Road patholes: ವರ್ಷದ ಮೊದಲ ದಿನಕ್ಕೆ ‘ಗುಂಡಿ ಮುಕ್ತ ರಸ್ತೆ’ ಪಾಲಿಕೆ ಟಾಸ್ಕ್ ಠುಸ್

Published : Jan 02, 2023, 10:25 AM ISTUpdated : Jan 02, 2023, 10:28 AM IST
Road patholes:  ವರ್ಷದ ಮೊದಲ ದಿನಕ್ಕೆ ‘ಗುಂಡಿ ಮುಕ್ತ ರಸ್ತೆ’ ಪಾಲಿಕೆ ಟಾಸ್ಕ್ ಠುಸ್

ಸಾರಾಂಶ

: ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ವಾರು ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಮಾಡುವುದಾಗಿ ಹೇಳಿದ ಬಿಬಿಎಂಪಿಯು ಒಂದೇ ಒಂದು ರಸ್ತೆಯನ್ನು ಗುಂಡಿ ಮುಕ್ತಗೊಳಿಸಿ ಘೋಷಿಸಿಲ್ಲ.

ಬೆಂಗಳೂರು (ಜ.2) : ಹೊಸ ವರ್ಷಕ್ಕೆ ಬೆಂಗಳೂರಿನ ಮುಖ್ಯರಸ್ತೆ ವಾರು ಹಾಗೂ ವಲಯವಾರು ರಸ್ತೆಗಳ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆಗೆ ಮಾಡುವುದಾಗಿ ಹೇಳಿದ ಬಿಬಿಎಂಪಿಯು ಒಂದೇ ಒಂದು ರಸ್ತೆಯನ್ನು ಗುಂಡಿ ಮುಕ್ತಗೊಳಿಸಿ ಘೋಷಿಸಿಲ್ಲ.

ಕಳೆದ ವರ್ಷ ಮೇ ತಿಂಗಳಿನಿಂದ ನವೆಂಬರ್‌ವರೆಗೆ ನಗರದ ರಸ್ತೆಗಳಲ್ಲಿ 32 ಸಾವಿರ ಗುಂಡಿಗಳು(Road patholes) ಸೃಷ್ಟಿಯಾಗಿ ನವೆಂಬರ್‌ ಅಂತ್ಯದ ವೇಳೆಗೆ ಎಲ್ಲ ಗುಂಡಿಗಳನ್ನು ಮುಚ್ಚಲಾಗಿತ್ತು. ಕೆಲವು ಕಡೆಗಳಲ್ಲಿ ಇಡೀ ರಸ್ತೆಯನ್ನೇ ಮರು ಡಾಂಬರೀಕರಣ ಮಾಡಲಾಗಿತ್ತು. ದುರಸ್ತಿ ಮಾಡಿದ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. ಎಲ್ಲ ಗುಂಡಿಗಳನ್ನು ಮುಚ್ಚಿ ಹೊಸ ವರ್ಷಕ್ಕೆ ಮುಖ್ಯ ರಸ್ತೆವಾರು ಹಾಗೂ ವಲಯವಾರು ‘ರಸ್ತೆ ಗುಂಡಿ ಮುಕ್ತ’ ಎಂದು ಘೋಷಣೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ, ಗುಂಡಿ ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಯಾವುದೇ ರಸ್ತೆ ಮತ್ತು ವಲಯವನ್ನು ಗುಂಡಿ ಮುಕ್ತ ಎಂದು ಘೋಷಿಣೆ ಮಾಡಲು ಸಾಧ್ಯವಾಗಿಲ್ಲ.

Bengaluru: ಬಳ್ಳಾರಿ ರಸ್ತೆಗಾಗಿ 54 ಮರಕ್ಕೆ ಕೊಡಲಿ: ನಾಗರಿಕರು ಬೇಸರ

ಆ್ಯಪ್‌ ಜನರ ಬಳಕೆಗೆ ಇಲ್ಲ

ಜತೆಗೆ ರಸ್ತೆ ಗುಂಡಿ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸುವುದಕ್ಕೆ ಸಿದ್ಧಪಡಿಸಲಾಗಿರುವ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪನ್ನು ಜನವರಿ 1ರಂದು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿತ್ತು. ನಗರದ ಮೆಜೆಸ್ಟಿಕ್‌, ಯಶವಂತಪುರ, ರಾಜಾಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆಯ ಸಿಸಿಬಿ ಜಂಕ್ಷನ್‌, ಗವಿಪುರ ಸೇರಿದಂತೆ ಮೊದಲಾದ ಕಡೆ ಇನ್ನೂ ರಸ್ತೆಗಳು ಬಾಯ್ದೆರೆದಿವೆ. ಹೀಗಾಗಿ, ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪನ್ನು ಸಾರ್ವಜನಿಕರ ಬಳಕೆಗೆ ಬಿಬಿಎಂಪಿ ನೀಡಿಲ್ಲ.

Bengaluru News: ಹೆಬ್ಬಾಳ ಫ್ಲೈಓವರ್‌ ವಿಸ್ತರಣೆ ಕೊನೆಗೂ ಶುರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ