LIVE NOW
Published : Mar 06, 2026, 07:53 AM ISTUpdated : Mar 06, 2026, 11:11 AM IST

Karnataka Budget - ಮಕ್ಕಳ ಕಾಳಜಿಗೆ ಸರ್ಕಾರದ ಆದ್ಯತೆ, 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!

ಸಾರಾಂಶ

ಹಣದ ಬರ, ಗ್ಯಾರಂಟಿಗಳ ಭಾರ, ನಿರೀಕ್ಷೆಗಳ ಹೊರೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಅಣಿಯಾಗಿದ್ದು, ಆರ್ಥಿಕ ಶಿಸ್ತು ಸರಿದಾರಿಗೆ ತರುವ ಜತೆ ಜನರ ನಿರೀಕ್ಷೆ ಈಡೇರಿಕೆಗೂ ಆದ್ಯತೆ ನೀಡುವ ಸಾಧ್ಯತೆಯಿದೆ. ರಾಜ್ಯದ ಮಟ್ಟಿಗೆ ಅತಿ ಹೆಚ್ಚು ಹಾಗೂ ದೇಶದಲ್ಲಿ ಎರಡನೇ ಅತಿ ಹೆಚ್ಚು ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ಕರ್ನಾಟಕದ ಆಯ-ವ್ಯಯ ಲೆಕ್ಕ ಬಿಚ್ಚಿಡಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಡಿವಾಣ ಹಾಕದೆ ಆರ್ಥಿಕ ಶಿಸ್ತು ಪಾಲನೆಗೆ ಬಜೆಟ್‌ನಲ್ಲಿ ಸಿಎಂ ಒತ್ತು ನೀಡುವ ಸಾಧ್ಯತೆ ಇದೆ.

 

11:11 AM (IST) Mar 06

Karnataka Budget - ಮಕ್ಕಳ ಕಾಳಜಿಗೆ ಸರ್ಕಾರದ ಆದ್ಯತೆ, 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!

ಸಿದ್ದರಾಮಯ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಸಿದೆ. ಮಕ್ಕಳ ಮೇಲೆ ಮೊಬೈಲ್ ಬಳಕೆಯ ಅಡ್ಡಪರಿಣಾಮಗಳನ್ನು ತಡೆಯುವ ಈ ನಿರ್ಧಾರಕ್ಕೆ ಬೆಂಬಲ. ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ಮೂಲಕ ಈ ನಿಯಮವನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

Read Full Story

11:11 AM (IST) Mar 06

ಆದಾಯ ಹಂಚಿಗೆ ಎಲ್ಲೆಲ್ಲಿಗೆ ಹೇಗೆ?

ಹಂಚಿಕೆಗಳು ಕೋಟಿ ರೂಗಳಲ್ಲಿ 
ಪಶುಸಂಗೋಪನೆ, ಮೀನುಗಾರಿಕೆ - 4084
ಕೃಷಿ ತೋಟಗಾರಿಕೆ 8373
ಆಹಾರ ನಾಗರಿಕ ಸರಬರಾಜು 7942 
ಲೋಕೋಪಯೋಗಿ 11424
ಸಮಾಜಕಲ್ಯಾಣ 18612
ಕಂದಾಯ 19843 
ಆರೋಗ್ಯ 17817
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ 34929
ಇಂಧನ 29942
ಗ್ರಾಮೀಣಾಭಿವೃದ್ಧಿ 26559
ನೀರಾವರಿ 22436
ನಗರಾಭಿವೃದ್ಧಿ ಮತ್ತು ವಸತಿ 22203
ಒಳಾಡಳಿತ ಸಾರಿಗೆ 23100
ಶಿಕ್ಷಣ-47224

11:07 AM (IST) Mar 06

ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಅಭಿವೃದ್ಧಿ ಪ್ರಾಧಿಕಾರ ರಚನೆ.

11:04 AM (IST) Mar 06

Karnataka Budget - ಈ ಬಾರಿ 1.32 ಲಕ್ಷ ಕೋಟಿ ಸಾಲಕ್ಕೆ ಸಿದ್ದರಾಮಯ್ಯ ತೀರ್ಮಾನ, ರಾಜ್ಯದ ಸಾಲ ಈಗ 8.24 ಲಕ್ಷ ಕೋಟಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್‌ನಲ್ಲಿ, ರಾಜ್ಯವು ದಾಖಲೆಯ 1,32,190 ಕೋಟಿ ರೂಪಾಯಿಗಳ ಸಾಲವನ್ನು ಪಡೆಯಲು ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ, ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲದ ಹೊರೆಯು 8,27,389 ಕೋಟಿ ರೂಪಾಯಿಗಳಿಗೆ ತಲುಪುವ ಅಂದಾಜಿದೆ.

Read Full Story

11:04 AM (IST) Mar 06

ಬೌದ್ಧ ಧರ್ಮಾಚರಿಗಳಿಗೆ ಮಾಸಿಕ ಗೌರವ ಧನ

ಬೌದ್ಧ ಧರ್ಮದ ಧರ್ಮಾಚರಿಗಳಿಗೆ ಮಾಸಿಕ 6 ಸಾವಿರ ಗೌರವ ಧನ...

ಜೈನ್ ಬೌದ್ಧ ಸಿಖ್ ಸಮುದಾಯಗಳ ಕಲ್ಯಾಣಕ್ಕೆ ನೂರು ಕೋಟಿ

ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರ

11:03 AM (IST) Mar 06

ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಯ ಬಗ್ಗೆ ಘೋಷಣೆ

ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ ಸಿದ್ದಿ ಮತ್ತು ಇತರೆ ಸೂಕ್ಷ್ಮ ಪರಿಶಿಷ್ಟ ಪಂಗಡದ pvtg ಗಳಿಗಾಗಿ ನಿಗಮ ಸ್ಥಾಪನೆ.

11:03 AM (IST) Mar 06

ಬಜೆಟ್ ನಲ್ಲೂ ಚುನಾವಣಾ ತಂತ್ರಗಾರಿಕೆ ಮಾಡಿದ ಸಿಎಂ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ವಿವಿಧ ಭಾಗಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ.

11:02 AM (IST) Mar 06

ತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧಾರ.

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್.

11:01 AM (IST) Mar 06

ಕಾಲೇಜು ಮತ್ತು ವಿವಿಯಲ್ಲಿ ಎಲೆಕ್ಷನ್

ವಿಕ್ಟೋರಿಯಾ ಆಸ್ಪತ್ರೆ ಇನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರು ನಾಮಕರಣ. 
ಅಪೌಷ್ಠಿಕತೆ ನಿವಾರಿಸಲು ಸೂಕ್ತ ಕ್ರಮ. 
ರಾಜ್ಯದ 5 ಕಡೆ ರೇಷ್ಮೆ ಪಾರ್ಕ್. 15 ಲಕ್ಷ ಪ್ರಯಾಣಿಕರಿಗೆ ಮೆಟ್ರೋ ಸೌಕರ್ಯ ವಿಸ್ತರಿಸಲು ನಿರ್ಧಾರ

10:59 AM (IST) Mar 06

VB G RAM G ಬಿಲ್ ತಿರುಗೇಟು ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಾಮಕರಣ. ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಎಂದು ನಾಮಕರಣ. VB G RAM G ಬಿಲ್ ತಿರುಗೇಟು ಕೊಟ್ಟ ರಾಜ್ಯ ಸರ್ಕಾರ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು 'ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ' ಎಂದು ನಾಮಕರಣ ಮಾಡುವ ಘೋಷಣೆ

10:58 AM (IST) Mar 06

ರಾಜ್ಯದ ಹೆಲವೆಡೆ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭ

ಕಾರ್ಮಿಕ ಇಲಾಖೆಯಿಂದ ಹುಬ್ಬಳ್ಳಿ, ಇಂದಿರಾನಗರ, ಮೈಸೂರು ಮತ್ತು ದೊಡ್ಡಬಳ್ಳಾಪುರ ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಇಂದಿರಾನಗರದಲ್ಲಿ 3 ವರ್ಷದ PG (DNB) ಕೋರ್ಸ್ ಪ್ರಾರಂಭಿಸಲಾಗುವುದು

10:55 AM (IST) Mar 06

16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್

ಆಸ್ಟ್ರೇಲಿಯಾದಲ್ಲಿ ಮಾಡಿದಂತೆ ದೇಶದಲ್ಲಿಯೂ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲು ಸರಕಾರ ನಿರ್ಧಾರ. ಮಕ್ಕಳು ಓದಿನ ಕಡೆ ಹೆಚ್ಚಿಗೆ ಗಮನ ಹರಿಸುವಂತೆ ಮಾಡಲು ಈ ನಿರ್ಧಾರ. ಮೊಬೈಲ್ ಗೀಳು ತಪ್ಪಿಸಲು ಸರ್ಕಾರದ ವಿಶೇಷ ಕ್ರಮ. ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಪರಿಣಾಮ ತಡೆಗೆ ಸಿದ್ದರಾಮಯ್ಯ ಅವರಿಂದ ದಿಟ್ಟ ಕ್ರಮ. 
ಶಾಲಾ ಕಾಲೇಜುಗಳಿಗೆ 15 ಸಾವಿರ ಶಿಕ್ಷಕರ ನೇಮಿಸಲು ತೀರ್ಮಾನ. 

10:53 AM (IST) Mar 06

ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಒತ್ತು

ರಾಜ್ಯದ ಏಳು ದೇಶೀ ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿಗೆ 200 ಕೋಟಿ ರೂ.

10:51 AM (IST) Mar 06

ಬ್ರ್ಯಾಂಡ್ ಬೆಂಗಳೂರಿಗೆ ಬಂಪರ್ - ವೈಟ್ ಟ್ಯಾಪಿಂಗ್, ಮೆಟ್ರೋ ವಿಸ್ತರಣೆ, 5 ಮಹಾನಗರ ಪಾಲಿಕೆ ಸೇರಿ ₹7000 ಕೋಟಿ ಅನುದಾನ!

‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯ ಸರ್ಕಾರವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೃಹತ್ ಹೆಜ್ಜೆ ಇರಿಸಿದೆ. ರಸ್ತೆಗಳ ವೈಟ್ ಟಾಪಿಂಗ್, ಮೆಟ್ರೋ ವಿಸ್ತರಣೆ, ಮತ್ತು ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಘೋಷಿಸಿದೆ.

Read Full Story

10:50 AM (IST) Mar 06

ರಾಜಸ್ವ ಸ್ವೀಕೃತಿಯಲ್ಲಿ ಪ್ರಗತಿ

2025-26 ನೇ ಸಾಲಿನಲ್ಲಿ ಫೆಬ್ರವರಿ ತಿಂಗಳವರೆಗೆ ಒಟ್ಟು 22,629 ಕೋಟಿ ರಾಜಸ್ವ ಸ್ವೀಕೃತ
ಕಳೆದ ಸಾಲಿಗೆ ಹೋಲಿಸದ್ರೆ 12.3 ರಷ್ಟು ಬೆಳವಣಿಗೆ
2026-27 ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 29,000 ಕೋಟಿ ರಾಜಸ್ವ ಗುರಿ ನಿಗದಿ

10:47 AM (IST) Mar 06

Karnataka Budget - ಶಿಕ್ಷಣಕ್ಕೆ ಸಿಂಹಪಾಲು, ಮಹಿಳಾ ಕಲ್ಯಾಣಕ್ಕೆ ಭರ್ಜರಿ ಕೊಡುಗೆ; ಯಾವ ಇಲಾಖೆಗೆ ಎಷ್ಟು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದು ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ, ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಬೃಹತ್ ಅನುದಾನವನ್ನು ಘೋಷಿಸಲಾಗಿದೆ.
Read Full Story

10:46 AM (IST) Mar 06

ಡಿಸೇಲ್ ಬಸ್ ಖರೀದಿಗೆ ಮುಂದಾಗುತ್ತಿದೆ ಕರ್ನಾಟಕ

2026-27 ನೇ ಸಾಲಿನಲ್ಲಿ 1000 ಡಿಸೇಲ್ ಬಸ್ಸುಗಳ ಖರೀದಿ

4000 ಇವಿ ಬಸ್ಸುಗಳ ಖರೀದಿ

32 ಬಿಎಂಟಿಸಿ ಹಾಗೂ 62 ರಸ್ತೆ ಸಾರಿಗೆ ನಿಗಮಗಳ EV ಡಿಪೋಗಳ ಅಭಿವೃದ್ಧಿ

10:46 AM (IST) Mar 06

ಚಿರತೆಗಳಿಗೆ ಗತಿ ಕಾಣಿಸಲು ಕ್ರಮ

ಬೆಂಗಳೂರಿನಲ್ಲಿ ಸೆರೆ ಹಿಡಿಯಲ್ಪಟ್ಟ ಚಿರತೆಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ಕೇಂದ್ರ.
 

10:45 AM (IST) Mar 06

ಸಾರಿಗೆ ನೌಕರರಿಗೆ ಗುಡ್ ನ್ಯೂಸ್

1/4/25 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ
ವೇತನ ಬಾಕಿ ಪಾವತಿಗಾಗಿ 1271 ಕೋಟಿ ರೂ ನೀಡಲು ತೀರ್ಮಾನ

10:45 AM (IST) Mar 06

ಮಾದಕ ವಸ್ತು ಮುಕ್ತ ರಾಜ್ಯಕ್ಕೆ ತೀರ್ಮಾನ

ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ತೀರ್ಮಾನ. 
Zero Tolerance to drugs ಧ್ಯೇಯದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಘಟಕವನ್ನು 10 ಕೋಟಿ ವೆಚ್ಚದಲ್ಲಿ ಬಲಪಡಿಸಲು ಒತ್ತು. 

10:44 AM (IST) Mar 06

ವೈಷ್ಣೋದೇವಿ ಯಾತ್ರೆಗೆ ನೆರವು

ರಾಜ್ಯದಿಂದ ಶ್ರೀ ಮಾತಾ ವೈಷ್ಣೋದೇವಿ ಯಾತ್ರೆಗೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ಸಹಾಯಧನ.

10:44 AM (IST) Mar 06

ಅಂಗನವಾಡಿ ಟೀಚರ್ಸ್ ಸರಿಯಾಗಿ ಕೆಲಸ ಮಾಡಲು ಕ್ರಮ

ರಾಜ್ಯದ ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ AI, facial recognition ಮುಖಾಂತರ ಹಾಜರಾತಿ

10:43 AM (IST) Mar 06

ಎಲ್ಲೆಲ್ಲಿಂದ ಸಾಲ ಪಡೆಯಲು ನಿರ್ಧಾರ ?

ಕೇಂದ್ರ ಸರ್ಕಾರದಿಂದ ಸಾಲ - 6810 ಕೋಟಿ 
ಬಹಿರಂಗ ಮಾರುಕಟ್ಟೆ ಸಾಲ - 1,22,340 ಕೋಟಿ 
 LIC / NSSF / NCDC ಮತ್ತು RIDF ಗಳಿಂದ ಸಾಲ - 2850 ಕೋಟಿ
ವಿವಿಧ ಬಂಡವಾಳ ಜಮೆ - 23 ಕೋಟಿ 
ಸಾಲಗಳು ಮುಂಗಡ ವಸೂಲಿ - 167 ಕೋಟಿ

ಒಟ್ಟಾರೆ 1,32,190 ಕೋಟಿ ಸಾಲ

10:41 AM (IST) Mar 06

ಎತ್ತಿನಹೊಳೆ ಯೋಜನೆ ಜಾರಿಗೆ ಸೂಚನೆ

ಎತ್ತಿನಹೊಳೆ ಯೋಜನೆ - 2 ಹಂತದಲ್ಲಿ 18.73 ಕಿಮೀ ಉದ್ದದ ಕಾಲುವೆ ಶೀಘ್ರ ಪೂರ್ಣ - ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿಎಂಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣ

10:40 AM (IST) Mar 06

ಮೇಕೆದಾಟು ಯೋಜನೆ ಅನುಷ್ಠಾನ ಗುರಿ

ಮೇಕೆದಾಟು ಯೋಜನೆಗೆ ಡಿಪಿ ಆರ್ ಸಲ್ಲಿಸಲು ತಿರ್ಮಾನ..ಹಣ ನಿಗದಿ ಇಲ್ಲ
ಕಾರವಾರ ಮತ್ತು ಯಾದಗಿರಿಯಲ್ಲಿ ಸುಪರ್ ಸ್ಪೇಷಾಲಿಟಿ ಆಸ್ಪತ್ರೆ
ಮಡಿವಾಳ ಸಮಾಜದವರಿಗೆ ಆಧುನೀಕರ ಲಾಂಡ್ರಿ ಸ್ಥಾಪಿಸಲು ಶೇ.5 ಬಡ್ಡಿಯಂತೆ 5 ಲಕ್ಷ ಸಾಲ .

10:39 AM (IST) Mar 06

ಸಲೂನೆ ತೆರೆಯಲು ಸವಿತಾ ಸಮಾಜಕ್ಕೆ ನೆರವು

ಸವಿತಾ ಸಮಾಜದವರು ಸಲೂನ್ ತೆರೆಯಲು ಶೇ.4 ಬಡ್ಡಿ ದರದಲ್ಲಿ 10 ಲಕ್ಷ ಸಹಾಯಧನ

10:39 AM (IST) Mar 06

ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ

5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ ವಿತರಿಸಲು ತಿರ್ಮಾನ - ೬೨೦೦ ಕೋಟಿ ರೂ ಮೀಸಲು
38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30000 ಕೋಟಿ ರೂ ಕೃಷಿ ಸಾಲ

10:37 AM (IST) Mar 06

ಜಿಬಿಎ 5 ನಗರ ಪಾಲಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 1,255 ಕೋಟಿ

158 ಕಿ.ಮೀ ಉದ್ದದ ವೈಟ್ ಟಾಪಿಂಗ್ ಗೆ 1,700 ಕೋಟಿ
ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1936 ಕೋಟಿ
ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ
ರಾಜಕಾಲುವೆ ಮೇಲ್ದರ್ಜೆಗೇರಿಸಲು 273 ಕೋಟಿ
175 ಜಂಕ್ಷನ್ ಸೌಂದರ್ಯಿಕರಣ, 100 sky walkಗಳ ನಿರ್ಮಾಣ, 500 ಕಿ.ಮೀ ಪಾದಚಾರಿ ಮಾರ್ಗ ಮೇಲ್ದರ್ಜೆಗೆ
2027 ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್ ಜಾರಿ 2026-27 ಹಣಕಾಸು ವರ್ಷದಲ್ಲಿ 41 ಕಿ.ಮೀ ಹೆಚ್ಚುವರಿ ಮೆಟ್ರೋ ಮಾರ್ಗ

10:36 AM (IST) Mar 06

ಅಗ್ನಿ ಶಾಮಕ ಸಿಬ್ಬಂದಿ ಆಹಾರ ಭತ್ಯೆ ಹೆಚ್ಚಳ

ಅಗ್ನಿಶಾಮಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಆಹಾರ ಭತ್ಯೆ 150 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಳ.

10:36 AM (IST) Mar 06

ಎಲ್ಲೆಲ್ಲಿಂದ ಆದಾಯ ನಿರೀಕ್ಷೆ..?

ಬಜೆಟ್ ಮುಖ್ಯಾಂಶ

ರಾಜ್ಯದ ಒಟ್ಟು ಸಾಲ- 8,27,389 ಕೋಟಿ
ಬಜೆಟ್ ಗಾತ್ರ 4.48,004 ಕೋಟಿ
ಸ್ವಂತ ತೆರಿಗೆ ಗುರಿ- 2,20 ಲಕ್ಷ ಕೋಟಿ
1,32 ಲಕ್ಷ ಕೋಟಿ ಸಾಲ

ಮೋಟಾರು ವಾಹನ ತೆರಿಗೆ - 15,500 ಕೋಟಿ
ನೋಂದಣಿ ಮತ್ತು ಮುದ್ರಾಂಕ - 29000 ಕೋಟಿ 
ರಾಜ್ಯ ಅಬಕಾರಿ - 45,000 ಕೋಟಿ
ವಾಣಿಜ್ಯ ತೆರಿಗೆ - 1,25,000 ಕೋಟಿ 
ಇತರೆ - 5500 ಕೋಟಿ

10:35 AM (IST) Mar 06

ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ

ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ

ರಾಜಕಾಲುವೆ ಮೇಲ್ದರ್ಜೆಗೇರಿಸಲು 273 ಕೋಟಿ

175 ಜಂಕ್ಷನ್ ಸೌಂದರ್ಯಿಕರಣ, 100 sky walk ಗಳ ನಿರ್ಮಾಣ, 500 ಕಿ.ಮೀ ಪಾದಚಾರಿ ಮಾರ್ಗ ಮೇಲ್ದರ್ಜೆಗೆ

10:32 AM (IST) Mar 06

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ..?

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ..?

ಶಿಕ್ಷಣ - 47,224 
ಮಹಿಳಾ ಮತ್ತು ಮಕ್ಕಳ ಕಲ್ಯಾಣ - 34929 
ಇಂಧನ - 29947 
RDPR - 26559 
ನೀರಾವರಿ - 22436 
ನಗರಾಭಿವೃದ್ಧಿ ಮತ್ತು ವಸತಿ - 22203 
 ಒಳಾಡಳಿತ ಮತ್ತು ಸಾರಿಗೆ - 23100
 ಆರೋಗ್ಯ - 17817 
 ಕಂದಾಯ - 19843 
ಸಮಾಜ ಕಲ್ಯಾಣ - 18,612 
 ಲೋಕೋಪಯೋಗಿ - 11,424
 ಆಹಾರ - 7942 
ಕೃಷಿ - 8373 
ಪಶುಸಂಗೋಪನೆ ಮತ್ತು ಮೀನುಗಾರಿಕೆ - 4084 
ಇತರೆ - 1,72,757

10:30 AM (IST) Mar 06

ಮೂಲ ಸೌಕರ್ಯಕ್ಕೆ ಆದ್ಯತೆ

ಜಿಬಿಎ 5 ನಗರ ಪಾಲಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 1,255 ಕೋಟಿ

158 ಕಿ.ಮೀ ಉದ್ದದ ವೈಟ್ ಟಾಪಿಂಗ್ ಗೆ 1,700 ಕೋಟಿ

ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1936 ಕೋಟಿ

10:29 AM (IST) Mar 06

ಸಮಗ್ರ ಆರೋಗ್ಯ, ಸಮೃದ್ಧಿ ಆರೋಗ್ಯ, ಗ್ರಾಮೀಣಾಭಿವೃದ್ಧಿಗೆ ಒತ್ತು

ಈ ಬಾರಿಯ ಬಜೆಟ್‌ನಲ್ಲಿ 1.26 ಲಕ್ಷ ಕೋಟಿ ಸಾಲ ಮಾಡಿದ ಸಿಎಂ. 
27,957 ಕೋಟಿ ರಾಜಸ್ವ ಕೊರತೆ, 

56 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ.
ಮೂಲಸೌಕರ್ಯಕ್ಕೆ 1,500 ಕೋಟಿ ರೂ. ಮೀಸಲು. 
 

10:26 AM (IST) Mar 06

ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಳ

ವಿಧಾನಸೌಧದಲ್ಲಿ ಬಜೆಟ್ ಮಂಡಿಸಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ. ಈ ವರ್ಷದ ಬಜೆಟ್ ಗಾತ್ರ 4.48 ಲಕ್ಷ ಕೋಟಿ. ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಹೆಚ್ಚಳ. 3.15 ಲಕ್ಷ ಕೋಟಿ ರಾಜಸ್ವ ಕ್ವೀಕೃತಿ ಅಂದಾಜು. 

09:58 AM (IST) Mar 06

ಮೊದಲ ಅವಧಿಯಲ್ಲಿ ಉಳಿತಾಯದ ಬೆಜಟ್ ಮಂಡಿಸಿದ ಸಿಎಂ

ಮೊದಲ ಅವಧಿಗೆ ಮುಖ್ಯಮಂತ್ರಿಯಾದಾಗ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಆಡಳಿತ ನಡೆಸಿ, ಉಳಿತಾಯದ ಬಜೆಟ್ ಮಂಡಿಸಿದ್ದರು. ಆದರೆ, ಎರಡನೇ ಅವಧಿಯಲ್ಲಿ ಸಾಲದ ಮೊತ್ತ ಭಾರಿ ಏರಿಕೆಯಾಗಿದ್ದರಿಂದ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸುವ ಇಕ್ಕಟ್ಟಿಗೆ ಸಿಲುಕಿದ್ದರಿಂದ ಆದಾಯ ಕೊರತೆಯ ಕೊರತೆಯ ಜೊತೆಗೆ ಸಾಲದ ಪ್ರಮಾಣವೂ ಹೆಚ್ಚುತ್ತಿದೆ ಎನ್ನಲಾಗುತ್ತಿದೆ. 

09:55 AM (IST) Mar 06

ಬಜೆಟ್ ಮಂಡನೆಗೆ ಕ್ಯಾಬಿನೆಟ್ ಅನುಮೋದನೆ ಪಡೆದ ಸಿಎಂ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿದ್ದು, ಶಿಷ್ಟಾಚಾರದಂತೆ ಕ್ಯಾಬಿನೆಟ್ ಅಪ್ರೂವಲ್ ಪಡೆದಿದ್ದಾರೆ. 10.15ಕ್ಕೆ ಬಜೆಟ್ ಮಂಡನೆಗೆ ಸಮಯ ನಿರ್ಧಾರವಾಗಿದ್ದು, 230 ಬಸ್ ನಿಲ್ದಾಣಗಳಲ್ಲಿ ಇದೇ ಮೊದಲ ಬಾರಿಗೆ ಮಂಡನೆಯ ನೇರ ಪ್ರಸಾರವಾಗಲಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಭೂಸ್ವಾಧಿನಕ್ಕೆ ದೊಡ್ಡ ಅನುದಾನ ನಿರೀಕ್ಷೆ ನೀಡುವ ಸಾಧ್ಯತೆ ಇದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲಯಲ್ಲಿ ಸಹಜವಾಗಿಯೇ ಜನಪ್ರಿಯ ಕಾರ್ಯಕ್ರಮಗಳ ಘೋಷಣೆ ಮಾಡಬಹುದು. ಗ್ಯಾರಂಟಿ ಹೊರೆ ಮ್ಯಾನೇಜ್ ಮಾಡುವ ಜೊತೆಗೆ ಜಿ ರಾಮ್ ಜಿಗೆ 10000 ಕೋಟಿ ರು. ಅನುದಾನ ಮೀಸಲಿಡುವ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ. 

09:40 AM (IST) Mar 06

ಬಜೆಟ್ ಪುಸ್ತಕ ತೆಗೆದುಕೊಂಡು ವಿಧಾನಸೌಧಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ

ವಿಧಾನಸೌಧದ ಮೂರನೇ ಮಹಡಿಯಲ್ಲಿರೋ ಕ್ಯಾಬಿನೆಟ್ ಹಾಲ್ ಗೆ ತೆರಳಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯಗೆ ಜಮೀರ್ ಅಹ್ಮದ್, ಎಂಬಿ ಪಾಟೀಲ್, ಶರಣ ಪ್ರಕಾಶ ಪಾಟೀಲ್ , ಬೋಸರಾಜ್ ಸೇರಿ‌ ಹಲವು ಶಾಸಕರು ಸಾಥ್.
 

07:55 AM (IST) Mar 06

Karnataka Budget 2026-27: ಧಾರವಾಡಕ್ಕೆ ಕೊಟ್ಟಿದ್ದು ಬೆಟ್ಟದಷ್ಟು, ಅನುಷ್ಠಾನ ಮಾತ್ರ ಎಳ್ಳಷ್ಟು!

ಕಳೆದ ವರ್ಷದ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನೀಡಿದ ಭರವಸೆಗಳ ಪೈಕಿ ಬೆಣ್ಣಿಹಳ್ಳ ಕಾಮಗಾರಿ ಮತ್ತು ಶಾಲಾ ಉನ್ನತೀಕರಣದಂತಹ ಕೆಲವು ಕಾರ್ಯಗಳು ಆರಂಭ ಆದರೆ, ತಂತ್ರಜ್ಞಾನ ಕೇಂದ್ರ, ಆರೋಗ್ಯ ಕೇಂದ್ರಗಳ ಪ್ರತ್ಯೇಕ ಪಾಲಿಕೆಯಂತಹ ಪ್ರಮುಖ ಘೋಷಣೆ ಇನ್ನೂ ಅನುಷ್ಠಾನಗೊಂಡಿಲ್ಲ ಅಥವಾ ವಿವಾದದಲ್ಲಿ ಸಿಲುಕಿವೆ.

 

Read Full Story

07:55 AM (IST) Mar 06

Karnataka Budget 2026-27: ಇಂದಿನ ಬಜೆಟ್‌ನಲ್ಲಿ ಬೆಳಗಾವಿಗೆ ಸಿಗುತ್ತಾ ಬಂಪರ್‌? ಬೇಡಿಕೆಗಳೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಯು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಜಿಲ್ಲಾ ವಿಭಜನೆ, ರಿಂಗ್ ರಸ್ತೆ, ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳು, ಐಟಿ ಪಾರ್ಕ್ ಸೇರಿ ಹಲವು ಸುಧಾರಣೆಯಂತಹ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಜನರು ಕಾಯುತ್ತಿದ್ದಾರೆ.

 

Read Full Story

More Trending News