₹6 ಕೋಟಿ ಚೀಟಿ ಹಣದೊಂದಿಗೆ ಪರಾರಿ ಆದ ಖತರ್ನಾಕ್ ದಂಪತಿಗಾಗಿ ಶೋಧ

Published : Sep 05, 2023, 08:12 AM IST
₹6 ಕೋಟಿ ಚೀಟಿ ಹಣದೊಂದಿಗೆ ಪರಾರಿ ಆದ ಖತರ್ನಾಕ್ ದಂಪತಿಗಾಗಿ ಶೋಧ

ಸಾರಾಂಶ

ಚೀಟಿ ನಡೆಸುತ್ತಿದ್ದ ದಂಪತಿ ಹಣ ಹೂಡಿದ್ದ ಹತ್ತಾರು ಜನರಿಗೆ ಮೋಸ ಮಾಡಿ ಹಣದೊಂದಿಗೆ ತಲೆಮರೆಸಿಕೊಂಡ ಘಟನೆ ಚಿಕ್ಕಬಾಣಾವರ ಸಮೀಪದ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೀಣ್ಯ ದಾಸರಹಳ್ಳಿ (ಸೆ.5) : ಚೀಟಿ ನಡೆಸುತ್ತಿದ್ದ ದಂಪತಿ ಹಣ ಹೂಡಿದ್ದ ಹತ್ತಾರು ಜನರಿಗೆ ಮೋಸ ಮಾಡಿ ಹಣದೊಂದಿಗೆ ತಲೆಮರೆಸಿಕೊಂಡ ಘಟನೆ ಚಿಕ್ಕಬಾಣಾವರ ಸಮೀಪದ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆರೆಗುಡ್ಡದಹಳ್ಳಿಯ ನಿವಾಸಿ ವಿಶ್ವನಾಥ್‌ ಹಾಗೂ ವನಿತಾ ವಂಚಿಸಿದವರು. ಇವರು 10 ವರ್ಷದಿಂದ ಚೀಟಿ ಹಣ ವ್ಯವಹಾರ ನಡೆಸುತ್ತಿದ್ದರು. ತಮ್ಮ ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆ ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ .6 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ

ವಿಶ್ವನಾಥ್‌ ಮತ್ತು ವನಿತಾ ವಕೀಲರು, ಡಾಕ್ಟರ್‌, ಉದ್ಯಮಿಗಳು, ದೊಡ್ಡ ಅಧಿಕಾರಿ ವರ್ಗದವರನ್ನೇ ಗುರಿಯಾಗಿಸಿ ಅವರಿಂದ ಲಕ್ಷಗಟ್ಟಲೇ ಹಣ ಹಾಕಿಸಿಕೊಂಡಿದ್ದರು. ತಿಂಗಳಿಂದ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ದಂಪತಿಗಳಾದ ವಿಶ್ವನಾಥ್‌, ವನಿತಾ, ಮಂಜುನಾಥ್‌, ಮುನಿಸ್ವಾಮಿ, ಲಕ್ಷ್ಮೇನಾರಾಯಣ, ವೆಂಕಟರಮಣಪ್ಪ, ವಸಂತರಾಜ್‌ ಮತ್ತು ಬಾಲಾಜಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಂಚಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ, ಶೋಧ ಕಾರ್ಯ ನಡೆಯುತ್ತಿದ್ದಾರೆ.

ಮಾಜಿ ಸಚಿವರೊಬ್ಬರ ಗನ್‌ ಮ್ಯಾನ್‌ನಿಂದ ವಂಚನೆ: 30 ಕೋಟಿಯ ಕಾಮಗಾರಿಗೆ ಹಣ ಕೇಳಿದ ಆರೋಪ

 

ಆನ್‌ಲೈನ್‌ ಮೂಲಕ ₹1.24 ಲಕ್ಷ ವಂಚನೆ 

ಹುಬ್ಬಳ್ಳಿ: ಮನೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಖದೀಮರು, ಒಟ್ಟು ₹1,24,999 ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಕೇಶ್ವಾಪುರದ ಸುಖದೇವ್‌ಸಿಂಗ್ ವಂಚನೆಗೊಳಗಾದವರು. ಮನೆಯಲ್ಲಿ ಕುಳಿತಿದ್ದ ಇವರ ಗಮನಕ್ಕೆ ಬಾರದೇ ಇವರ ಖಾತೆಯಲ್ಲಿದ್ದ ₹99,999 ಹಾಗೂ ₹25 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸುಖದೇವಸಿಂಗ್‌ ಅವರು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ