ಬಿಜೆಪಿಯಲ್ಲಿದ್ದರು ಹೀಗೊಬ್ಬ ಅಪರೂಪದ ಸಂಸದ..!

Published : Jun 26, 2020, 06:04 PM IST
ಬಿಜೆಪಿಯಲ್ಲಿದ್ದರು ಹೀಗೊಬ್ಬ ಅಪರೂಪದ ಸಂಸದ..!

ಸಾರಾಂಶ

ನರಗುಂದದ ಜಗನ್ನಾಥ ರಾವ್‌ ಜೋಶಿ ಒಮ್ಮೆಯೂ ಹುಟ್ಟೂರಾದ ಧಾರವಾಡ ಜಿಲ್ಲೆಯಿಂದ ಗೆಲ್ಲಲಾಗಲಿಲ್ಲ. ಆದರೆ ಜನಸಂಘದಿಂದ ಭೋಪಾಲ್‌ಗೆ ಹೋಗಿ ಗೆದ್ದರು.

ಬೆಂಗಳೂರು (ಜೂ. 26): ನರಗುಂದದ ಜಗನ್ನಾಥ ರಾವ್‌ ಜೋಶಿ ಒಮ್ಮೆಯೂ ಹುಟ್ಟೂರಾದ ಧಾರವಾಡ ಜಿಲ್ಲೆಯಿಂದ ಗೆಲ್ಲಲಾಗಲಿಲ್ಲ. ಆದರೆ ಜನಸಂಘದಿಂದ ಭೋಪಾಲ್‌ಗೆ ಹೋಗಿ ಗೆದ್ದರು. ಒಮ್ಮೆ ಜಗನ್ನಾಥ ರಾಯರು ಸಂಸದರಾದ ಮೇಲೆ ಅಥಣಿಗೆ ಹೋಗಿದ್ದರಂತೆ.

ಸಾರ್ವಜನಿಕ ಸಭೆ ಮುಗಿದ ಮೇಲೆ ಕಾರ್ಯಕರ್ತರು ‘ಸಕ್ರ್ಯೂಟ್‌ ಹೌಸ್‌ ಬುಕ್‌ ಮಾಡಿದ್ದೇವೆ, ಅಲ್ಲೇ ಊಟ’ ಎಂದು ತಿಳಿಸಿದಾಗ, ‘ಅಯ್ಯೋ ನಾನೇನು ಬೇವರ್ಸಿ ಆಗಿದ್ದೇನೆಯೇ. ಮನೆಯ ಹೆಣ್ಣುಮಕ್ಕಳು ನನಗೆ ಊಟಕ್ಕೆ ಹಾಕಲು ಇಲ್ಲ ಅನ್ನುತ್ತಾರೇನು? ಮನಿಗ ಹೋಗವ ನಾನು’ ಎಂದು ಜಬರಿಸಿದರಂತೆ. ಇನ್ನೊಂದು ಸರೋಜಿನಿ ಮಹಿಷಿ ಅವರೇ ಹೇಳಿದ ಕಥೆ ಮಜವಾಗಿದೆ.

ಹೆಚ್ಚುತ್ತಿದೆ ಇಂಡೋ- ಅಮೆರಿಕನ್ ಬಾಂಧವ್ಯ; ಚೀನಾಗೆ ಕಂಗಾಲು

ಹುಬ್ಬಳ್ಳಿ ದುರ್ಗದಬೈಲಿನಲ್ಲಿ ಹಿಂದಿನ ದಿನ ಕಾಂಗ್ರೆಸ್‌ನ ಸರೋಜಿನಿ ಮಹಿಷಿ, ‘ಎಲ್ಲ ಸರಿ, ಆದರೆ ಜಗನ್ನಾಥ್‌ ರಾವ್‌ ಬಹಳ ದಪ್ಪ ಅದಾರ್‌ ನೋಡ್ರಿ. ಹೆಂಗ ಕೆಲಸ ಮಾಡ್ತಾರ’ ಅಂದರಂತೆ. ಇದಕ್ಕೆ ಮರುದಿನ ಅದೇ ದುರ್ಗದ ಬೈಲಿನ ಭಾಷಣದಲ್ಲಿ ಜಗನ್ನಾಥ್‌ ರಾವ್‌ ಹೇಳಿದರಂತೆ, ‘ಹೌದು ನಾ ದಪ್ಪ ಅದೇನಿ ಖರೇ ಅದ. ಆದರ ನನ್ನ ತೂಕ ಮಹಿಷಿ ಬಾಯಾರಿಗೆ ಹೆಂಗ ಗೊತ್ತಾತು’ ಎಂದಾಗ ಮುಂದೆ ಎಂದೂ ಸರೋಜಿನಿ ಅವರು ತೂಕದ ಬಗ್ಗೆ ಮಾತನಾಡಲೇ ಇಲ್ಲವಂತೆ.

ಒಮ್ಮೆ ಧಾರವಾಡಕ್ಕೆ ಮದುವೆ ಮನೆಗೆ ಊಟಕ್ಕೆ ಹೋಗಿದ್ದ ಜಗನ್ನಾಥ್‌ ರಾವ್‌ ಅವರಿಗೆ ಮಧುಮೇಹ ಇರೋದರಿಂದ ಮಂಡಿಗೆ ಬಡಿಸಬಾರದು ಎಂದು ಹೇಳಿದ್ದರಂತೆ. ತುಂಬಾ ಹೊತ್ತು ಕಾದು ಕೊನೆಗೆ ಬಡಿಸುವವನನ್ನು ಹತ್ತಿರ ಕರೆದ ಜೋಶಿ, ‘ಅಲ್ಲಪ್ಪಾ ಶುಗರ್‌ ನಾಳೇನೂ ಇರ್ತದ, ಮಂಡಿಗೆ ನಾಳೆ ಬೇಕೆಂದ್ರ ಸಿಗ್ತದೇನು ಹಾಕಿಲ್ಲೆ’ ಎಂದು ಜೋರು ಮಾಡಿದರಂತೆ. ಜೋಶಿ ತೀರಿಕೊಂಡಾಗ ಅವರ ಬಳಿ ಇದ್ದ ಆಸ್ತಿ 5 ಧೋತರಗಳು. ಈಗ ಅಧಿಕಾರದಲ್ಲಿರುವ ರಾಜ್ಯದ ಬಿಜೆಪಿಯ ಅನೇಕರಿಗೆ ಇಂಥವರು ಪಾರ್ಟಿಯಲ್ಲಿದ್ದರು ಎಂದೂ ಕೂಡ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ಜಗನ್ನಾಥರಾಯರು ಈಗ ಇರುತ್ತಿದ್ದರೆ 100 ವರ್ಷದವರಾಗುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ