Published : May 09, 2025, 07:26 AM ISTUpdated : May 10, 2025, 09:52 AM IST

Karnataka News Live: ಜಾತಿ ಗಣತಿ, ಸಚಿವ ಸಂಪುಟ ಸಭೆಯಲ್ಲಿ ಲಿಖಿತ ಅಭಿಪ್ರಾಯ ಸಲ್ಲಿಕೆ

ಸಾರಾಂಶ

ಬೆಂಗಳೂರು (ಮೇ.09): ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿಗಣತಿ) ವಿಚಾರವಾಗಿ ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ. ಜಾತಿಗಣತಿ ವರದಿ ಕುರಿತು ಸಚಿವ ಸಂಪುಟ ಸಭೆ ಯಾವ ನಿರ್ಧಾರ ಮಾಡಲಿದೆ ಎಂಬ ಬಗ್ಗೆ ಇದೀಗ ತೀವ್ರ ಕುತೂಹಲ ಮೂಡಿದೆ. ಏ.17 ರಂದು ನಡೆದ ಜಾತಿಗಣತಿ ವರದಿ ಕುರಿತು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 

Karnataka News Live: ಜಾತಿ ಗಣತಿ, ಸಚಿವ ಸಂಪುಟ ಸಭೆಯಲ್ಲಿ ಲಿಖಿತ ಅಭಿಪ್ರಾಯ ಸಲ್ಲಿಕೆ

09:15 PM (IST) May 09

ಭಾರತ-ಪಾಕ್​ ನಡುವೆ ಘರ್ಷಣೆ ನಡುವೆಯೇ ದೇಶಾದ್ಯಂತ ವಿಜಯ ದೇವರಕೊಂಡ ಫ್ರೀ ಐಸ್​ಕ್ರೀಮ್​!

ಇಂದು ನಟ ವಿಜಯ ದೇವರಕೊಂಡ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಉಚಿತ ಐಸ್​ಕ್ರೀಮ್​ ಹಂಚುವ ಯೋಜನೆ ಜಾರಿಗೊಳಿಸಿದ್ದಾರೆ.  ಏನಿದರ ವಿಶೇಷತೆ? 

ಪೂರ್ತಿ ಓದಿ

08:29 PM (IST) May 09

ಏಷಿಯಾದ ದುಬಾರಿ ನಟರಲ್ಲಿ ನಂ 1 ಸ್ಥಾನ ಪಡೆದ ಬೆಂಗಳೂರಿನ ಕನ್ನಡಿಗ! ಯಾರದು?

ಭಾರತೀಯ ಚಿತ್ರರಂಗದಲ್ಲಿ ಕೆಲವರು ಪ್ರಕಾಶಮಾನವಾಗಿ ಹೊಳೆಯುತ್ತಾರೆ, ಇನ್ನು ಕೆಲವರು ಯಶಸ್ಸು ಸಾಧಿಸಲಾಗದೆ ಮರೆಯಾಗುತ್ತಾರೆ. ಈಗ ಬೆಂಗಳೂರಿನ ಮೂಲದ ವ್ಯಕ್ತಿ ಏಷಿಯಾದ ದುಬಾರಿ ನಟ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 

ಪೂರ್ತಿ ಓದಿ

07:17 PM (IST) May 09

ಸಿದ್ದಿ ಮನೆಯಲ್ಲಿ ನೈಟಿ ಧರಿಸಿ ಫುಲ್ ಎಸಿ ಎಂದ ಸುಕೃತಾ ! ಹಳ್ಳಿಯಲ್ಲಿ ಭರ್ಜರಿ ಬ್ಯಾಚುಲರ್ಸ್

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭರ್ಜರಿ ಬ್ಯಾಚುಲರ್ಸ್ ಟೀಂ ಈಗ  ಹಳ್ಳಿ ಸೇರಿದೆ. ಸಿದ್ದಿ ಜೀವನದ ಅನುಭವ ಪಡೆದ ಸ್ಪರ್ಧಿಗಳ, ಹಳ್ಳಿ ಜೀವನ ಎಂಜಾಯ್ ಮಾಡ್ತಿದ್ದಾರೆ. 
 

ಪೂರ್ತಿ ಓದಿ

12:49 PM (IST) May 09

ಟ್ರಾಫಿಕ್ ನಿಯಮ ಹೇಳಿ ಕೋಟಿ ಕೋಟಿ ಬಾಚಿದ ಕನ್ನಡದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ

Kannada Movie: ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳನ್ನು ಚಿತ್ರಿಸುವ ಯು ಟರ್ನ್ ಚಿತ್ರವು, 2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 10.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಫ್ಲೈಓವರ್ ಮೇಲೆ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸುವುದರಿಂದ ಉಂಟಾಗುವ ಅಪಾಯಗಳನ್ನು ಮತ್ತು ತಾಯಿ-ಮಗುವಿನ ಸಾವಿಗೆ ಕಾರಣರಾದವರನ್ನು ಹುಡುಕುವ ಕಥೆಯನ್ನು ಹೊಂದಿದೆ.

ಪೂರ್ತಿ ಓದಿ

12:30 PM (IST) May 09

ಸ್ವತಃ ಆ ಮಂತ್ರ ಹೇಳಿ ತಾಳಿ ಕಟ್ಟಿಸಿಕೊಂಡ ಚೈತ್ರಾ ಕುಂದಾಪುರ; ಅಣ್ಣನ ಶಾಸ್ತ್ರ ಮಾಡಿದ ರಜತ್!‌ ವಾವ್...ಎಂಥ ಗಳಿಗೆ..!

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯಲ್ಲಿ ಭಾವುಕರಾದ ಚೈತ್ರಾ, ದೇವರ ಪ್ರಾರ್ಥನೆಯೊಂದಿಗೆ ತಾಳಿ ಕಟ್ಟಿಸಿಕೊಂಡರು.

ಪೂರ್ತಿ ಓದಿ

11:27 AM (IST) May 09

ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಇಳಿಕೆ.... ಚಿನ್ನದಂಗಡಿಗೆ ಜನರ ದಾಂಗುಡಿ

ಭಾರತ-ಪಾಕಿಸ್ತಾನ ಯುದ್ಧದ ನಡುವೆ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆ ಏರಿಕೆ ಕಂಡ ಚಿನ್ನದ ದರ ಇಂದು ತುಸು ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಪೂರ್ತಿ ಓದಿ

More Trending News