ಸಂಚಲನ ಸೃಷ್ಟಿಸಿದ ಶಾಮನೂರು ಶಿವಶಂಕರಪ್ಪ ಹೇಳಿಕೆ

Published : Feb 05, 2019, 11:56 AM IST
ಸಂಚಲನ ಸೃಷ್ಟಿಸಿದ ಶಾಮನೂರು ಶಿವಶಂಕರಪ್ಪ ಹೇಳಿಕೆ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಯೊಂದು ಸಂಚಲನವನ್ನೇ ಸೃಷ್ಟಿ ಮಾಡಿದೆ. 

ದಾವ​ಣ​ಗೆರೆ: ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರದಿಂದ ಎಚ್‌.​ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿ​ಸಿ​ದರೂ ಗೆಲ್ಲಿ​ಸುತ್ತೇವೆ. ಒಂದೊಮ್ಮೆ ನಾನೇ ದಾವ​ಣ​ಗೆರೆ ಅಭ್ಯ​ರ್ಥಿ​ಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲ​ಕ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೊಸ ಸಂಚ​ಲ​ನವನ್ನುಂಟು ಮಾಡಿದ್ದಾರೆ.

ತಾಲೂ​ಕಿನ ಬೆಳ​ವ​ನೂರು ಗ್ರಾಮ​ದಲ್ಲಿ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿಗೆ ಭೂಮಿ​ಪೂಜೆ ನೆರ​ವೇ​ರಿಸಿ ಮಾತ​ನಾ​ಡಿದ ಅವರು, ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲವಿದೆ. ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.

ಅಧಿ​ಕಾ​ರ​ದ​ಲ್ಲಿ​ ಯಾರಿ​ರು​ತ್ತಾರೋ ಅವರೇ ಮುಖ್ಯ​ಮಂತ್ರಿ. ನಮ್ಮ ಪಕ್ಷ​ದ​ವ​ರಿಗೆ ಒಬ್ಬ ಮುಖ್ಯ​ಮಂತ್ರಿ, ಮತ್ತೊಂದು ಪಕ್ಷಕ್ಕೆ ಇನ್ನೊಬ್ಬ ಮುಖ್ಯ​ಮಂತ್ರಿ ಅಂತಾ ಇರು​ವು​ದಿಲ್ಲ ಎಂದಿರುವ ಅವರು ಈ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಆಪರೇಷನ್‌ ಕಮಲ ಯಶಸ್ವಿಯಾಗಲ್ಲ:  ಬಿಜೆ​ಪಿ​ಯ​ವರ ಬಳಿ ಸಾಕಷ್ಟುದುಡ್ಡಿದೆ. ಇದೇ ಕಾರ​ಣಕ್ಕೆ ಆಪ​ರೇ​ಷನ್‌ ಕಮ​ಲಕ್ಕೆ ಮುಂದಾ​ಗು​ತ್ತಿ​ದ್ದಾರೆ. ಕಳೆದ 6 ತಿಂಗ​ಳಿ​ನಿಂದಲೂ ಬಿಜೆ​ಪಿ​ಯ​ವರು ಆಪ​ರೇ​ಷನ್‌ ಮಾಡಲು ಪ್ರಯ​ತ್ನಿ​ಸು​ತ್ತಿ​ದ್ದಾರೆ. ಆದರೆ, ಆಪ​ರೇ​ಷನ್‌ ಕಮಲ ಯಶ​ಸ್ವಿ​ಯಾಗುವುದಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ