67,500 ರು.ಗಿಂತ ಹೆಚ್ಚು ಸಂಬಳದ ನೌಕರರಿಗಷ್ಟೇ ದೂರವಾಣಿ ಸೌಲಭ್ಯ!

Published : Dec 17, 2019, 08:05 AM IST
67,500 ರು.ಗಿಂತ ಹೆಚ್ಚು ಸಂಬಳದ ನೌಕರರಿಗಷ್ಟೇ ದೂರವಾಣಿ ಸೌಲಭ್ಯ!

ಸಾರಾಂಶ

67,500 ರು.ಗಿಂತ ಹೆಚ್ಚು ಸಂಬಳದ ನೌಕರರಿಗಷ್ಟೇ ಸರ್ಕಾರಿ ದೂರವಾಣಿ| ಮಿತವ್ಯಯಕ್ಕಾಗಿ ಆರ್ಥಿಕ ಇಲಾಖೆ ಆದೇಶ

ಬೆಂಗಳೂರು[ಡಿ.17]: ಸರ್ಕಾರದ ಆಡಳಿತ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವ ಕಾರಣ ನೀಡಿ 67,500 ರು.ಗಳಿಗಿಂತ ಹೆಚ್ಚು ವೇತನ ಶ್ರೇಣಿ ಉಳ್ಳವರಿಗೆ ಮಾತ್ರ ಕಚೇರಿಯಲ್ಲಿ ಸರ್ಕಾರಿ ದೂರವಾಣಿ ಹೊಂದಲು ಅವಕಾಶ ನೀಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಅಲ್ಲದೆ, ಕಚೇರಿಗೆ ಸರ್ಕಾರಿ ದೂರವಾಣಿ ಹೊಂದಲು ಕನಿಷ್ಠ 67,550 -1,04,600 ರು. ವೇತನ ಶ್ರೇಣಿ ಹೊಂದಿರಬೇಕು ಎಂದು ತಿಳಿಸಿದೆ. ಉಳಿದಂತೆ, 74,400-1,09,600 ರು. ಹಾಗೂ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಹೊಂದಿರುವವರು ಮಾತ್ರ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅರ್ಹರಿರುತ್ತಾರೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ಮತ್ತು ಸಂಪನ್ಮೂಲ ವಿಭಾಗದ ಸರ್ಕಾರದ ಉಪ ಕಾರ್ಯದರ್ಶಿ ಪವನ್‌ ಕುಮಾರ್‌ ಮಾಪಲಾಟಿ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್‌ನಲ್ಲಿ ಹೊರಡಿಸಿರುವ ಈ ಆದೇಶ 2019ರ ಏಪ್ರಿಲ್‌ನಿಂದ ಪೂರ್ವಾನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರವಾಣಿ ಶುಲ್ಕದಿಂದ ಆಗುತ್ತಿರುವ ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರಿ ಅಧಿಕಾರಿಗಳು ಕಚೇರಿ ಹಾಗೂ ನಿವಾಸದ ದೂರವಾಣಿ ಹೊಂದುವ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲಾಗಿದೆ.

ಈ ಮೊದಲು 36,300-53,850 ರು. ವೇತನ ಶ್ರೇಣಿಗಿಂತ ಮೇಲ್ಪಟ್ಟು ವೇತನ ಉಳ್ಳವರಿಗೆ ಕಚೇರಿ ದೂರವಾಣಿ ಹಾಗೂ 40,050 - 56,550 ರು. ಹಾಗೂ ಅದಕ್ಕಿಂತ ಮೇಲ್ಪಟ್ಟಶ್ರೇಣಿಯವರಿಗೆ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅವಕಾಶವಿತ್ತು.

ಇದೀಗ 67,550-1,04,600 ರು. ಅಥವಾ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಉಳ್ಳ ಸರ್ಕಾರಿ ಅಧಿಕಾರಿಗಳಿಗೆ ಮಾತ್ರವೇ ಕಚೇರಿ ದೂರವಾಣಿ ಹೊಂದಲು ಅರ್ಹರಿರುತ್ತಾರೆ. ಉಳಿದಂತೆ, 74,400-1,09,600 ರು. ಹಾಗೂ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಹೊಂದಿರುವವರು ಮಾತ್ರ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅರ್ಹರಿರುತ್ತಾರೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ಮತ್ತು ಸಂಪನ್ಮೂಲ ವಿಭಾಗದ ಸರ್ಕಾರದ ಉಪ ಕಾರ್ಯದರ್ಶಿ ಪವನ್‌ ಕುಮಾರ್‌ ಮಾಪಲಾಟಿ ಆದೇಶ ಹೊರಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌