ಕೊರೋನಾ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ: ಸಚಿವ ಸುಧಾಕರ್‌

Suvarna News   | Asianet News
Published : Jun 26, 2020, 11:49 AM ISTUpdated : Jun 26, 2020, 12:00 PM IST
ಕೊರೋನಾ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ: ಸಚಿವ ಸುಧಾಕರ್‌

ಸಾರಾಂಶ

ಭಾರತದ 5 ದೊಡ್ಡ ಜನಸಂಖ್ಯೆ ನಗರಗಳಲ್ಲಿ 192500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ| 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ, ಕೇವಲ ಶೇ. 0.9 ರಷ್ಟು ಮತ್ತು ಶೇ. 1ರಷ್ಟು ಸಾವು ಸಂಭವಿಸಿದೆ|

ಬೆಂಗಳೂರು(ಜೂ.26):  ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ. ಜೂನ್ 25 ರಂತೆ, ಭಾರತದ 5 ದೊಡ್ಡ ಜನಸಂಖ್ಯೆ ನಗರಗಳಲ್ಲಿ 192500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ. 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ, ಕೇವಲ ಶೇ. 0.9 ರಷ್ಟು ಮತ್ತು ಶೇ. 1ರಷ್ಟು ಸಾವು ಸಂಭವಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರು ಹೇಳಿದ್ದಾರೆ. 

ನಗರದಲ್ಲಿ ದಿನೇ ದಿನೆ ಮಹಾಮಾರಿ ಕೊರೋನಾ ಪ್ರಕರಣಗಳ ಹೆಚ್ಚಾಗುತ್ತಿವೆ. ಕೋವಿಡ್‌ ರೋಗಿಗಳ ಸಾವಿನಲ್ಲೂ ಕೂಡ ಹೆಚ್ಚಾಗುತ್ತಿದೆ. ಇಡೀ ಕರ್ನಾಟಕಕ್ಕೆ ಹೋಲಿಸಿದರೆ ಅರ್ಧದಷ್ಟು ಕೊರೋನಾ ರೋಗಿಗಳು ಕೇವಲ ಬೆಂಗಳೂರಿನಲ್ಲೇ ಸಾವನ್ನಪ್ಪಿದ್ದಾರೆ. 

 

 

ರಾಮನಗರ: ಮಾಜಿ ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ಸೇರಿ ಮನೆ ಕೆಲಸದವರಿಗೆ ಕೊರೋನಾ ನೆಗೆಟಿವ್‌

ಕೋವಿಡ್ ಕಂಟ್ರೋಲ್‌ನಲ್ಲಿ ಬೆಂಗಳೂರು ದೇಶಕ್ಕೆ ಮಾದರಿಯಾಗಿದ್ದೇವೆ. ಈಗ ಕೊರೋನಾ ನಿಗ್ರಹಕ್ಕೆ ಆಯಾ ಆಯಾ ಕ್ಷೇತ್ರದ ಶಾಸಕರು ವಿಶೇಷ ಗಮನ ನೀಡಿದರೆ ಮಹಾಮಾರಿ ಕೋವಿಡ್ ತಡೆಯಬಹುದು ಎನ್ನುವ ವಿಶ್ವಾಸ ಇದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಆಗಿದ್ದನ್ನು ಬಿಟ್ಟರೆ, ಬೇರೆ ಏರಿಯಾಗಳಲ್ಲಿ ಮರು ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಈ ಸಂಬಂಧ ಇಂದು ಶಾಸಕರ ಅಭಿಪ್ರಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!