ಮರಿಯಾನೆ ಜತೆ ಸೆಲ್ಫಿಗೆ ಮುಗಿಬಿದ್ದ ಜನತೆ!

Published : Jan 28, 2020, 12:01 PM ISTUpdated : Jan 28, 2020, 12:11 PM IST
ಮರಿಯಾನೆ ಜತೆ ಸೆಲ್ಫಿಗೆ ಮುಗಿಬಿದ್ದ ಜನತೆ!

ಸಾರಾಂಶ

ಮರಿಯಾನೆ ಜತೆ ಸೆಲ್ಫಿಗೆ ಮುಗಿಬಿದ್ದರು| ತಮಿಳುನಾಡಿನ ಶ್ಯಾನಮಾವು ಬಳಿಯ ಕೆರೆಯಂಗಳದಲ್ಲಿ ಘಟನೆ

ಆನೇಕಲ್‌[ಜ.28]: ಹಿಂಡಿನಿಂದ ಬೇರ್ಪಟ್ಟಮರಿಯಾನೆಯೊಂದು ತಮಿಳುನಾಡಿನ ಶ್ಯಾನಮಾವು ಬಳಿಯ ಕೆರೆಯಂಗಳದಲ್ಲಿ ಸೋಮವಾರ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಜನ ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಸುಮಾರು ಎರಡು ವರ್ಷದ ಆನೆ ಮರಿಯೊಂದು ಕೆರೆ ಅಂಗಳದಲ್ಲಿ ಓಡಾಡಿಕೊಂಡು ನೀರನ್ನು ತನ್ನ ಮೈಮೇಲೆ ಹಾಕಿಕೊಳ್ಳುತ್ತಾ, ಆಟವಾಡುತ್ತಿತ್ತು. ಈ ಮನಮೋಹಕ ದೃಶ್ಯವನ್ನು ಕಂಡ ಗ್ರಾಮಸ್ಥರು ಆನೆ ಮರಿಯ ಸಮೀಪಕ್ಕೆ ಹೋಗಲು ಯತ್ನಿಸಿದ್ದಾರೆ. ಸ್ವಲ್ಪ ವಿಚಲಿತವಾದ ಆನೆ ಮರಿ ಅತ್ತ-ಇತ್ತ ಓಡಲು ಶುರು ಮಾಡಿತು.

ಜಂಟಲ್‌ಮನ್ ಆನೆಗಳಿಗೆ ದಾರಿ ಬಿಡುವುದು ಮನುಷ್ಯನ ಕರ್ತವ್ಯ: ಸುಪ್ರೀಂಕೋರ್ಟ್!

ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿದ ಸ್ಥಳೀಯರು ಆನೆ ಮರಿ ರಕ್ಷಿಸುವಂತೆ ತಿಳಿಸಿದ್ದಾರೆ. ಆದರೆ ಸಂಜೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದತ್ತ ಸುಳಿಯಲಿಲ್ಲ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!