ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇನ್ನು ಎಐ ಆಧಾರಿತ ಹಾಜರಾತಿ! 'ನಿರಂತರ' ಯೋಜನೆಗೆ ಸರ್ಕಾರ ₹2.83 ಕೋಟಿ ಅನುದಾನ

Kannadaprabha News   | Kannada Prabha
Published : Mar 31, 2026, 11:35 AM IST
Karnataka to Launch AI Based Attendance in Government Schools Under Nirantara Project

ಸಾರಾಂಶ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎಐ ಆಧಾರಿತ ಮುಖ ಚಹರೆ ಮೂಲಕ ಹಾಜರಾತಿ ದಾಖಲಿಸುವ 'ನಿರಂತರ' ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗಾಗಿ SATS ತಂತ್ರಾಂಶದ ಉನ್ನತೀಕರಣ ಸೇರಿದಂತೆ ಒಟ್ಟು ₹2.83 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು (ಮಾ.31) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು ಎಐ ಆಧಾರಿತ (ಮುಖ ಚಹರೆ) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ ‘ನಿರಂತರ’ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನಿಗದಿತ ₹2.83 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ. 

ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಎಸ್ಎಟಿಎಸ್ (ವಿದ್ಯಾರ್ಥಿಗಳ ಸಾಧನೆ ನಿರ್ವಹಣಾ ವ್ಯವಸ್ಥೆ) ತಂತ್ರಾಂಶದ ಉನ್ನತೀಕರಣ/ ನವೀಕರಣಕ್ಕಾಗಿ ಒರಾಕಲ್ ಸಾಫ್ಟ್‌ವೇ‌ರ್ ಲೈಸೆನ್ಸ್ ಖರೀದಿಸಲು ಹಾಗೂ ಯೋಜನೆಯನ್ನು ನಿರಂತರ ಮುಂದಿನ ಹತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸುವ ಉದ್ದೇಶದಿಂದ ಅಪ್ ಗ್ರೇಡ್ ಮಾಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿತ್ತು.

ಇದನ್ನೂ ಓದಿ: ಲೆಕ್ಕಕ್ಕಿಲ್ಲದ ಹಿಂದಿ ಪರೀಕ್ಷೆ ಇಂದು: ಫಲಿತಾಂಶದಲ್ಲಿ ಇಳಿಕೆ ಆತಂಕ, ವಿದ್ಯಾರ್ಥಿಗಳು ಹೇಳೋದೇನು?

ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಸರ್ಕಾರ ನಿಗದಿಪಡಿಸಿರುವ 5 ಕೋಟಿ ರು.ಗಳಲ್ಲಿ 2.83 ಕೋಟಿ ರು. ಬಿಡುಗಡೆ ಮಾಡಲು ಇಲಾಖೆ ಅನುಮೋದನೆ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಖರೀದಿಸುವುದರ ಹೊಣೆಯನ್ನು ಶಾಲಾ ಶಿಕ್ಷಣ ಆಯುಕ್ತರಿಗೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂಸದ ಸಾಗರ್ ಖಂಡ್ರೆ ಹೆಸರೇಳಿಕೊಂಡು ಭಗವಂತ ಖೂಬಾರಿಗೆ ಜೀವ ಬೆದರಿಕೆ! FIR
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: ತಾನೇ ಬೆಳೆದ ನಾಲ್ಕು ಎಕರೆ ಹೂಕೋಸು ನಾಶಪಡಿಸಿದ ರೈತ!