ಕಾಶಿಯಾತ್ರೆಗೆ ಕಾಂಗ್ರೆಸ್‌ ಸರ್ಕಾರದಿಂದಲೂ ₹5000; ಟಿಕೆಟ್ ಬುಕ್ಕಿಂಗ್ ಇಲ್ಲಿದೆ ಮಾಹಿತಿ!

Published : Jul 20, 2023, 04:59 AM IST
ಕಾಶಿಯಾತ್ರೆಗೆ ಕಾಂಗ್ರೆಸ್‌ ಸರ್ಕಾರದಿಂದಲೂ  ₹5000; ಟಿಕೆಟ್ ಬುಕ್ಕಿಂಗ್ ಇಲ್ಲಿದೆ ಮಾಹಿತಿ!

ಸಾರಾಂಶ

ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯಾತ್ರೆಗೆ ರಾಜ್ಯ ಸರ್ಕಾರವು ಪ್ರತಿ ಯಾತ್ರಿಗೆ 5 ಸಾವಿರ ರು. ರಿಯಾಯಿತಿ ನೀಡಲಿದೆ. ಮುಂದಿನ ಯಾತ್ರೆ ಜು.29ಕ್ಕೆ ಆರಂಭವಾಗಲಿದೆ.

ಬೆಂಗಳೂರು (ಜು.20) :  ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯಾತ್ರೆಗೆ ರಾಜ್ಯ ಸರ್ಕಾರವು ಪ್ರತಿ ಯಾತ್ರಿಗೆ 5 ಸಾವಿರ ರು. ರಿಯಾಯಿತಿ ನೀಡಲಿದೆ. ಮುಂದಿನ ಯಾತ್ರೆ ಜು.29ಕ್ಕೆ ಆರಂಭವಾಗಲಿದೆ.

ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ ಪುಣ್ಯ ಕ್ಷೇತ್ರಗಳಿಗೆ ರಿಯಾಯಿತಿ ದರದಲ್ಲಿ ಪ್ಯಾಕೇಜ್‌ ರೂಪಿಸಲಾಗಿದೆ. ವಿಶೇಷ ರೈಲಿನ ಪ್ರವಾಸ ಇದಾಗಿದ್ದು, ಪ್ರತಿ ಯಾತ್ರಾರ್ಥಿಗೆ 20 ಸಾವಿರ ರು. ಪ್ಯಾಕೇಜ್‌ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ತಲಾ 5 ಸಾವಿರ ರು. ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುತ್ತದೆ. ಉಳಿದ 15 ಸಾವಿರ ರು. ಮೊತ್ತವನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಾಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆಯ ವ್ಯವಸ್ಥೆ ಮಾಡಲಾಗುತ್ತದೆ. ಇದು ಒಟ್ಟು 7 ದಿನಗಳ ಪ್ರವಾಸವಾಗಿರುತ್ತದೆ.

ರಾಜ್ಯದಿಂದ ಕಾಶಿಯಾತ್ರೆ ಪ್ರವಾಸಕ್ಕೆ ಹೊರಡಲಿದೆ ವಿಶೇಷ ರೈಲು

ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್‌ ಪೂರೈಸಿದ್ದು, 1,644 ಯಾತ್ರಾರ್ಥಿಗಳು ಯಾತ್ರೆಗೆ ಹೋಗಿ ಬಂದಿದ್ದಾರೆ. ರಾಜ್ಯ ಸರ್ಕಾರ ತಲಾ 5 ಸಾವಿರ ರು. ನಂತೆ 82.20 ಲಕ್ಷ ರು. ಸಹಾಯಧನ ನೀಡಿದೆ.

ಜುಲೈ 29ಕ್ಕೆ ಮತ್ತೊಂದು ಯಾತ್ರೆ

ಇದೇ ಜುಲೈ 29ರಂದು ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಯಾತ್ರೆಗೆ ತೆರಳುವ ಆಸಕ್ತಿ ಇರುವ ಯಾತ್ರಾರ್ಥಿಗಳು ಐಆರ್‌ಸಿಟಿಸಿ ಪೋರ್ಟಲ್‌ ಮೂಲಕ ತಮ್ಮ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಈಗ ಹೊಸದಾಗಿ ಸುಸಜ್ಜಿತ ಎಲ್‌ಎಚ್‌ಬಿ ಕೋಚ್‌ಗಳು, ಅಡುಗೆ ಮನೆ ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರನ್ನು ಸಹ ನಿಯೋಜಿಸಲಾಗಿದೆ. ರಾಜ್ಯದ ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಶಿಯಾತ್ರೆ ಮಾಡಿ ಬಂದವರಿಂದ ಸೋಂಕು , ಒಂದೇ ಗ್ರಾಮದ 120 ಜನರಿಗೆ ಕೋವಿಡ್ ಪಾಸಿಟಿವ್.!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉ.ಕ. ಚರ್ಚೆ ವೇಳೆ ವಿಪಕ್ಷಕ್ಕೆ ತಿರುಗೇಟು: ಸಿಎಲ್‌ಪಿ ನಿರ್ಧಾರ
ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಶುರು