ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ತೆಗೆಸಿದ ವಿವಾದ; ಅಧಿಕಾರಿ ವಿರುದ್ಧ ಸಚಿವ ಕೆಎನ್‌ ರಾಜಣ್ಣ ಗರಂ

Published : Oct 20, 2024, 05:11 PM IST
ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ತೆಗೆಸಿದ ವಿವಾದ; ಅಧಿಕಾರಿ ವಿರುದ್ಧ ಸಚಿವ ಕೆಎನ್‌ ರಾಜಣ್ಣ ಗರಂ

ಸಾರಾಂಶ

ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ಇಟ್ಟುಬಿಟ್ಟರು. ಯಾಕಪ್ಪ ಹಾಗೆ ಮಾಡೋಕೆ ಹೋದ್ರಿ? ಏನೇ ಕೆಲಸ ಮಾಡ್ಬೇಕಾದ್ರೂ ವ್ಯವಸ್ಥಿತವಾಗಿ ಎಲ್ಲರೂ ಸೇರಿಕೊಂಡು ಮಾಡಬೇಕು. ಕದ್ದು ಇಡುವುದು ಯಾಕೆ? ಎಂದು ವಾಲ್ಮೀಕಿ ಮೂರ್ತಿ ತೆಗೆದ ವಿಚಾರಕ್ಕೆ ಸಚಿವ ಕೆಎನ್‌ ರಾಜಣ್ಣ ಗರಂ ಆದ ಘಟನೆ ನಡೆಯಿತು.

ತುಮಕೂರು (ಅ.20): ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ಇಟ್ಟುಬಿಟ್ಟರು. ಯಾಕಪ್ಪ ಹಾಗೆ ಮಾಡೋಕೆ ಹೋದ್ರಿ? ಏನೇ ಕೆಲಸ ಮಾಡ್ಬೇಕಾದ್ರೂ ವ್ಯವಸ್ಥಿತವಾಗಿ ಎಲ್ಲರೂ ಸೇರಿಕೊಂಡು ಮಾಡಬೇಕು. ಕದ್ದು ಇಡುವುದು ಯಾಕೆ? ಎಂದು ವಾಲ್ಮೀಕಿ ಮೂರ್ತಿ ತೆಗೆದ ವಿಚಾರಕ್ಕೆ ಸಚಿವ ಕೆಎನ್‌ ರಾಜಣ್ಣ ಗರಂ ಆದ ಘಟನೆ ನಡೆಯಿತು.

ಇಂದು ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಸಚಿವರು, ಅವನ್ಯಾರೋ ಮೂರ್ಖ ಅಧಿಕಾರಿ ರಾತ್ರೊರಾತ್ರಿ ವಾಲ್ಮೀಕಿ ಮೂರ್ತಿ ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು. ನೀವು ಮಾಡೋದು ತಪ್ಪು, ಅವರು ಮಾಡೋದೂ ತಪ್ಪು. ಯಾರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದರು.

ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ರೆ ಸಚಿವ ಸ್ಥಾನ ಬಿಡಲು ಸಿದ್ಧ: ಕೆಎನ್‌ ರಾಜಣ್ಣ

ಇನ್ನು ಮೂಡ ಹಗರಣ ವಿಚಾರವಾಗಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಏನು ಸೈಟ್ ಬೇಕು ಅಂತಾ ಅರ್ಜಿ ಹಾಕಿದ್ರ? ಯಾರಿಗಾದ್ರೂ ಫೋನ್ ಮಾಡಿದ್ರ? ಸಿಎಂ ಸಿದ್ದರಾಮಯ್ಯರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಡವರ ಯೋಚಿಸುವವರು, ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದವರು, ಹಸಿವಿನಿಂದ ಯಾರೂ ಮಲಗಬಾರದು ಅಂತಾ ಯೋಜನೆ ತಂದರು. ಸಿದ್ಸರಾಮಯ್ಯ ಏನು ಕುರುಬರಿಗೆ ಮಾತ್ರ ಯೋಜನೆ ಜಾರಿ ಮಾಡಿದ್ರ? ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಮಾಡ್ಲಿ ಅಂತ ಅದನ್ನ ಮಾಡಿದ್ರು. ಅಂತಹ ಜನಪರ ನಾಯಕನಿಗೆ ವಿರೋಧಿಗಳ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್: ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ನಟ ದರ್ಶನ್ ದರ್ಪ
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ