ಡ್ರಗ್ಸ್‌ ದಂಧೆ: ಇಂದ್ರಜಿತ್‌ ಲಂಕೇಶ್‌ಗೆ ಶಾಸಕ ಹ್ಯಾರಿಸ್‌ ಬೆಂಬಲ

Kannadaprabha News   | Asianet News
Published : Sep 04, 2020, 10:02 AM ISTUpdated : Sep 04, 2020, 10:17 AM IST
ಡ್ರಗ್ಸ್‌ ದಂಧೆ: ಇಂದ್ರಜಿತ್‌ ಲಂಕೇಶ್‌ಗೆ ಶಾಸಕ ಹ್ಯಾರಿಸ್‌ ಬೆಂಬಲ

ಸಾರಾಂಶ

ಡ್ರಗ್‌ ಮಾಫಿಯಾ ದೇಶದ ಮುಂದಿನ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಇದನ್ನು ತಡೆಯಬೇಕು. ಯಂಗ್‌ ಇಂಡಿಯಾ ಯಂಗ್‌ ಇಂಡಿಯಾ ಆಗಿಯೇ ಉಳಿಬೇಕು| ಸಿನೆಮಾ ರಂಗ ಸ್ಟಾರ್‌ಗಳೇ ಆಗಿರಲಿ, ರಾಜಕಾರಣಿಗಳು, ಅವರ ಮಕ್ಕಳು ಯಾರೇ ಇರಲಿ ಈ ದಂಧೆಯಲ್ಲಿ ತೊಡಗಿರುವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು: ಎನ್‌.ಎ.ಹ್ಯಾರಿಸ್‌| 

ಬೆಂಗಳೂರು(ಸೆ.04): ಡ್ರಗ್ಸ್‌ ದಂಧೆ ವಿಚಾರದಲ್ಲಿ ನಿರ್ಮಾಪಕ ಇಂದ್ರಜಿತ್‌ ಲಂಕೇಶ್‌ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದು ಸರ್ಕಾರ ಈ ದಂಧೆ ಮಟ್ಟ ಹಾಕಲು ಕ್ರಮಕೈಗೊಳ್ಳಬೇಕೆಂದು ಶಾಸಕ ಎನ್‌.ಎ.ಹ್ಯಾರಿಸ್‌ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್‌ ಮಾಫಿಯಾ ದೇಶದ ಮುಂದಿನ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಇದನ್ನು ತಡೆಯಬೇಕು. ಯಂಗ್‌ ಇಂಡಿಯಾ ಯಂಗ್‌ ಇಂಡಿಯಾ ಆಗಿಯೇ ಉಳಿಬೇಕು. ಸಿನೆಮಾ ರಂಗ ಸ್ಟಾರ್‌ಗಳೇ ಆಗಿರಲಿ, ರಾಜಕಾರಣಿಗಳು, ಅವರ ಮಕ್ಕಳು ಯಾರೇ ಇರಲಿ ಈ ದಂಧೆಯಲ್ಲಿ ತೊಡಗಿರುವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ದಾಖಲೆ ಬಗ್ಗೆ ರಿವೀಲ್ ಮಾಡಲ್ಲ : ಡ್ರಗ್ಸ್ ಸುಳಿಯ ಬಗ್ಗೆ ಮತ್ತೆ ಮಾತಾಡಿದ್ರು ಇಂದ್ರಜಿತ್

ಆರಂಭದಲ್ಲಿ ಡ್ರಗ್ಸ್‌ ತೆಗೆದುಕೊಳ್ಳುವವರಿಗೆ ಅದರ ಅಪಾಯ ಅರ್ಥವಾಗುವುದಿಲ್ಲ. ಮುಂದೆ ಡ್ರಗ್ಸ್‌ ಸಿಗದೆ ಹೋದಾಗ ಅದರಿಂದ ಎಷ್ಟು ಅಪಾಯ ಎಂಬುದು ತಿಳಿಯುತ್ತದೆ. ಇತ್ತೀಚಿನ ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲೂ ಡ್ರಗ್ಸ್‌ ವ್ಯಸನಿಗಳನ್ನು ಬಳಸಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರ ಈ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್