'ಹೊಸ ಸಚಿವರ ಪರಿಚಯ ಬೇಕಿಲ್ಲ, ನಿಮಗೆ ಪರಿಚಯಿಸಿದ್ದೇ ನಾವು'

Published : Feb 19, 2020, 11:12 AM IST
'ಹೊಸ ಸಚಿವರ ಪರಿಚಯ ಬೇಕಿಲ್ಲ, ನಿಮಗೆ ಪರಿಚಯಿಸಿದ್ದೇ ನಾವು'

ಸಾರಾಂಶ

ಹೊಸ ಸಚಿವರ ಪರಿಚಯ ಬೇಕಿಲ್ಲ, ನಿಮಗೆ ಪರಿಚಯಿಸಿದ್ದೇ ನಾವು| ಬಿಎಸ್‌ವೈಗೆ ಸಿದ್ದರಾಮಯ್ಯ ವ್ಯಂಗ್ಯ ಮಾತಿನೇಟು| ಅವರನ್ನು ಬಿಜೆಪಿಗೆ ಪರಿಚಯಿಸಿದ್ದೇ ನಾವು| ಅವರೆಲ್ಲ ಕಾಂಗ್ರೆಸ್ಸಿಂದಲೇ ಹೋದವರು

ಬೆಂಗಳೂರು[ಫೆ.19]: ನೂತನ ಸಚಿವರನ್ನು ಸದನಕ್ಕೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಎಲ್ಲಾ ಸಚಿವರೂ ಇಲ್ಲಿಂದ (ಕಾಂಗ್ರೆಸ್‌) ಹೋದವರೇ ಆಗಿರುವುದರಿಂದ ನಮಗೆ ಪ್ರತ್ಯೇಕವಾಗಿ ಪರಿಚಯಿಸಬೇಕಾಗಿಲ್ಲ. ಅವರನ್ನು ನಿಮಗೆ ಪರಿಚಯಿಸಿರುವುದೇ ನಾವು...

ತಮ್ಮ ಸಂಪುಟಕ್ಕೆ ನೂತನವಾಗಿ ಸೇರಿದ ಸಚಿವರನ್ನು ಪರಿಚಯ ಮಾಡಲು ಎದ್ದುನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಗಿ ಚುಚ್ಚಿದ ರೀತಿಯಿದು.

'ಯಡಿಯೂರಪ್ಪಗೆ ಮದುವೆ ಮಾಡಲಾಗಿದೆ, ಆದರೆ ಪ್ರಸ್ತ ಮಾಡಲು ಬಿಡ್ತಿಲ್ಲ'

ಮಂಗಳವಾರ ವಿಧಾನಸಭೆಯಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಈ ವೇಳೆ ಆನಂದ್‌ ಸಿಂಗ್‌, ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವರು ಸದಸ್ಯರು ಹಾಜರಿರಲಿಲ್ಲ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನೂತನ ಸಚಿವರೇ ಸದನದಲ್ಲಿ ಹಾಜರಿಲ್ಲ. ನೀವು ಯಾರಿಗೆ ಯಾರನ್ನು ಪರಿಚಯ ಮಾಡಿಕೊಡುತ್ತಿದ್ದೀರಿ ಎಂಬುದೇ ತಿಳಿಯುವುದಿಲ್ಲ. ಅವರಿಗೆ ಸದನಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲದಿದ್ದರೆ ನೀವು ಏಕೆ ಪರಿಚಯ ಮಾಡಿಕೊಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸರ್ಕಾರ ಬೀಳಿಸಿದ 17 ಶಾಸಕರ ಫೋಟೋಕ್ಕೆ ಪೂಜೆ ಮಾಡಬೇಕು!'

ಜತೆಗೆ, ಅವರೆಲ್ಲಾ ಇಲ್ಲಿಂದಲೇ ಹೋದವರು. ಅವರ ಪರಿಚಯವನ್ನು ಪ್ರತ್ಯೇಕವಾಗಿ ಮಾಡಿಕೊಡುವ ಅಗತ್ಯವಿಲ್ಲ. ನಾವೇ ಅವರನ್ನು ನಿಮಗೆ ಪರಿಚಯಿಸಿದ್ದೇವೆ ಎಂದಾಗ ಕೆಲಹೊತ್ತು ಸದನ ನಗೆಗಡಲಲ್ಲಿ ತೇಲಿತು.

ಬಳಿಕ ಬಿ.ಎಸ್‌. ಯಡಿಯೂರಪ್ಪ ಅವರು, ನೂತನ ಸಚಿವರಾದ ಬೈರತಿ ಬಸವರಾಜು, ಬಿ.ಸಿ. ಪಾಟೀಲ್‌, ಡಾ.ಕೆ. ಸುಧಾಕರ್‌, ಶಿವರಾಂ ಹೆಬ್ಬಾರ್‌ ಅವರನ್ನು ಸದನಕ್ಕೆ ಪರಿಚಯಿಸಿದರು.

'ಟ್ರಂಪ್‌ಗೆ ಆರ್ಥಿಕ ಕುಸಿತ ಕಾಣದಂತೆ ಯಾವ ಗೋಡೆ ಕಟ್ತೀರಿ?'

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ