Prajaseve: ಇನ್ನು ಕಚೇರಿ ಸುತ್ತಾಟ ಬೇಡ, ಮನೆ ಬಾಗಿಲಿಗೇ ಬರಲಿದ್ದಾರೆ ಸಚಿವರು, ಡಿಕೆಶಿ ಸರ್ಕಾರ ಹೊಸ 'ಪ್ರಜಾಸೇವೆ' ಆರಂಭ! ಯಾವಾಗ ಬರ್ತಾರೆ?

Kannadaprabha News   | Kannada Prabha
Published : Jul 03, 2026, 06:58 AM IST
Karnataka Prajaseve Campaign Ministers Visit Doorsteps to Hear Public Grievances

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ಪ್ರಜಾಸೇವೆ' ಅಭಿಯಾನದ ಅಡಿಯಲ್ಲಿ, ಜಿಲ್ಲಾ ಸಚಿವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗುವ ಈ ಯೋಜನೆಗಾಗಿ ಪ್ರತ್ಯೇಕ ಸಚಿವಾಲ ಸಹ ರಚಿಸಿದೆ

 ಬೆಂಗಳೂರು (ಜು.3): ಪ್ರಜಾಸೇವೆ ಇಲಾಖೆ ಅಭಿಯಾನದ ಭಾಗವಾಗಿ ಜಿಲ್ಲಾ ಸಚಿವರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದ ಎರಡು ದಿನಗಳ ಕಾಲ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಯಾವಾಗ ಬರ್ತಾರೆ ಸಚಿವರು?

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರತಿ ತಿಂಗಳು 2 ದಿನ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ಪ್ರತಿ ಮೊದಲ ಹಾಗೂ ಮೂರನೇ ಶನಿವಾರ ಕಾರ್ಯಕ್ರಮ ನಡೆಸಬೇಕು. ಶನಿವಾರ ಸರ್ಕಾರಿ ರಜೆ ಇದ್ದರೆ ಅದರ ಹಿಂದಿನ ದಿನವೇ ನಡೆಸಬೇಕು ಎಂದು ಹೇಳಿದರು.

ಸರ್ಕಾರವೇ ಜನರ ಮನೆಗೆ ಹೋಗಬೇಕು:

ಈ ವೇಳೆ ಎಲ್ಲಾ ಇಲಾಖೆಗಳ ಶಾಖೆಗಳು ಅಲ್ಲಿ ತೆರೆಯಲಾಗುವುದು. ಆ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿರಬೇಕು. ಆ ಭಾಗದ ಜನರಿಗೆ ಈ ಸಭೆ ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕು. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗುವಂತಾಗಬೇಕು. ನಾನು ಕೂಡ ಕೆಲವು ತಾಲೂಕುಗಳಿಗೆ ಮಧ್ಯೆ ಮಧ್ಯೆ ಭೇಟಿ ಮಾಡುತ್ತೇನೆ ಎಂದು ಶಿವಕುಮಾರ್‌ ಹೇಳಿದರು.

ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವಾಲಯ

ಜನರ ಸಮಸ್ಯೆ ಆಲಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ರೂಪಿಸುತ್ತಿದ್ದು, ಸಚಿವರಿಗೆ ಇದರ ಜವಾಬ್ದಾರಿ ವಹಿಸಲಾಗುವುದು. ಯಾರ ದೂರೇ ಇರಲಿ, ಸಮಸ್ಯೆ ಇರಲಿ, ಪ್ರತಿಭಟನೆ ಮಾಡುವವರು ತಮ್ಮ ನೋವು ಹೇಳಿಕೊಳ್ಳಲು ಹಾಗೂ ಅವರ ಸಮಸ್ಯೆ ಬಗೆಹರಿಸಲು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಆ ವಿಚಾರ ತಲುಪಿಸಲು ಈ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಅರ್ಜಿ ಸ್ವೀಕರಿಸಿ ಕಾನೂನು ಬದ್ಧವಾಗಿ ಸಹಾಯ

ಇದಕ್ಕೆ ಐಎಎಸ್ ಅಧಿಕಾರಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು, ಅಗತ್ಯ ಅಧಿಕಾರಿಗಳನ್ನು ನೀಡಲು ಇಂದು ತೀರ್ಮಾನಿಸಲಾಗಿದೆ. ಎಲ್ಲೇ ಪ್ರತಿಭಟನೆ ನಡೆದರೂ ಅವರ ಅರ್ಜಿ ಸ್ವೀಕರಿಸಿ ಕಾನೂನುಬದ್ಧವಾಗಿ ಸಹಾಯ ಮಾಡಲು ಅವಕಾಶವಿದ್ದರೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂ ವ್ಯಾಜ್ಯದ ಠೇವಣಿ ಹಣ ಬಿಡುಗಡೆಗೆ ಲಂಚ; ಕೇಂದ್ರ ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ, ಬಂಧನ ವೇಳೆ ಹೈಡ್ರಾಮ!
ವಿಶೇಷ ಚೇತನರಿಗೆ ಬಂಪರ್ ಕೊಡುಗೆ: KIADB ಸೈಟ್‌ ದರದಲ್ಲಿ 20 ಲಕ್ಷವರೆಗೆ ರಿಯಾಯ್ತಿ! ಸಿಎಂ ಡಿಕೆ ಶಿವಕುಮಾರ್ ಮಹತ್ವ ನಿರ್ಧಾರ