ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ

Published : Jan 22, 2020, 03:08 PM ISTUpdated : Jan 22, 2020, 05:27 PM IST
ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ

ಸಾರಾಂಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯರಾವ್ ನನ್ನ ವಶಕ್ಕೆ ಪಡೆದುಕೊಳ್ಳಲು ಬೆಂಗಳೂರಿಗೆ ಮಂಗಳೂರು ಪೊಲೀಸರು ಆಗಮಿಸಿದ್ದಾರೆ. ಪ್ರಮುಖವಾಗಿ ಈ ಆರೋಪಿ  15 ವರ್ಷದಲ್ಲಿ 18 ಕೆಲಸ ಬದಲಾಯಿಸಿದ್ದಾನೆ.

ಬೆಂಗಳೂರು (ಜ. 22): ಈ ಹಿಂದೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ 1 ವರ್ಷ ಜೈಲು ಶಿಕ್ಷ ಅನುಭವಿಸಿದ್ದ ಆದಿತ್ಯ ರಾವ್, ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾನೆ.

ಉಡುಪಿ ಮೂಲದ ಆದಿತ್ಯ ರಾವ್,​ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ಒಪ್ಪಿಕೊಂಡಿದ್ದಾನೆ. ಮಂಗಳೂರಿನಿಂದ ಮಾರುವೇಷದಲ್ಲಿ ಲಾರಿಯಲ್ಲಿ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. 

ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು

ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ 1ನೇ ACMM ಕೋರ್ಟ್‌ಗೆ ಹಾಜರಿಪಡಿಸಿ ವಶಕ್ಕೆ ಪಡೆಯಲಿದ್ದಾರೆ.

ಆದಿತ್ಯ ರಾವ್​ ಚಿತ್ರ-ವಿಚಿತ್ರ ಮನುಷ್ಯ. ಈತನ ಹಿನ್ನೆಲೆ ಕೆದುಕುತ್ತಾ ಹೋದಂತೆ ರೋಚಕ ಮಾಹಿತಿಗಳು ಸಿಗುತ್ತಿವೆ. ಯಾವಾಗಲೂ ಸಪ್ಪೆ ಮುಖ ಮಾಡಿಕೊಂಡೆ ಇರುವ ಈತ ಯಾರೊಂದಿಗೆ ಮಾತನಾಡುವುದಿಲ್ಲ ಎನ್ನುವುದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ ಈತ ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಂತರ ಸತ್ಯಾಸತ್ಯತೆ ಹೊರಬರಲಿದೆ.

ಇನ್ನು ಆದಿತ್ಯ ರಾವ್ ವಿದ್ಯಾಭ್ಯಾಸವನ್ನ ನೋಡುವುದಾದ್ರೆ, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು MBA ಪೂರ್ಣಗೊಳಿಸಿರುವ ಈತ 15 ವರ್ಷದಲ್ಲಿ 18 ಕೆಲಸ ಬದಲಾಯಿಸಿದ್ದಾನೆ. ಅದರಲ್ಲಿ 12 ಕೆಲಸಗಳ ಬಗ್ಗೆ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

ಮಂಗಳೂರು ಬಾಂಬರ್‌ನ 15 ವರ್ಷದಲ್ಲಿ 18 ಕೆಲಸ
1.ICICI LIFE ಪ್ರುಡೆನ್ಷಿಯಲ್  ಕಂಪನಿ, ಬೆಂಗಳೂರು( ಸೇಲ್ಸ್ ಮ್ಯಾನೇಜರ್, 1 ವರ್ಷ ಉದ್ಯೋಗ)
2. HSBC ಬ್ಯಾಂಕ್, ಬೆಂಗಳೂರು (8 ತಿಂಗಳು ಕೆಲಸ)
3. ಮತ್ತೆ ICICI ಪ್ರುಡೆನ್ಷಿಯಲ್ ಕಂಪನಿ, ಬೆಂಗಳೂರು (ಸೇಲ್ಸ್ ಮ್ಯಾನೇಜರ್, 1 ವರ್ಷ ಕೆಲಸ)
4.HDFC ಇನ್ಷೂರೆನ್ಸ್ ಕಂಪನಿ , ಬೆಂಗಳೂರು (ಸೇಲ್ಸ್ ಎಕ್ಸಿಕ್ಯುಟಿವ್) 
5. ಪಂಪ್ಸೆಟ್ ಮಾರಾಟ ಕಂಪನಿ, ಬೆಂಗಳೂರು (ಸೇಲ್ಸ್ ಎಕ್ಸಿಕ್ಯುಟಿವ್)
6. ಪಂಚಮಿ ಜನಾರ್ದನ ಗೆಸ್ಟ್ಹೌಸ್, ಎಸ್ಡಿಎಂ ಉಜಿರೆ (ಸೆಕ್ಯುರಿಟಿ ಗಾರ್ಡ್ - 1 ವರ್ಷ ಕೆಲಸ)
7. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು, ಮೂಡಬಿದ್ರೆ (ಸೆಕ್ಯುರಿಟಿ ಗಾರ್ಡ್- 1 ವರ್ಷ ಕೆಲಸ)
8. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ (ಸೆಕ್ಯುರಿಟಿ ಗಾರ್ಡ್- 1 ವರ್ಷ ಕೆಲಸ)
9. ಉಡುಪಿ ಪುತ್ತಿಗೆ ಮಠ, ಹಿರಿಯಡ್ಕ ಅಡುಗೆ ಸಹಾಯಕ, ವೇದಾಧ್ಯಯನ (1 ವರ್ಷ ಕೆಲಸ)
10.  ಬಾರ್ ಅಂಡ್ ರೆಸ್ಟೋರೆಂಟ್, ಮಂಗಳೂರು  ಹಂಪನಕಟ್ಟೆ ಸರ್ವರ್ - ( 1 ವರ್ಷ ಕೆಲಸ)
11. ಆದಿತ್ಯ ಬಿರ್ಲಾ ಇನ್ಸೂರೆನ್ಸ್ ಕಂಪನಿ, ಬೆಂಗಳೂರು (ಸೇಲ್ಸ್ ಎಕ್ಸ್ಕ್ಯುಟಿವ್- 15 ದಿನ ಕೆಲಸ)
12. ಮೈಕ್ರಾನ್ ಗ್ರೈಂಡಿಂಗ್ ಟೆಕ್ನಾಲಜಿ, ಪೀಣ್ಯ, ಬೆಂಗಳೂರು ಅಸಿಸ್ಟೆಂಟ್- 1 ವರ್ಷ ಕೆಲಸ
 

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Mangaluru: ಎಂಆರ್‌ಪಿಎಲ್ ಹೊಸ ಮೈಲಿಗಲ್ಲು 1000ನೇ ಪೆಟ್‌ಕೋಕ್ ರೈಲು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ರವಾನೆ
Karnataka Rains: ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ