LIVE NOW
Published : Sep 19, 2026, 07:19 AM ISTUpdated : Sep 19, 2026, 09:00 AM IST

Karnataka News 19th Sep Live Updates: ಕರಾವಳಿಯ ಭವಿಷ್ಯ ಬರೆದ ಮಂಗಳೂರು ಸಂಪುಟ ಸಭೆಯ ಅಚ್ಚರಿಯ ನಿರ್ಧಾರ! ಈ 11 ಪಾಯಿಂಟ್‌ ತಪ್ಪದೇ ತಿಳಿಯಿರಿ

ಸಾರಾಂಶ

ಉಡುಪಿ: ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಅಧಿಸೂಚನೆ ಜಾರಿ ವಿರುದ್ಧ ಸೆ. 21, 22, 23 ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಅವರು ಶುಕ್ರವಾರ, ಇಲ್ಲಿನ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಈ ಅಧಿಸೂಚನೆ ಜಾರಿ ಬಗ್ಗೆ ಸ್ಥಳೀಯರ ಅಭಿಪ್ರಾಯ ಆಲಿಸಿ ಮಾತನಾಡಿದರು.

ಅವರು ಸಭೆಯಲ್ಲಿ ಅಧಿಸೂಚನೆಯ ಪರ ಅಥವಾ ವಿರುದ್ಧ ಸ್ಪಷ್ಟ ನಿರ್ಣಯವನ್ನು ಘೋಷಿಸಲಿಲ್ಲ, ಆದರೆ, ಜನರ ಅಭಿಪ್ರಾಯವೇ ನನ್ನ ಸರ್ಕಾರದ ಅಭಿಪ್ರಾಯ, ನಾನು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿಗಾಗಿ ರಾಜಕಾರಣ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

08:58 AM (IST) Sep 19

ಕರಾವಳಿಯ ಭವಿಷ್ಯ ಬರೆದ ಮಂಗಳೂರು ಸಂಪುಟ ಸಭೆಯ ಅಚ್ಚರಿಯ ನಿರ್ಧಾರ! ಈ 11 ಪಾಯಿಂಟ್‌ ತಪ್ಪದೇ ತಿಳಿಯಿರಿ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಕರಾವಳಿ ಅಭಿವೃದ್ಧಿಗಾಗಿ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೂ ಚಿಂತನೆ ನಡೆಸಲಾಗಿದೆ.
Read Full Story

08:41 AM (IST) Sep 19

ನರಕ ಆಯ್ತು ಹನಿಮೂನ್‌ ಸಂಭ್ರಮ, ನವವಧುವಿನ ಮೇಲೆ ಹಾರಿಬಂದ ಬೆಂಕಿಯ ಚೆಂಡು VIDEO

ಪಶ್ಚಿಮ ಬಂಗಾಳದ ಸಿಟಾಂಗ್‌ನ ರೆಸಾರ್ಟ್‌ನಲ್ಲಿ ಹನಿಮೂನ್‌ಗೆ ತೆರಳಿದ್ದ ನವವಧು ನಿಕಿತಾ ದಾಸ್ ಬಾರ್ಬೆಕ್ಯೂ ವೇಳೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಂಧನ ಸುರಿದ ಪರಿಣಾಮ ಬೆಂಕಿ ಸ್ಫೋಟಗೊಂಡಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೆಸಾರ್ಟ್‌ನ ಭದ್ರತಾ ಲೋಪದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

08:33 AM (IST) Sep 19

ರಾಜ್ಯದ ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆ - ಜಲಸಂಪನ್ಮೂಲ ಇಲಾಖೆಯಿಂದಲೇ ಶಾಕಿಂಗ್ ಮಾಹಿತಿ!

ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ 100 ಟಿಎಂಸಿ ನೀರು ಕಡಿಮೆಯಾಗಿದ್ದು, 120ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ.

Read Full Story

08:07 AM (IST) Sep 19

Bengaluru Shock - ಗಣೇಶ ವಿಸರ್ಜನೆಗೆ ಪಟಾಕಿ ತರುವ ನೆಪದಲ್ಲಿ ಬಿಜೆಪಿ ಮುಖಂಡನ ಪುತ್ರನ ಕಗ್ಗೊಲೆ!

ಹಣಕ್ಕಾಗಿ ತನ್ನ ನೆರೆಮನೆ ರಿಯಲ್ ಎಸ್ಟೇಟ್ ಏಜೆಂಟ್‌ರೊಬ್ಬರ 13 ವರ್ಷದ ಮಗನನ್ನು ಅಪಹರಿಸಿ ಹ೧ತ್ಯೆಗೈದು ಬಳಿಕ ಮೃತದೇಹದ ಜತೆ ಸಮೇತ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಾರು ಅಪಘಾತಕ್ಕೀಡಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಸಿನಿಮೀಯ ಶೈಲಿಯ ಘಟನೆ ಚಿಕ್ಕಜಾಲ ಸಮೀಪ ನಡೆದಿದೆ.

Read Full Story

07:30 AM (IST) Sep 19

ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಸೆ.21ರ ವಿಶೇಷ ಅಧಿವೇಶನದಲ್ಲಿ ನಿರ್ಣಯ - ಹೆಬ್ರಿಯಲ್ಲಿ ಸಿಎಂ ಡಿಕೆಶಿ ಭರವಸೆ

ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಹೆಬ್ರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಜನರ ಅಭಿಪ್ರಾಯ ಆಲಿಸಿದರು. ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆಯುವ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ವರದಿ ಬಾಧಿತ ಪ್ರದೇಶಗಳಲ್ಲಿ ಭೌತಿಕ ಸರ್ವೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Read Full Story

More Trending News