'ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದು ಆರೆಸ್ಸೆಸ್'; ಸುಳ್ಳು ಆರೋಪ ಮಾಡಿದ ಎಂ ಲಕ್ಷ್ಮಣ್ ವಿರುದ್ಧ ಬಿಜೆಪಿ ದೂರು!

Published : Feb 13, 2025, 07:11 AM ISTUpdated : Feb 13, 2025, 07:20 AM IST
'ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದು ಆರೆಸ್ಸೆಸ್'; ಸುಳ್ಳು ಆರೋಪ ಮಾಡಿದ ಎಂ ಲಕ್ಷ್ಮಣ್ ವಿರುದ್ಧ ಬಿಜೆಪಿ ದೂರು!

ಸಾರಾಂಶ

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು RSS ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ಮೇಲೆ ಕ್ರಮ ಜರುಗಿಸುವಂತೆ ಬಿಜೆಪಿ ಕಾನೂನು ಹಾಗೂ ಮಾಧ್ಯಮ ಪ್ರಕೋಷ್ಠದ ಪದಾಧಿಕಾರಿಗಳು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. 

ಮೈಸೂರು (ಫೆ.13): ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು RSS ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ಮೇಲೆ ಕ್ರಮ ಜರುಗಿಸುವಂತೆ ಬಿಜೆಪಿ ಕಾನೂನು ಹಾಗೂ ಮಾಧ್ಯಮ ಪ್ರಕೋಷ್ಠದ ಪದಾಧಿಕಾರಿಗಳು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. 

ನಗರದ ಉದಯಗಿರಿಯಲ್ಲಿ ಮತಾಂಧರು ನಡೆಸಿದ ದಾಂಧಲೆಯ ಬಗ್ಗೆ ಮಾತಾಡಿರುವ ಎಂ. ಲಕ್ಷ್ಮಣ ಅವರು, ಗಲಾಟೆಗೆ RSS ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. RSS ಕಾರ್ಯಕರ್ತರು ಮಾರುವೇಷದಲ್ಲಿ ಬಂದು ಪೊಲೀಸ್‌ ಠಾಣೆಯ ಮೇಲೆ ದಾಂಧಲೆ ಮಾಡಿರುವುದಾಗಿ ರಾಜಕೀಯ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ.

RSS ಸಂಘಟನೆ ತನ್ನದೇ ಆದ ಘನತೆ, ಗೌರವದೊಂದಿಗೆ ಈ ದೇಶದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅತ್ಯಂತ ದೊಡ್ಡ ಸೇವಾ ಸಂಘಟನೆಯಾಗಿದೆ. ಕಳೆದ 100 ವರ್ಷಗಳಿಂದ ದೇಶದ ಒಳಗಡೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದು, ಕೋಟ್ಯಂತರ ಸ್ವಯಂ ಸೇವಕರು ಇದರ ವಿಚಾರಧಾರೆಯಿಂದ ಆಕರ್ಷಿತರಾಗಿ ದೇಶ ಸೇವೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಗೂಂಡಾಗಿರಿ ಕೇಸ್‌ನಲ್ಲಿ ಮತ್ತೊಬ್ಬ ಕೈ ನಾಯಕನ ಯಡವಟ್ಟು | Udayagiri Police Station Incident | Kannada News

 

ಇಂತಹ ಶ್ರೇಷ್ಠ ಸಂಘಟನೆಯ ಬಗ್ಗೆ ಆಧಾರ ರಹಿತ ಆರೋಪ ಮಾಡಿರುವುದು ಖಂಡನೀಯ. ಲಕ್ಷ್ಮಣ್‌ ಎಂಬ ವ್ಯಕ್ತಿಯ ದುರ್ನಡತೆಯ ಮಾತುಗಳಿಗೆ ಕಡಿವಾಣ ಹಾಕುವುದು ಅಗತ್ಯ. ಇವರ ಆಧಾರ ರಹಿತ ಬೇಜವಾಬ್ದಾರಿ ಹೇಳಿಕೆಯಿಂದ ಕೋಟ್ಯಂತರ ರಾಷ್ಟ್ರಭಕ್ತರ ಮನಸ್ಸಿಗೆ ನೋವು ಉಂಟಾಗಿದೆ. ಆದ್ದರಿಂದ ಇವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಅವರು ಕೋರಿದ್ದಾರೆ.

ಮೈಸೂರು (ಫೆ.13): ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು RSS ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ಮೇಲೆ ಕ್ರಮ ಜರುಗಿಸುವಂತೆ ಬಿಜೆಪಿ ಕಾನೂನು ಹಾಗೂ ಮಾಧ್ಯಮ ಪ್ರಕೋಷ್ಠದ ಪದಾಧಿಕಾರಿಗಳು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. 

ನಗರದ ಉದಯಗಿರಿಯಲ್ಲಿ ಮತಾಂಧರು ನಡೆಸಿದ ದಾಂಧಲೆಯ ಬಗ್ಗೆ ಮಾತಾಡಿರುವ ಎಂ. ಲಕ್ಷ್ಮಣ ಅವರು, ಗಲಾಟೆಗೆ RSS ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. RSS ಕಾರ್ಯಕರ್ತರು ಮಾರುವೇಷದಲ್ಲಿ ಬಂದು ಪೊಲೀಸ್‌ ಠಾಣೆಯ ಮೇಲೆ ದಾಂಧಲೆ ಮಾಡಿರುವುದಾಗಿ ರಾಜಕೀಯ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ.

RSS ಸಂಘಟನೆ ತನ್ನದೇ ಆದ ಘನತೆ, ಗೌರವದೊಂದಿಗೆ ಈ ದೇಶದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅತ್ಯಂತ ದೊಡ್ಡ ಸೇವಾ ಸಂಘಟನೆಯಾಗಿದೆ. ಕಳೆದ 100 ವರ್ಷಗಳಿಂದ ದೇಶದ ಒಳಗಡೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದು, ಕೋಟ್ಯಂತರ ಸ್ವಯಂ ಸೇವಕರು ಇದರ ವಿಚಾರಧಾರೆಯಿಂದ ಆಕರ್ಷಿತರಾಗಿ ದೇಶ ಸೇವೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಉದಯಗಿರಿ ಪೊಲೀಸರನ್ನೇ ದೂಷಿಸಿದ್ದ ರಾಜಣ್ಣ ಪರ ಬಾಲಕೃಷ್ಣ ಬ್ಯಾಟಿಂಗ್‌ | Udayagiri Police Station Incident

ಇಂತಹ ಶ್ರೇಷ್ಠ ಸಂಘಟನೆಯ ಬಗ್ಗೆ ಆಧಾರ ರಹಿತ ಆರೋಪ ಮಾಡಿರುವುದು ಖಂಡನೀಯ. ಲಕ್ಷ್ಮಣ್‌ ಎಂಬ ವ್ಯಕ್ತಿಯ ದುರ್ನಡತೆಯ ಮಾತುಗಳಿಗೆ ಕಡಿವಾಣ ಹಾಕುವುದು ಅಗತ್ಯ. ಇವರ ಆಧಾರ ರಹಿತ ಬೇಜವಾಬ್ದಾರಿ ಹೇಳಿಕೆಯಿಂದ ಕೋಟ್ಯಂತರ ರಾಷ್ಟ್ರಭಕ್ತರ ಮನಸ್ಸಿಗೆ ನೋವು ಉಂಟಾಗಿದೆ. ಆದ್ದರಿಂದ ಇವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಅವರು ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್