ನಾಗ​ರ​ಪಂಚ​ಮಿಗೂ ಕೊರೋನಾ ಭೀತಿ, ಕುಕ್ಕೆ​ಯಲ್ಲಿ ಪ್ರವೇ​ಶವಿಲ್ಲ!

Kannadaprabha News   | Asianet News
Published : Jul 25, 2020, 10:39 AM ISTUpdated : Jul 25, 2020, 10:53 AM IST
ನಾಗ​ರ​ಪಂಚ​ಮಿಗೂ ಕೊರೋನಾ  ಭೀತಿ, ಕುಕ್ಕೆ​ಯಲ್ಲಿ ಪ್ರವೇ​ಶವಿಲ್ಲ!

ಸಾರಾಂಶ

ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹು​ತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನ​ವಾದ ಶನಿ​ವಾರ ಸಾರ್ವ​ಜ​ನಿ​ಕ​ವಾಗಿ ನಾಗಾ​ರಾ​ಧ​ನೆ ನಿಷೇ​ಧಿ​ಸ​ಲಾ​ಗಿ​ದೆ.

ಬೆಂಗ​ಳೂ​ರು(ಜು.25): ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹು​ತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನ​ವಾದ ಶನಿ​ವಾರ ಸಾರ್ವ​ಜ​ನಿ​ಕ​ವಾಗಿ ನಾಗಾ​ರಾ​ಧ​ನೆ ನಿಷೇ​ಧಿ​ಸ​ಲಾ​ಗಿ​ದೆ.

ನಾಗಾ​ರಾ​ಧ​ನೆಯ ಪವಿತ್ರ ಕ್ಷೇತ್ರ​ವಾದ ಕುಕ್ಕೆ​ಸು​ಬ್ರ​ಹ್ಮ​ಣ್ಯ​ದಲ್ಲಿ ಭಕ್ತರ ಪ್ರವೇಶ ನಿರ್ಬಂಧಿ​ಸ​ಲಾ​ಗಿದೆ. ಕುಕ್ಕೆ ಸೇರಿ​ದಂತೆ ಬಹು​ತೇಕ ದೇವ​ಸ್ಥಾ​ನ​ಗ​ಳಲ್ಲಿ ಕೇವಲ ಅರ್ಚ​ಕರು, ಸಿಬ್ಬಂದಿ ಉಪ​ಸ್ಥಿ​ತಿ​ಯಲ್ಲಷ್ಟೇ ನಾಗ​ದೇ​ವ​ರಿಗೆ ವಿಶೇಷ ಪೂಜೆ ನೆರ​ವೇ​ರ​ಲಿ​ದೆ.

ರಮೇಶ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಸಭೆ: ವಿಶ್ವನಾಥ್‌, ಯೋಗೇಶ್ವರ್‌ ಸಚಿವ ಸ್ಥಾನದ ಬಗ್ಗೆ ಚರ್ಚೆ

ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಾಗರ ಪಂಚಮಿಯ ಭಕ್ತಿ- ಸಂಭ್ರಮಕ್ಕೆ ಪ್ರತಿವರ್ಷ ಸಾಕ್ಷಿಯಾಗುತ್ತಿದ್ದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತ ಪದ್ಮನಾಭ ದೇವಾಲಯ ಸೇರಿ ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶ​ನಕ್ಕೆ ನಿರ್ಬಂಧ ವಿಧಿ​ಸ​ಲಾ​ಗಿ​ದೆ. ಆದರೆ ಸಿಬ್ಬಂದಿ ಉಪ​ಸ್ಥಿ​ತಿ​ಯ​ಲ್ಲಿ ನಾಗ ದೇವರಿಗೆ ಯಥಾಪ್ರಕಾರ ಪೂಜೆ-ಪುನ​ಸ್ಕಾ​ರ ನೆರವೇರಲಿದೆ.

ಬೆಂಗ​ಳೂರು ಸಮೀ​ಪದ ಪ್ರಮುಖ ನಾಗಾ​ರಾ​ಧ​ನೆಯ ಕೇಂದ್ರ ಘಾಟಿ​ಸು​ಬ್ರ​ಹ್ಮಣ್ಯ ದೇಗು​ಲ​ದ​ಲ್ಲಿ ಸಾರ್ವ​ಜ​ನಿ​ಕ​ರಿಗೆ ದೇವರ ದರ್ಶ​ನ​ಕ್ಕಷ್ಟೇ ಅವ​ಕಾ​ಶ​ವಿದ್ದು, ವಿಶೇಷ ಪೂಜೆಗೆ ನಿರ್ಬಂಧ​ವಿ​ಧಿ​ಸ​ಲಾ​ಗಿ​ದೆ. ಇನ್ನು ಉತ್ತರ ಕನ್ನಡದ ಪವಿತ್ರ ತಾಣ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲೂ ದೇವರ ದರ್ಶನ ನಿರ್ಬಂಧಿ​ಸ​ಲಾ​ಗಿ​ದೆ.

ಮಂಗಳೂರು-ಮುಂಬೈ ವಿಮಾನಯಾನ ಆರಂಭ, ಕೆಲವು ಪ್ರಯಾಣಿಕರಿಗೆ ಕ್ವಾರೆಂಟೈನ್ ಇಲ್ಲ

ಉ.ಕ​ದಲ್ಲಿ ಇದೇ ಹಬ್ಬ: ಧಾರವಾಡ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಹಲವೆಡೆ ಶುಕ್ರವಾರವೇ ಶ್ರದ್ಧಾ-ಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಗಿದೆ. ಕೊರೋನಾ ಭಯದ ಮಧ್ಯೆಯೂ ಕೆಲವರು ನಾಗರಕಲ್ಲಿಗೆ ಹಾಲಿ​ನ ಅಭಿಷೇಕ ಮಾಡಿ ಪೂಜಿಸಿದ್ದಾರೆ. ಆದರೆ ಬಹುತೇಕರು ತಮ್ಮ ಮನೆಯಲ್ಲೇ ಹಬ್ಬದ ಆಚರಣೆ ಮಾಡಿದ್ದಾರೆ. ಬಹು​ತೇಕ ಕಡೆ ಶುಕ್ರವಾರ ರೊಟ್ಟಿಹಬ್ಬ (ನಾಗರಚೌತಿ) ಆಚರಿಸಿದ್ದು, ಶನಿವಾರ ನಾಗರ ಪಂಚಮಿ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್