Santosh Patil Suicide Case: ಗಣಪತಿ ಕೇಸಲ್ಲಿ ಜಾರ್ಜ್‌ರನ್ನು ಬಂಧಿಸಿದ್ರಾ?: ಈಶ್ವರಪ್ಪ ಪ್ರಶ್ನೆ

By Girish GoudarFirst Published Apr 17, 2022, 6:10 AM IST
Highlights

*  ಸಂತೋಷ್‌ ಕೊಲೆಯಾಗಿರಬಹುದು ಎಂಬ ಡೌಟಿದೆ
*  ಆದಷ್ಟು ಬೇಗ ಪ್ರಕರಣದ ತನಿಖೆ ಪೂರ್ಣಗೊಂಡು ವರದಿ ಹೊರಬರಲಿ
*  ಯತ್ನಾಳ್‌, ಜಾರಕಿಹೊಳಿ ಹೇಳಿದಂತೆ ನಾನು ಹೇಳಲು ಸಾಧ್ಯವಿಲ್ಲ

ಶಿವಮೊಗ್ಗ(ಏ.17):  ಪೊಲೀಸ್‌ ಅಧಿ​ಕಾರಿ ಗಣಪತಿ(Ganatapati) ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿಬಂದಾಗ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್‌(KJ George) ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅವರನ್ನು ಬಂಧಿಸಿದ್ರಾ? ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನಃಸಾಕ್ಷಿ ಇದ್ದರೆ ಅದರಂತೆ ಹೇಳಿಕೆ ನೀಡಬೇಕು ಎಂದರು.
ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಕೈವಾಡ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಡಿಕೆಶಿ ಪಾತ್ರದ ಕುರಿತು ಯತ್ನಾಳ್‌, ಜಾರಕಿಹೊಳಿ ಹೇಳಿದಂತೆ ನಾನು ಹೇಳಲು ಸಾಧ್ಯವಿಲ್ಲ. ತನಿಖಾ ವರದಿ ಬರುವವರೆಗೂ, ಸ್ಪಷ್ಟತೆ ಸಿಗುವವರೆಗೂ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಮನೆ ದೇವರು ಚೌಡೇಶ್ವರಿ ದೇವಿಯ ಕೃಪೆಯಿಂದ ನಿರ್ದೋಷಿಯಾಗಿ ಹೊರಬರುವ ನಂಬಿಕೆಯಿದೆ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದ ತೀರ್ಮಾನದಂತೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದರು.

Latest Videos

Suicide Case: ಸಂತೋಷ್ ಪಾಟೀಲ್ ಸಾವಿಗೆ ಕಾರಣವಾದ ವಿಷ ಯಾವುದು ಗೊತ್ತಾ ?

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೋ? ಕೊಲೆಯೋ ಎಂಬ ಗುಮಾನಿ ಕಾಡತೊಡಗಿದೆ. ಮಾನನಷ್ಟ ಮೊಕದ್ದಮೆ ಸಂಬಂಧ ನೀಡಲಾದ ನೋಟೀಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದುಕೊಂಡಿದ್ದೆ. ಆದರೆ ಕೊಲೆ ನಡೆದಿರಬಹುದು ಎಂಬ ಸಂಶಯ ಇದ್ದು, ಆದಷ್ಟು ಬೇಗ ಪ್ರಕರಣದ ತನಿಖೆ ಪೂರ್ಣಗೊಂಡು ವರದಿ ಹೊರಬರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.

ಈಶ್ವರಪ್ಪ ಬಂಧನಕ್ಕಾಗಿ ರಾಜ್ಯಾದ್ಯಂತ 'ಕೈ' ಕಹಳೆ

ಬೆಂಗ​ಳೂ​ರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil Suicide) ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಾಲದು, ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಅಲ್ಲದೆ, ಬಂಧಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರ​ಹಿ​ಸಿ ಕಾಂಗ್ರೆಸ್‌ ಪಕ್ಷ ಶನಿವಾರ ತನ್ನ 5 ದಿನಗಳ ರಾಜ್ಯವ್ಯಾಪಿ ಸರಣಿ ಪ್ರತಿಭಟನೆಗೆ ಚಾಲನೆ ನೀಡಿತು.

ಹೋರಾಟದ ಅಂಗವಾಗಿ ಹಿರಿಯ ಕಾಂಗ್ರೆಸ್‌(Congress) ಮುಖಂಡರ ನೇತೃತ್ವದಲ್ಲಿ 9 ತಂಡಗಳನ್ನು ರಚಿಸಲಾಗಿದ್ದು, ಚಿಕ್ಕಮಗಳೂರಿ​ನಲ್ಲಿ ವಿಪಕ್ಷ ನಾಯಕ ಸಿದ್ದ​ರಾ​ಮ​ಯ್ಯ ಮತ್ತು ರಾಮ​ನ​ಗ​ರ​ದಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಶಿರ​ಸಿ​ಯಲ್ಲಿ ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಸತೀಶ್‌ ಜಾರ​ಕಿ​ಹೊಳಿ, ಹೊಸ​ಪೇ​ಟೆ​ಯಲ್ಲಿ ಮಾಜಿ ಸಚಿವ ಎಚ್‌.​ಕೆ.​ಪಾ​ಟೀಲ್‌, ಉಡು​ಪಿ​ಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪ​ರ​ಮೇ​ಶ್ವರ್‌, ಮಂಗ​ಳೂ​ರಿ​ನಲ್ಲಿ ವಿಧಾ​ನ​ಸಭೆ ವಿಪಕ್ಷ ಉಪ​ನಾ​ಯಕ ಯು.ಟಿ.​ಖಾ​ದರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೋರಾಟ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆ.ಎಸ್‌.ಈಶ್ವರಪ್ಪ ಅವರ ಬಂಧನದ ಅಣಕು ಪ್ರದರ್ಶನ ಮಾಡಿದರು. ಈ ವೇಳೆ ಪ್ರತಿ​ಭ​ಟನಾ ಸಭೆ​ಯಲ್ಲಿ ಮಾತ​ನಾ​ಡಿದ ವಿಪಕ್ಷ ನಾಯಕ ಸಿದ್ದ​ರಾ​ಮ​ಯ್ಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಅವರನ್ನು ದಸ್ತಗಿರಿ ಮಾಡಬೇಕು ಎಂದು ಆಗ್ರ​ಹಿ​ಸಿ​ದ​ರು.

ಈಶ್ವರಪ್ಪನವರೇ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವ ತಾಕತ್ ಇದ್ಯಾ?: ಹಿಂದೂ ಮಹಾಸಭಾ ಸವಾಲ್

ಇನ್ನು ರಾಮ​ನ​ಗ​ರ​ದಲ್ಲಿ ಮಾತ​ನಾ​ಡಿದ ಡಿ.ಕೆ.​ಶಿವಕುಮಾರ್‌, ಸಂತೋಷ್‌ ಆತ್ಮ​ಹತ್ಯೆ ಪ್ರಕ​ರ​ಣದ ತನಿಖೆ ನಡೆ​ಸಲು ರಾಜ್ಯ ಸರ್ಕಾ​ರಕ್ಕೆ ತಾಕತ್ತು ಇಲ್ಲ​ದಿ​ದ್ದರೆ ಸಿಬಿ​ಐಗೆ(CBI) ವಹಿ​ಸಲಿ ಎಂದರು. ಶಿರ​ಸಿ​ಯಲ್ಲಿ ಮಾತ​ನಾ​ಡಿದ ಸತೀಶ್‌ ಜಾರ​ಕಿ​ಹೊಳಿ, ಕಾಂಗ್ರೆಸ್‌ ಹೋರಾಟಕ್ಕೆ ಮಣಿದು ಬಿಜೆಪಿ ಸರ್ಕಾರ ಈಶ್ವರಪ್ಪ ಅವರ ರಾಜೀನಾಮೆ ಪಡೆದಿದೆ. ಅವರನ್ನು ಜೈಲಿಗಟ್ಟುವವರೆಗೂ ಎರಡನೇ ಹಂತದ ಪ್ರತಿಭಟನೆ ರಾಜ್ಯದ(Karnataka) ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿ​ಸಿ​ದ​ರು.

ಈ ಪ್ರಕರಣದಲ್ಲಿ ಈಶ್ವರಪ್ಪನವರೇ ಎ1 ಆರೋಪಿ, ಆದ್ದರಿಂದ ಎ1 ಆರೋಪಿಯನ್ನು ಬಂಧನ ಮಾಡಬೇಕಲ್ವಾ ಎಂದು ಉಡು​ಪಿ​ಯಲ್ಲಿ ಪ್ರಶ್ನಿ​ಸಿದ ಮಾಜಿ ಉಪಮುಖ್ಯಮಂತ್ರಿ ಪರ​ಮೇ​ಶ್ವ​ರ್‌, ಮುಂದೆ ಇಂತ ಭ್ರಷ್ಟಾಚಾರ ಪ್ರಕರಣ ಆಗಬಾರದೆಂದರೆ ತಕ್ಷಣ ಈಶ್ವರಪ್ಪನವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

click me!