ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ಕುಸಿದು ಬಿದ್ದ ವಧು, ಮದುಮಗಳ ಅಸಲಿ ಕಥೆ ಇಲ್ಲಿದೆ

Published : May 22, 2022, 03:59 PM ISTUpdated : May 22, 2022, 04:19 PM IST
ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ಕುಸಿದು ಬಿದ್ದ ವಧು, ಮದುಮಗಳ ಅಸಲಿ ಕಥೆ ಇಲ್ಲಿದೆ

ಸಾರಾಂಶ

* ಮೈಸೂರಿನಲ್ಲಿ ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ * ತಾಳಿ ಕಟ್ಟುವ ಸಂದರ್ಭದಲ್ಲಿ ಹೈಡ್ರಾಮಾ ಮಾಡಿದ ವಧು * ಮದುವೆ ಮಂಟಪದಲ್ಲಿ ಕುಸಿದು ಬಿದ್ದಂತೆ ವಧು ನಾಟಕ

ಮೈಸೂರು, ಮೇ22): ತಾಳಿ ಕಟ್ಟುವ ಶುಭ ಘಳಿಗೆಗೆ ಸನ್ನಿಹಿತವಾಗಿತ್ತು. ಎಲ್ಲರೂ ಅಕ್ಷತೆ ಹಿಡಿದುಕೊಂಡು ಶುಭ ಹಾರೈಕೆಯ ಕ್ಷಣಕ್ಕಾಗಿ ಕಾದು ನಿಂತಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುಮಗಳು ಏಕಾಏಕಿ ಕುಸಿದು ಬಿದ್ದಂತೆ ನಟಿಸಿ, ನಂತರ ತಾನು ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹೈಡ್ರಾಮ ಮಾಡಿದ್ದಾಳೆ. ಕೊನೆಗೆ  ಮದುವೆ ಮುರಿದುಬಿದ್ದಿದೆ. ಈ ಘಟನೆ ಇಂದು(ಭಾನುವಾರ) ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿ ಸಿಂಚನಾಗೆ ಹೆಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಎರಡು ಕುಟುಂಬಗಳು ಸಂಭ್ರಮದಿಂದ ತಯಾರಿ ಮಾಡಿಕೊಂಡಿದ್ದರು. ಅದರಂತೆ ಇಂದು(ಭಾನುವಾರ) ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ವಿವಾಹ ಸಂಭ್ರಮ ನಡೆದಿತ್ತು. ಮದುವೆ ಶಾಸ್ತ್ರಗಳು ಮುಗಿದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುಮಗಳು ಕುಸಿದು ಬಿದ್ದಂತೆ ನಟಿಸಿದ್ದಾಳೆ. ನಂತರ ತಾನು ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹೈಡ್ರಾಮ ಮಾಡಿದ್ದಾಳೆ. ಇದರಿಂದಾಗಿ ಮದುವೆ ಮನೆಯಲ್ಲಿ ಗೊಂದಲಗಳು ಆರಂಭವಾಗಿ, ಕೊನೆ ಕ್ಷಣದಲ್ಲಿ ಮದುವೆ ಬಿದ್ದಿದೆ.

"

ಕಾರಿನಲ್ಲೇ ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್, ಸಾವಿಗೆ ಕಾರಣ ಬಯಲು

ಪಕ್ಕದ್ಮನೆ ಯುವಕನ ಮೇಲೆ ಲವ್ 
ಇನ್ನು ಸಿಂಚನಾ ಸುಣ್ಣದಕೇರಿಯ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಯ ಪ್ರಿಯಕರ ಈ ಹಿಂದೆ ವರನಿಗೆ ಮೆಸೇಜ್​ ಮಾಡಿ ಸಿಂಚನಾಳನ್ನು ಮದುವೆಯಾಗಬೇಡ ಎಂದಿದ್ದ. ಈ ಬಗ್ಗೆ ವರ ಸಿಂಚನಾಳನ್ನು ವಿಚಾರಿಸಿದಾಗ, ಮೆಸೇಜ್‌ಗೂ ನನಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದಳು. ಆದರೆ, ಇಂದು ಮಾಂಗಲ್ಯಸರ ಕಟ್ಟುವಾಗ ತಾನು ಮದುವೆಯಾಗುವುದಿಲ್ಲವೆಂದು ಹೈಡ್ರಾಮ ಮಾಡಿದ್ದು, ಕೆ.ಆರ್.ಪೊಲೀಸ್ ಠಾಣೆ ಪೊಲೀಸರು ವಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ.

ವರನ ಪೋಷಕರು ಈ ಮದುವೆಗಾಗಿ 5 ಲಕ್ಷ ರೂ. ಹಣ ಖರ್ಚು ಮಾಡಿದ್ದರು. ವಧುವಿಗೆ ಚಿನ್ನ ಹಾಗೂ ರೇಷ್ಮೆ ಸೀರೆ ಸಹ ಕೊಡಿಸಿದ್ದರು. ಇದೀಗ ಮದುವೆ ಮರಿದುಬಿದ್ದಿದ್ದರಿಂದ ವರನ ಪೋಷಕರು ವಧುವಿಗೆ ಪೋಷಕರು ಛೀಮಾರಿ ಹಾಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ