತಿರಬೇಕು).

 6. ಯಾರೂ ಭಾಗವಹಿಸಬಹುದು. ಇಲ್ಲಿ  ಯಾವುದೇ ವಯೋಮಿತಿ ಇರುವುದಿಲ್ಲ. 

7. ಐವರು ಸದಸ್ಯರ ಆಯ್ಕೆ ಮಂಡಳಿಯ ತೀರ್ಮಾನವೇ ಅಂತಿಮ.

8. ಮೇಲಿನ ನಿಬಂಧನೆಗೊಳಪಟ್ಟು ನಮಗೆ ತಲುಪಿದ  ಕವನಗಳನ್ನು ಮಾತ್ರ ಆಯ್ಕೆಮಂಡಳಿಗೆ ಆಯ್ಕೆಗೆ ನೀಡಲಾಗುವುದು. 
ಹೀಗೆ ಪ್ರಥಮ ಹಂತದಲ್ಲಿ ತಿರಸ್ಕೖತವಾದ ಬರಹಗಳ ಬಗ್ಗೆ ಬರಹಗಾರರಿಗೆ ಆದಷ್ಟು ಬೇಗ  ಮಾಹಿತಿ ನೀಡಲಾಗುವುದು.

9. ಪ್ರತಿ ಬರಹಗಳಿಗೂ,  ಪ್ರತಿ ಆಯ್ಕೆಗಾರರುಾ, ಪ್ರತ್ಯೇಕವಾಗಿ

ಅರ್ಥಪೂರ್ಣ, ಪ್ರಾಸ ಬದ್ಧ, ಸಂದೇಶಾತ್ಮಕ, ಭಾವಪೂರ್ಣ, ಹೊಸತನ/ಸಮಗ್ರ, ಹೀಗೆ ಐದು ವಿಭಾಗಗಳಲ್ಲಿ ತಲಾ 10 ಅಂಕಗಳನ್ನು ನೀಡಲಿದ್ದು ಐವರು ಆಯ್ಕೆಗಾರರು ಬೇರೆ ಬೇರೆ ಯಾಗಿಯೇ  ಅವೆಲ್ಲವುಗಳ ಮೇಲೆ  ನೀಡಿದ ಅಂಕಗಳ  ಒಟ್ಟಾರೆ ಸರಾಸರಿ ಅಂಕಗಳನ್ನು ಪರಿಗಣಿಸಿ ಬಹುಮಾನ ಆಯ್ಕೆ ಪ್ರಕ್ರಿಯೆ ನಡಯಲಿದೆ.

10.  ಬರಹಗಳು ದಿನಾಂಕ 24.10.2020 ಒಳಗೆ ತಲುಪಬೇಕು.

11. ಯಾವುದೇ ಅನಗತ್ಯ ಚರ್ಚೆ, ಸಂಪರ್ಕ ಯಾ ಸಂಭಾಷಣೆಗಳಿಗೆ ಅವಕಾಶವಿಲ್ಲ.

12. ತೀರ್ಪನ್ನು ನವಂಬರ್  19,  2020 ರಂದು  ಪ್ರಕಟಿಸಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ