'ಆತ್ಮ ರಕ್ಷಣೆಗೆ ನಮಗೆ ಬಂದೂಕು ನೀಡಿ': ಸಿಎಂ ಮುಂದೆ ಹೊಸ ಬೇಡಿಕೆ ಇಟ್ಟ ರಾಯಚೂರು ಕುರಿಗಾಹಿಗಳು!

Published : Jun 30, 2023, 09:23 AM ISTUpdated : Jun 30, 2023, 09:24 AM IST
'ಆತ್ಮ ರಕ್ಷಣೆಗೆ ನಮಗೆ ಬಂದೂಕು ನೀಡಿ':  ಸಿಎಂ ಮುಂದೆ ಹೊಸ ಬೇಡಿಕೆ ಇಟ್ಟ ರಾಯಚೂರು ಕುರಿಗಾಹಿಗಳು!

ಸಾರಾಂಶ

ಕುರಿಗಳ ರಕ್ಷಣೆಗಾಗಿ ಬಂದೂಕು ತರಬೇತಿ ನೀಡುವಂತೆ ಜಿಲ್ಲೆಯ ಸಂಚಾರಿ ಕುರಿಗಾಹಿಗಳು ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿದ್ದಾರೆ.

ರಾಯಚೂರು (ಜೂ.30) ಕುರಿಗಳ ರಕ್ಷಣೆಗಾಗಿ ಬಂದೂಕು ತರಬೇತಿ ನೀಡುವಂತೆ ಜಿಲ್ಲೆಯ ಸಂಚಾರಿ ಕುರಿಗಾಹಿಗಳು ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಂಚಾರಿ ಕುರಿಗಾಹಿಗಳು ನಿತ್ಯ ಜೀವ ಭಯದಲ್ಲಿ ಓಡಾಟ ಮಾಡುತ್ತಿದ್ದು, ಒಂದು ಕಡೆ ನರಿ ತೋಳಗಳ ಕಾಟ ,ಇನ್ನೊಂದು ಕಡೆ ರಾತ್ರಿವೇಳೆ ಕುರಿಗಳ ಕದ್ದೊಯ್ಯುವ ಕಳ್ಳರು. ಜಮೀನಿನಲ್ಲಿ ಇಡೀ ರಾತ್ರಿ ನಿದ್ದೆಗೆಟ್ಟು ಕುರಿಗಳ ರಕ್ಷಣೆ ಮಾಡಬೇಕಿದೆ. ನಿದ್ರೆಗೆ ಜಾರಿದ್ರೆ ಕಳ್ಳರಿಂದ ಕುರಿಗಾಯಿಗಳ ಮೇಲೆ ಹಲ್ಲೆ ಮಾಡಿ ಮಾಡಿ ಕುರಿಗಳ ಕಳ್ಳತನ ಮಾಡುತ್ತಾರೆ. ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಕುರಿಗಳು ಪತ್ತೆಯೆ ಆಗುವುದಿಲ್ಲ. ಕುರಿಗಾಹಿಗಳು ಅತಂತ್ರ ಸ್ಥಿತಿಯಲ್ಲಿ ನೆರವಿಗೆ ಬರುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. 

ಕುರಿಗಾಹಿಗಳ ಬೇಡಿಕೆ ಏನು? 

ಜಿಲ್ಲೆಯ ಕುರಿಗಾಹಿಗಳು ಕುರಿಗಳ ರಕ್ಷಣೆಗೆ ಬಂದೂಕು ತರಬೇತಿ ನೀಡಬೇಕು. ತರಬೇತಿ ಪಡೆದ ಕುರಿಗಾಯಿಗಳಿಗೆ ಬಂದೂಕು ನೀಡಬೇಕು. ಇದರಿಂದ ಕುರಿಗಳ ರಕ್ಷಣೆ ಜತೆಗೆ ಕಳ್ಳರಿಂದ ಕಾಡುಪ್ರಾಣಿಗಳಿಂದ ಕುರಿಗಾಹಿಗಳು ಆತ್ಮರಕ್ಷಣೆಗೆ ಸಹಾಯವಾಗುತ್ತೆ.

 

ಅಬ್ಬಾ.. ಈ ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೆಲೆ: ಆದರೂ ಮಾರಲ್ಲ ಎಂದ ಕುರಿಗಾಹಿ; ಕಾರಣ ಹೀಗಿದೆ..

ರಾಜ್ಯದ ಎಲ್ಲಾ ಕುರಿಗಾಯಿಗಳಿಗೆ ತೆಲಂಗಾಣ ಮಾದರಿ ಸಹಾಯಧನ ನೀಡಲು ಒತ್ತಾಯ ಮಾಡಿದ್ದಾರೆ.  ಕುರಿಗಾಯಿಗಳಿಗೆ ಟೆಂಟ್, ಬಲೆ ಇತರೆ ಪರಿಕರಗಳು ನೀಡಲು ಆಗ್ರಹ

ಕೆಎಂಎಫ್ ಮಾದರಿಯ ಮಾಂಸ ಮಾರಾಟ ಮಳಿಗೆ ಮಾಡುವಂತೆ ಆಗ್ರಹ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ