ಡ್ರಗ್ಸ್‌ ಮಾಫಿಯಾ: ಪೊಲೀಸರಿಗೆ ಬೆಚ್ಚಿ ನಗರ ತೊರೆದ ಪಾರ್ಟಿ ಶೂರರು

Kannadaprabha News   | Asianet News
Published : Sep 04, 2020, 07:51 AM ISTUpdated : Sep 04, 2020, 09:34 AM IST
ಡ್ರಗ್ಸ್‌ ಮಾಫಿಯಾ: ಪೊಲೀಸರಿಗೆ ಬೆಚ್ಚಿ ನಗರ ತೊರೆದ ಪಾರ್ಟಿ ಶೂರರು

ಸಾರಾಂಶ

ರವಿಶಂಕರ್‌ ಸೆರೆ ಬಳಿಕ ‘ಪೇಜ್‌-3’ ಪಾರ್ಟಿ ಆಯೋಜಕರು ಕಾಣೆ| ರಂಗುರಂಗಿನ ಪಾರ್ಟಿಗಳಿಗೆ ಡ್ರಗ್ಸ್‌ ಸಪ್ಲೈ ಮಾಡುತ್ತಿದ್ದ ಆಯೋಜಕರು| ಪಾರ್ಟಿಗಳಿಗೆ ಸಿನಿಮಾ ತಾರೆಯರು, ರಾಜಕಾರಣಿಗಳ ಹಾಗೂ ಉದ್ಯಮಿಗಳ ಪುತ್ರರು ಸೇರಿದಂತೆ ಶ್ರೀಮಂತರು ಆಹ್ವಾನಿತರಾಗುತ್ತಿದ್ದರು| 

ಬೆಂಗಳೂರು(ಸೆ.04): ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಜಾಲ ನಂಟು ಪ್ರಕರಣದಲ್ಲಿ ರಾಗಿಣಿ ಸ್ನೇಹಿತ ರವಿಶಂಕರ್‌ ಸಿಸಿಬಿ ಬಲೆಗೆ ಬಿದ್ದ ಬೆನ್ನೆಲ್ಲೇ ಭೀತಿಗೊಂಡ ಹಲವು ‘ಪೇಜ್‌-3’ ಪಾರ್ಟಿ ಆಯೋಜಕರು ನಗರ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.

ಪಂಚತಾರ ಹೋಟೆಲ್‌, ಪಬ್‌, ಕ್ಲಬ್‌, ನಗರ ಹೊರವಲಯಗಳ ರೆಸಾರ್ಟ್‌ ಹಾಗೂ ಫಾರ್ಮ್‌ ಹೌಸ್‌ಗಳಲ್ಲಿ ಪಾರ್ಟಿಗಳನ್ನು ಕೆಲವರು ಆಯೋಜಿಸುತ್ತಿದ್ದರು. ಈ ಪಾರ್ಟಿಗಳಿಗೆ ಸಿನಿಮಾ ತಾರೆಯರು, ರಾಜಕಾರಣಿಗಳ ಹಾಗೂ ಉದ್ಯಮಿಗಳ ಪುತ್ರರು ಸೇರಿದಂತೆ ಶ್ರೀಮಂತರು ಆಹ್ವಾನಿತರಾಗುತ್ತಿದ್ದರು. ರಂಗು ರಂಗಿನ ಔತಣಕೂಟದಲ್ಲಿ ಅತಿಥಿಗಳಿಗೆ ಆಯೋಜಕರು ಮಾದಕ ವಸ್ತು ಪೂರೈಸುತ್ತಿದ್ದರು. ಹೀಗೆ ಅಮಲೇರಿಸಿಕೊಂಡ ಕೆಲವರಿಗೆ ಸಿಸಿಬಿ ತನಿಖೆ ಭಯ ಶುರುವಾಗಿದೆ ಎಂದು ಮೂಲಗಳು ಹೇಳಿವೆ.

RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು!

ಮಾದಕ ವಸ್ತು ದಂಧೆ ಪ್ರಕರಣದಲ್ಲಿ ನಟಿಯರಾದ ರಾಗಿಣಿ, ಸಂಜನಾ, ಶರ್ಮಿಳಾ ಮಾಂಡ್ರೆಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ರಾಗಿಣಿ ಸ್ನೇಹಿತ ರವಿಶಂಕರ್‌ ಬಂಧನವಾಗಿದ್ದು, ಮತ್ತಿಬ್ಬರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ರವಿಶಂಕರ್‌, ರಾಹುಲ್‌ ಹಾಗೂ ಕಾರ್ತಿಕ್‌ ರಾಜ್‌ ಅವರು ಪಾರ್ಟಿಗಳನ್ನು ಆಯೋಜಿಸುವಲ್ಲಿ ಪ್ರಮುಖರಾಗಿದ್ದರು. ಹೀಗಾಗಿ ಪೇಜ್‌ ತ್ರಿ ಪಾರ್ಟಿಗಳಲ್ಲಿ ಮೋಜು ಮಸ್ತಿ ಮಾಡಿದವರ ಮನದಲ್ಲಿ ತನಿಖೆ ಢವಢವ ಶುರುವಾಗಿದೆ ಎಂದು ತಿಳಿದು ಬಂದಿದೆ.
ತಮಿಳುನಾಡು, ಕೇರಳ, ಮುಂಬೈ ಹಾಗೂ ಹೈದರಾಬಾದ್‌ ಸೇರಿದಂತೆ ಹೊರ ರಾಜ್ಯಗಳಿಗೆ ಪಲಾಯನಗೊಂಡಿದ್ದಾರೆ. ರವಿಶಂಕರ್‌ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ಆಯುಕ್ತರಿಂದ ತನಿಖಾ ಪ್ರಗತಿ ಸಭೆ

ಮಾದಕ ವಸ್ತು ಜಾಲದ ಪ್ರಕರಣ ಸಂಬಂಧ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು, ಪ್ರಕರಣದ ತನಿಖೆ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಆಯುಕ್ತರು, ಸಿಸಿಬಿ ವಶದಲ್ಲಿದ್ದ ರವಿಶಂಕರ್‌, ರಾಹುಲ್‌ ಹಾಗೂ ಕಾರ್ತಿಕ್‌ ರಾಜ್‌ ಅವರನ್ನು ಸಹ ವಿಚಾರಣೆ ನಡೆಸಿದ್ದಾರೆ. ಬಳಿಕ ಪ್ರಕರಣದ ಕುರಿತು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌, ಡಿಸಿಪಿ ಕೆ.ಪಿ.ರವಿಕುಮಾರ್‌, ಎಸಿಪಿ ಗೌತಮ್‌ ಕುಮಾರ್‌ ಅವರೊಂದಿಗೆ ಚರ್ಚಿಸಿದ ಆಯುಕ್ತರು, ಡ್ರಗ್ಸ್‌ ಜಾಲದ ಮಟ್ಟ ಹಾಕಬೇಕು. ತನಿಖೆ ಸೂಕ್ತವಾಗಿ ನಡೆಸಿ ಎಂದು ಸೂಚಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!