ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನನ್ನ ಹೆಂಡ್ತಿಗೆ ಕಾನೂನುಬದ್ಧವಾಗಿ ಸೈಟು ಕೊಟ್ಟಿದೆ; ಸಿಎಂ ಸಿದ್ದರಾಮಯ್ಯ

Published : Jul 02, 2024, 05:16 PM IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನನ್ನ ಹೆಂಡ್ತಿಗೆ ಕಾನೂನುಬದ್ಧವಾಗಿ ಸೈಟು ಕೊಟ್ಟಿದೆ; ಸಿಎಂ ಸಿದ್ದರಾಮಯ್ಯ

ಸಾರಾಂಶ

ಮೈಸೂರು ರಿಂಗ್ ರಸ್ತೆಯಲ್ಲಿದ್ದ ನನ್ನ ಹೆಂಡತಿಯ 3 ಎಕರೆ ಭೂಮಿಯನ್ನು ನಿವೇಶನ ಮಾಡಿ ಹಂಚಿದ ಮೂಡಾ, ಅದಕ್ಕೆ ಬದಲಿಯಾಗಿ ನನ್ನ ಹೆಂಡ್ತಿಗೆ ಬೇರೆಡೆ ಸೈಟು ಹಂಚಿಕೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಜು.02): ಮೈಸೂರು ರಿಂಗ್ ರೋಡ್ ಬಳಿ ನನ್ನ ಹೆಂಡತಿಯ ಹೆಸರಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ವಶಕ್ಕೆ ಪಡೆದು ಸೈಟ್ ಮಾಡಿಕೊಂಡಿತ್ತು. ಇದಕ್ಕೆ ಬದಲಿಯಾಗಿ ನನ್ನ ಹೆಂಡತಿಗೆ ಸೈಟ್ ಹಂಚಿಕೆಯಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನನ್ನ ಪತ್ನಿಗೆ ಅವರ ತವರು ಮನೆಯಿಂದ ದಾನವಾಗಿ ಬಂದ ಮೈಸೂರಿನ ರಿಂಗ್‌ ರೋಡ್‌ ಬಳಿಯ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಸೈಟ್‌ ಮಾಡಿ ಬೇರೆಯವರಿಗೆ ಹಂಚಿದರು. ನಾವು ಈ ಬಗ್ಗೆ ವಿಚಾರ ಮಾಡಿ ನ್ಯಾಯ ಕೇಳಿದಾಗ 50:50 ನಿಯಮದಲ್ಲಿ ಅದಕ್ಕೆ ಬದಲಿ ಜಮೀನು ನೀಡುವುದಾಗಿ ಹೇಳಿದ್ದರು. ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೇರೆ ಕಡೆ ಭೂಮಿ ಹಂಚಿಕೆ ಮಾಡಿದ್ದಾರೆ. 

ಮುಡಾ ಬಹುಕೋಟಿ ಹಗರಣ; ಗೋಲ್ಮಾಲ್ ಸಿಎಂ, ₹ 4,000 ಕೋಟಿ ಗುಳುಂ : ಆರ್. ಅಶೋಕ ಟೀಕೆ

ಈ ಭೂಮಿಯನ್ನು ನಮ್ಮ ಭಾವ ಮಲ್ಲಿಕಾರ್ಜುನ ಅವರು ಖರೀದಿ ಮಾಡಿದ್ದಾರೆ. ಆದರೆ, ಈ ಭೂಮಿಯನ್ನು ಹರಿಶಿಣ ಕುಂಕುಮ ಅಂತ ಅವರ ಪಾಲನ್ನು ಭಾಗ ಮಾಡಿಕೊಂಡಾಗ ಅಲ್ಲಿನ ಭೂಮಿಯನ್ನು ಅವರ ಸಹೋದರಿ ಅಂದರೆ ನನ್ನ ಹೆಂಡತಿಗೆ ಸೈಟ್ ಮಾಡಿ ಹಂಚಿಕೆ ಮಾಡಿಬಿಟ್ಟರು. ಆಗ ನಮಗೆ ಜಮೀನೇ ಇಲ್ಲದೆ ನಾವು ಪರದಾಡುತ್ತಿದ್ದೆವು. ಜಮೀನಿನ ಭಾಗದಲ್ಲಿ ಹೋಗಿ ನೋಡಿದರೆ ಅದಾಗಲೇ ಮೂಡಾದವರು ಸೈಟ್ ಕೊಟ್ಟಿದ್ದಾರೆಂದು ಬೇರೊಬ್ಬರಿಗೆ ಮಾಲೀಕತ್ವ ಕೊಡಲಾಗಿತ್ತು. ಹೀಗಾಗಿ, ಮೂಡಾದಿಂದ 50:50 ನಿಯಮ ಜಾರಿಗೆ ತಂದು ನಮಗೆ ಬೇರೆಡೆ ಶೇ.50 ಭಾಗವನ್ನು ನಿವೇಶನ ನೀಡಿದ್ದಾರೆ. ಒಟ್ಟಾರೆ ನನ್ನ ಪತ್ನಿ ಕಳೆದುಕೊಂಡಿದ್ದ ಜಮೀನಿಗೆ ಕಾನೂನುಬದ್ಧವಾಗಿ ಬೇರೆ ಕಡೆ ಭೂಮಿ ನೀಡಿದ್ದಾರೆ. ಇದೇನು ತಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌