
ಬೆಂಗಳೂರು, (ಜು.19): ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಓಪನ್ ಅಗುತ್ತಿದ್ದಂತೆಯೇ ಜನರು ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯೇ ಇದ್ದು ಸಾಕಾಗಿ ಇದೀಗ ಟೂರ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ.
ಅದರಂತೆಯೇ ಕೆಎಸ್ಆರ್ಟಿಸಿ ಕೂಡ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ವೀಕೆಂಡ್ ಆಫರ್ ಕೊಟ್ಟಿದ್ದು, ಬೆಂಗಳೂರಿನಿಂದ ಜೋಗಜಲಪಾತ ಮಾರ್ಗದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್
ವಯಸ್ಕರಿಗೆ 1900, ಮಕ್ಕಳಿಗೆ (6ರಿಂದ 12ದವರಿಗೆ) 1700 ರೂ ನಿಗದಿ ಮಾಡಲಾಗಿದ್ದು, ಶಿವಮೊಗ್ಗ, ಸಾಗರ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಟ್ರಿಪ್ ಹೋಗುವ ಪ್ಲಾನ್ ಮಾಡಿದವರಿಗೆ ಇದು ಅನುಕೂಲವಾಗಲಿದೆ.
ಇದೇ ಜುಲೈ 23 ಶುಕ್ರವಾರದಿಂದ ಎರಡು ದಿನದ ವೀಕೆಂಡ್ ಪ್ಯಾಕೆಜ್ ಟೂರ್ ಆರಂಭವಾಗಲಿದೆ. ಕೆಎಸ್ಆರ್ಟಿಸಿ ಆನ್ ಲೈನ್ ಮೂಲಕ ಬುಕಿಂಗ್ ಮಾಡಲು ಅವಕಾಶ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ