ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!

Published : Jun 08, 2026, 08:16 PM IST

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ ! - ಗಗನಕ್ಕೇರಿದ ಗ್ಯಾಸ್.. ಸೆಂಚುರಿ ಸಿಡಿಸಿರೋ ಪೆಟ್ರೋಲ್.. ನಾಟೌಟ್ ! - ಚುನಾವಣೆ ಬಳಿಕ ನರಕದರ್ಶನ.. ಬೆಲೆ ರುದ್ರತಾಂಡವ ! - ದುಬಾರಿ ದುನಿಯಾ.

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ ! - ಗಗನಕ್ಕೇರಿದ ಗ್ಯಾಸ್.. ಸೆಂಚುರಿ ಸಿಡಿಸಿರೋ ಪೆಟ್ರೋಲ್.. ನಾಟೌಟ್ ! - ಚುನಾವಣೆ ಬಳಿಕ ನರಕದರ್ಶನ.. ಬೆಲೆ ರುದ್ರತಾಂಡವ ! - ದುಬಾರಿ ದುನಿಯಾ.. ಬೆಲೆ ಏರಿಕೆ ಸಂಕಷ್ಟ. ಭಾರತದಲ್ಲಿ ಪಂಚರಾಜ್ಯ ಚುನಾವಣೆ ಬಳಿಕ ಬೆಲೆ ಏರಿಕೆಯ ಸುನಾಮಿ ಎದ್ದಿದೆ.. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗ್ತಿದ್ದು, ಗ್ರಾಹಕನ ಹೊರೆ ಜಾಸ್ತಿಯಾಗ್ತಾನೆ ಇದೆ. ಇಷ್ಟು ದಿನ ಪೆಟ್ರೋಲ್​​ ಹಾಗೂ ಡೀಸೆಲ್​​ ಬೆಲೆಯ ಹೊರೆಯನ್ನು ಹೊರುತ್ತಿದ್ದ ಗ್ರಾಹಕ ಇದೀಗ ಸಿಲಿಂಡರ್​​​ ಭಾರವನ್ನು ಅನಿವಾರ್ಯವಾಗಿ ಎತ್ತಲೆಬೇಕಾಗಿದೆ.. ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಬಾರೀ ವಾಣಿಜ್ಯ ಸಿಲಿಂಡರ್​​ ಬೆಲೆ ಏರಿಕೆಯಾಗಿತ್ತು.

ಇದೀಗ ಗೃಹ ಬಳಕೆ ಸಿಲಿಂಡರ್​​ ಬೆಲೆ ಏರಿಸಿ ಗ್ರಾಹಕನ ಹೊರೆಯನ್ನ ಇನ್ನಷ್ಟು ಜಾಸ್ತಿ ಮಾಡಲಾಗಿದೆ.. ಚುನಾವಣೆ ಬಳಿಕದ ಈ ಬೆಳವಣಿಗೆಗೆ ಜನ್ರು ಕೆಂಡ ಕಾರ್ತಿದ್ದಾರೆ. ಇಂಧನ ದರ ಏರಿಕೆಯಿಂದ ಭಾರತೀಯನ ಪರಿಸ್ಥಿತಿ ಹೇಗಾಗಿದೆ ಅನ್ನೋದನ್ನ.. ಪೆಟ್ರೊಲ್​​​, ಡೀಸೆಲ್​ ಹೊರೆ ಹೊರುತ್ತಿರುವಾಗಲೇ ಸಿಲಿಂಡರ್​​ ಭಾರವನ್ನು ಗ್ರಾಹಕನ ಮೇಲೆ ಹಾಕಲಾಗಿದೆ.. ಇಷ್ಟೆ ಅಲ್ಲ,  ಚುನಾವಣೆ ಬಳಿಕ ಇನ್ನು ಯವ್ಯಾವ ಭಾರವನ್ನು ಹೊರ್ತಿದ್ದಾನೆ. ಭಾರತದಲ್ಲಿ ಪಂಚ ರಾಜ್ಯ ಚುನಾವಣೆ ಬಳಿಕ ಕೇವಲ ಇಂಧನದ ಬೆಲೆ ಮಾತ್ರವೇ ಜಾಸ್ತಿಯಾಗಿಲ್ಲ.. ಇಂಧನ ಬೆಲೆಯಿಂದಾಗಿ ಪ್ರತಿಯೊಂದು ವಸ್ತುವಿನ ಮೂಲ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಇದ್ರಿಂದ ಬಹುತೇಕ ಮೂಲಭೂತ ವಸ್ತಗಳು ಬೆಲೆ ಜಾಸ್ತಿಯಾಗಿದೆ.. ಯಾವ್ಯಾವು ಹೆಚ್ಚಾಗಿದೆ.. ಇದನ್ನ ಕಂಟ್ರೋಲ್​​ ಮಾಡೋಕ್ಕೆ ಕೇಂದ್ರ ಸರ್ಕಾರ ಏನು ಮಾಡ್ತಿದೆ. ಭಾರತ ಮಾತ್ರವೇ ಈ ಒಂದು ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿಲ್ಲ... ಜಾಗತಿಕವಾಗಿಯೇ ಇಂತಹದೊಂದು ಸಮಸ್ಯೆ ತಲೆದೂರಿದೆ. ಭಾರತದಲ್ಲಿ ಇಂಧನ ದರ ಏರಿಕೆ ಭಾರೀ ಸದ್ದು ಮಾಡ್ತಿದೆ.. ಹಾಗಂತ ಇಂಡಿಯಾದಲ್ಲಿ ಮಾತ್ರವೇ ಇಂಧನದ ದರ ಏರಿಕೆಯಾಗಿಲ್ಲ.. ಜಾಗತಿಕ ಮಟ್ಟದಲ್ಲಿಯೇ ಇದ್ರ ಬೆಲೆ ಏರಿಕೆಯಾಗಿದೆ.. ಯಾವಾಗ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಯ್ತೋ ಆಗಿನಿಂದಲೇ ಜಾಗತಿಕ ಆರ್ಥಿಕತೆಯ ಸ್ಥಿತಿ ತಲ್ಲಣವಾಗೋದಕ್ಕೆ ಶುರುವಾಗಿದೆ. 

21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
Read more