ಬೆಂಗ​ಳೂರು-ಮೈಸೂರು ಮರಣ ಹೆದ್ದಾ​ರಿ ಕ್ರೆಡಿಟ್‌ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು: ರಾಮ​ಲಿಂಗಾ​ರೆಡ್ಡಿ

Published : Jun 27, 2023, 01:52 PM IST
ಬೆಂಗ​ಳೂರು-ಮೈಸೂರು ಮರಣ ಹೆದ್ದಾ​ರಿ ಕ್ರೆಡಿಟ್‌ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು: ರಾಮ​ಲಿಂಗಾ​ರೆಡ್ಡಿ

ಸಾರಾಂಶ

ರಸ್ತೆ ನಿರ್ಮಾ​ಣವಾಗಿದ್ದು ನಮ್ಮ ಹಣ​ದಲ್ಲಿ. ಆದರೂ ರಸ್ತೆ ಮಾಡಿ​ದ್ದಾಗಿ ಮಾತ್ರ ಹೇಳಿ​ಕೊ​ಳ್ಳು​ತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿ​ದಿ​ಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್‌ ಕೂಡ ಅವ​ರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯ​ಕರನ್ನು ಪರೋ​ಕ್ಷ​ವಾಗಿ ಟೀಕಿ​ಸಿ​ದ ರಾಮ​ಲಿಂಗಾ​ರೆಡ್ಡಿ 

ರಾಮ​ನ​ಗರ(ಜೂ.27):  ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಾಗಿ ಉಳಿ​ದಿಲ್ಲ. ಅದೊಂದು ಮರಣ ಹೆದ್ದಾ​ರಿ​ಯಾಗಿ ರೂಪ ತಳೆ​ದಿದೆ. ಆ ಕ್ರೆಡಿಟ್‌ ಅನ್ನು ಜಂಬ ಕೊಚ್ಚಿ​ಕೊ​ಳ್ಳು​ತ್ತಿ​ರು​ವ​ವರು ಪಡೆ​ದು​ಕೊ​ಳ್ಳಲಿ ಎಂದು ಬಿಜೆಪಿ ನಾಯ​ಕರ ವಿರುದ್ಧ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಕಿಡಿ​ಕಾ​ರಿ​ದ​ರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ​ನಾ​ಡಿದ ಅವರು, ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 200ಕ್ಕೂ ಹೆಚ್ಚು ಅಪ​ಘಾ​ತ​ಗಳು ಸಂಭ​ವಿ​ಸಿದ್ದು, 150ಕ್ಕೂ ಹೆಚ್ಚು ಜನರು ಜೀವ ಕಳೆ​ದು​ಕೊಂಡಿ​ದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಯನ್ನು ಪ್ರಶ್ನಿ​ಸಿ​ದರು.

ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್‌ ಸಿಂಹ ಚೈಲ್ಡಿಶ್‌ ಮಾತು: ನಿಖಿಲ್‌ ಕುಮಾ​ರ​ಸ್ವಾಮಿ

ನೀವು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ​ರು​ವು​ದೇ ಇಷ್ಟೊಂದು ಸಾವು ಸಂಭ​ವಿ​ಸಲು ಕಾರ​ಣ​ವಾ​ಗಿದೆ. ಇದರ ಹೊಣೆಯನ್ನು ಯಾರಾ​ದರು ಹೊರು​ತ್ತಾರೆಯೇ. ಕೆಲವರು ಮಾಧ್ಯಮ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನಾವೇ ರಸ್ತೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ರಸ್ತೆ ನಿರ್ಮಾ​ಣವಾಗಿದ್ದು ನಮ್ಮ ಹಣ​ದಲ್ಲಿ. ಆದರೂ ರಸ್ತೆ ಮಾಡಿ​ದ್ದಾಗಿ ಮಾತ್ರ ಹೇಳಿ​ಕೊ​ಳ್ಳು​ತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿ​ದಿ​ಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್‌ ಕೂಡ ಅವ​ರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯ​ಕರನ್ನು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಹೆದ್ದಾ​ರಿ​ಯಲ್ಲಿ ಅಪ​ಘಾ​ತ​ಗಳು ಸಂಭ​ವಿ​ಸ​ದಂತೆ ಮಾಡುವ ಹೊಣೆ ನಿಮ್ಮದು. ನೀವು ಏನು ಮಾಡು​ತ್ತೀರೊ ಗೊತ್ತಿಲ್ಲ. ಹೆದ್ದಾ​ರಿ​ಯನ್ನು ವೈಜ್ಞಾ​ನಿ​ಕ​ವಾಗಿ ಮಾಡ​ಬೇಕು. ಸರ್ವಿಸ್‌ ರಸ್ತೆ, ತಂಗು​ದಾಣ, ಅಂಡರ್‌ ಪಾಸ್‌ ಸಮಸ್ಯೆ ಬಗೆ​ಹ​ರಿ​ಸ​ಬೇಕು ಎಂದು ರಾಮ​ಲಿಂಗಾ​ರೆಡ್ಡಿ ಸೂಚನೆ ನೀಡಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್