
ಬೆಂಗಳೂರು: ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ತಮ್ಮ 'WTF' ಪಾಡ್ಕ್ಯಾಸ್ಟ್ನಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ನಗರದ ಪೊಲೀಸ್ ಆಯುಕ್ತ ಬಿ. ದಯಾನಂದ ಮತ್ತು ಜಂಟಿ ಆಯುಕ್ತ (ಟ್ರಾಫಿಕ್) ಎಂ.ಎನ್. ಅನುಚೇತ್ ಅವರೊಂದಿಗೆ ಚರ್ಚಿಸಿದ್ದಾರೆ. ನಗರದ ಬೆಳವಣಿಗೆ ಮತ್ತು ಮೂಲಸೌಕರ್ಯಗಳ ನಡುವಿನ ಅಂತರವನ್ನು ಚರ್ಚೆಯಲ್ಲಿ ಎತ್ತಿ ತೋರಿಸಲಾಗಿದೆ.
ಬೆಂಗಳೂರಿನವರಾದ ನಿಖಿಲ್ ಕಾಮತ್, ನಗರದ ಟ್ರಾಫಿಕ್ ಸಮಸ್ಯೆಗಳು ಅದರ ಹಲವು ಸಾಧನೆಗಳನ್ನು ಮರೆಮಾಡುತ್ತವೆ ಎಂದು ಹೇಳಿದರು. 'ನಾನು ಎಲ್ಲಿಗೆ ಹೋದರೂ ಬೆಂಗಳೂರು ಎಷ್ಟು ಚೆನ್ನಾಗಿದೆ ಎಂದು ಹೇಳಿದರೂ, ಜನರು ಯಾವಾಗಲೂ 'ಟ್ರಾಫಿಕ್, ಟ್ರಾಫಿಕ್, ಟ್ರಾಫಿಕ್' ಎಂದು ಪ್ರತಿಕ್ರಿಯಿಸುತ್ತಾರೆ. ಏಕೆ ಹೀಗೆ ಮತ್ತು ಇದಕ್ಕೆ ನಿಜವಾದ ಪರಿಹಾರವಿದೆಯೇ ಎಂದು ತಿಳಿದುಕೊಳ್ಳಲು ನಾನು ಬಯಸಿದ್ದೆ' ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು.
ಜಂಟಿ ಆಯುಕ್ತ ಅನುಚೇತ್ ಈ ಸಮಸ್ಯೆಯನ್ನು 2000 ರ ದಶಕದ ಆರಂಭದಲ್ಲಿಯೇ ಗುರುತಿಸಿದರು. ಆಗ ನಗರವು ಐಟಿ ಉದ್ಯಮದಿಂದ ಜನಸಂಖ್ಯೆ ಹೆಚ್ಚಳವಾಗಿದೆ. 'ತಂತ್ರಜ್ಞಾನದ ಬೆಳವಣಿಗೆ ನಂತರ, ಬೆಂಗಳೂರಿನ ಜನಸಂಖ್ಯೆ ಕೂಡ ಸ್ಫೋಟಗೊಂಡಿತು. ಆದರೆ ಮೂಲಸೌಕರ್ಯಗಳು ಅದೇ ವೇಗದಲ್ಲಿ ಬೆಳೆಯಲಿಲ್ಲ' ಎಂದು ಹೇಳಿದರು.
ಈ ಅಸಮತೋಲನವನ್ನು ಎತ್ತಿ ತೋರಿಸಲು ಅವರು ಅಂಕಿಅಂಶಗಳನ್ನು ಬಹಿರಂಗಪಡಿಸಿದರು: ಬೆಂಗಳೂರು ಈಗ 1.5 ಕೋಟಿ ಜನಸಂಖ್ಯೆಗೆ 1.23 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳನ್ನು ಹೊಂದಿದೆ. ಇದು ಪ್ರತಿ 1,000 ಜನರಿಗೆ 872 ವಾಹನಗಳಿಗೆ ಸಮನಾಗಿರುತ್ತದೆ. ಇದು ದೇಶದಲ್ಲಿ ಅತಿ ಹೆಚ್ಚು ಅನುಪಾತಗಳಲ್ಲಿ ಒಂದಾಗಿದೆ. 'ಕಳೆದ ದಶಕದಲ್ಲಿ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. 2013 ರಿಂದ 2023 ರವರೆಗೆ ವಾರ್ಷಿಕ 8% ದರದಲ್ಲಿ ಹೆಚ್ಚಾಗಿದೆ. ಆದರೆ ನಮ್ಮ ರಸ್ತೆ ಸಂಪರ್ಕ ಮಾತ್ರ ಅದಕ್ಕೆ ತಕ್ಕಂತೆ ವಿಸ್ತರಣೆ ಹೊಂದಿಲ್ಲ' ಎಂದು ಅನುಚೇತ್ ಹೇಳಿದರು.
ಜೊತೆಗೆ ನಮ್ಮ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಸಾರಿಗೆಯೂ ಹಿಂದುಳಿದಿದೆ. ನಮ್ಮ ಮೆಟ್ರೋ ಬರುವ ಮೊದಲು, ಬಿಎಂಟಿಸಿ ಬಸ್ಗಳು ಮಾತ್ರ ಪ್ರಮುಖ ಸಾಮೂಹಿಕ ಸಾರಿಗೆ ಆಯ್ಕೆಯಾಗಿತ್ತು. ಆದರೆ, ನಮ್ಮ ದೇಶದ 'ಇತರ ನಗರಗಳು ಪರ್ಯಾಯ ಸಾರಿಗೆ ಸಂಪರ್ಕದ ಮಾರ್ಗಗಳನ್ನು ಹೊಂದಿದ್ದವು. ಕೋಲ್ಕತ್ತಾ ಟ್ರಾಮ್ಗಳನ್ನು ಹೊಂದಿತ್ತು, ಮತ್ತು ದೆಹಲಿ ಮೆಟ್ರೋವನ್ನು ಹೊಂದಿತ್ತು. ಇದರಲ್ಲಿ ಬೆಂಗಳೂರು ಮಾತ್ರ ಹಿಂದುಳಿದಿದೆ. ಇದೀಗ ಜನಸಂಖ್ಯಾ ಸ್ಪೋಟ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಹಲವು ವರ್ಷಗಳ ಹಿಂದೆ ಅಭಿವೃದ್ಧಿ ಸಾಗುತ್ತಿದೆ ಎಂದು ಅವರು ಹೇಳಿದರು.
ಕಾಮತ್ ಬ್ಯಾನರ್ಘಟ್ಟ ರಸ್ತೆಯಲ್ಲಿ ತಮ್ಮ ಮನೆಯ ಬಳಿ ಮೆಟ್ರೋ ನಿರ್ಮಾಣವನ್ನು ಉಲ್ಲೇಖಿಸಿ ನಿಧಾನಗತಿಯ ಮೂಲಸೌಕರ್ಯದ ಪ್ರಗತಿಯ ಬಗ್ಗೆ ತಮ್ಮ ವೈಯಕ್ತಿಕ ಹತಾಶೆಯನ್ನು ಹಂಚಿಕೊಂಡರು. 'ಇದು ಸುಮಾರು 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಇದು ಇನ್ನೂ ನಡೆಯುತ್ತಿದೆ' ಎಂದು ಅವರು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು, ಸಾರ್ವಜನಿಕರ ಹಲವು ದೂರುಗಳನ್ನು ಹಾಗೂ ಹತಾಶೆಗಳನ್ನು ಒಪ್ಪಿಕೊಂಡರು. ಆದರೆ ವ್ಯವಸ್ಥಿತ ಪರಿಹಾರಗಳಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. 'ಬೆಂಗಳೂರಿನ ತೆರಿಗೆ ವ್ಯವಸ್ಥೆಗೆ ತಕ್ಕಂತೆ ಮೂಲ ಸೌಕರ್ಯಗಳು ಇಲ್ಲವೆಂದು ಜನರು ಕೋಪಗೊಂಡಿದ್ದಾರೆಂದು ನಮಗೆ ತಿಳಿದಿದೆ. ಆದರೆ ಬದಲಾವಣೆ ರಾತ್ರೋರಾತ್ರಿ ಆಗುವುದಿಲ್ಲ. ನಮಗೆ ಉತ್ತಮ ಸಾರ್ವಜನಿಕ ಸಾರಿಗೆ, ಚುರುಕಾದ ನಗರ ಯೋಜನೆ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಹೂಡಿಕೆಗಳು ಬೇಕಾಗುತ್ತವೆ. ಇವೆಲ್ಲವೂ ಕಾರ್ಯ ಸಿದ್ಧತಾ ಹಂತದಲ್ಲಿವೆ' ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ