ಭಾರೀ ಮಳೆ: ಭೀಮಾ ನದಿ ಪ್ರವಾಹಕ್ಕೆ ಕಂಗಾಲಾದ ಜನ, ರೈತರ ಬೆಳೆ ನಷ್ಟ

Published : Sep 27, 2025, 11:59 PM IST
Rain

ಸಾರಾಂಶ

ಕಲಬುರಗಿ ನಗರ ಸೇರಿದಂತ ಜಿಲ್ಲಾದ್ಯಂತ ಗುರುವಾರ ಮಧ್ಯರಾತ್ರಿಯಿಂದಲೇ ಭಾರಿ ಮಳೆ ಆರಂಭವಾಗಿದೆ. ಇದುವರೆಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನತೆ, ರೈತರು ಭಾರಿ ಮಳೆಯಿಂದಾಗಿ ಕಂಗಾಲಾಗಿದ್ದಾರೆ.

ಕಲಬುರಗಿ (ಸೆ.27): ಕಲಬುರಗಿ ನಗರ ಸೇರಿದಂತ ಜಿಲ್ಲಾದ್ಯಂತ ಗುರುವಾರ ಮಧ್ಯರಾತ್ರಿಯಿಂದಲೇ ಭಾರಿ ಮಳೆ ಆರಂಭವಾಗಿದೆ. ಇದುವರೆಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನತೆ, ರೈತರು ಭಾರಿ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಶುರುವಾಗಿರುವ ಮಳೆ ಶುಕ್ರವಾರದಿಂದ ಮತ್ತಷ್ಟೂ ಬಿರುಸುಗೊಂಡಿದ್ದು ನಿರಂತರ ಸುರಿಯುತ್ತಿದೆ. ಇದರಿಂದಾಗಿ ನಗರ ಹಾಗೂ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಂದಿನ 3 ದಿನಗಳ ಕಾಲ ಮಳೆ ಹೀಗೇ ಧೋ ಎಂದು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಲ್ಲದೆ ಕಲಬುರಗಿ ಜಿಲ್ಲೆಗೆ ಎಲ್ಲೋ ಆಲರ್ಟ್‌ ಘೋಷಣೆ ಮಾಡಿದೆ. ಹೀಗಾಗಿ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರ ಮಳೆ ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಹರಡಿದೆ. ಚಿಂಚೋಳಿ, ಅಫಜಲಪುರ, ಜೇವರ್ಗಿ, ಚಿತ್ತಾಪುರದಲ್ಲಂತೂ ಇನ್ನೂ ಬಿರುಸಿನಿಂದ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ 24 ಗಂಟೆಗಳಲ್ಲೇ 40 ರಿಂದ 70 ಮಿಮಿ ನಷ್ಟು ಮಳೆ ಸುರಿದಿದೆ.

ಭೀಮಾ ಪ್ರವಾಹ ಯಥಾಸ್ಥಿತಿ

ಭೀಮಾ ನದಿ ಪ್ರವಾಹ ಪೀಡಿತ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್‌, ಕಲಬುರಗಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭೀಮಾನದಿ ನೀರು ಆವರಿಸಿ ಅನೇಕ ಸೇತುವೆಗಳು ಮುಳುಗಿವೆ. ಬೋಟ್‌ಗಳನ್ನು ಬಳಸಿ 2 ದಿನವಾದ ಶುಕ್ರವಾರವೂ ಜನ ಸಂಚಾರ ಸಾಗಿದೆ. ಮೇಲೆ ಮಳೆ ಸುರಿಯುತ್ತಿರುವುದರಿಂದ ಜನ ಈ ದುರವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಣ್ಣೂರಲ್ಲಿರುವ ದಲಿತರ ಕೇರಿ ಸುತ್ತುವರಿದ ಭೀಮಾ ನೀರಿನಿಂದ ಅನೇಕ ತೊಂದರೆ ಎದರಿಸುತ್ತಿದ್ದರೂ ಕಾಯಂ ಪರಿಹಾರ ಕಲ್ಪಿಸುವವರೆಗೆ ಹೊರಗೆ ಬರುವುದಿಲ್ಲವೆಂದು 50 ದಲಿತ ಕುಟುಂಬದವರು ಅಲ್ಲೇ ಉಳಿದಿದ್ದಾರೆ. ಇಡೀ ದಿನ ಮನ ಒಲಿಸಿದರು ಮನೆ ಬಿಟ್ಟು ಕಾಳಜಿ ಕೇಂದ್ರಗಳತ್ತ ಬಾರದೆ ನೀರಿನಿಂದ ಸುತ್ತುವರಿದ ಮನೆಗಳಲ್ಲೇ ವಾಸವಾಗಿದ್ದಾರೆ. ಏತನ್ಮಧ್ಯೆ ಭೀಮಾ ಪ್ರವಾಹದಲ್ಲಿ ಹೆಚ್ಚಳವೂ ಇಲ್ಲ, ಕಮ್ಮಿಯೂ ಇಲ್ಲ ಎಂಬಂತೆ ಯತಾಸ್ಥಿತಿ ಮುಂದುವರಿದಿದೆ. ಹೀಗಾಗಿ ನದಿ ನೀರು ಹೊಲಗದ್ದೆ ಹೊಕ್ಕಿದ್ದು ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿದೆ. ಇದರಿಂದಾಗಿ ನದಿ ತೀರದ ಸಾವಿರಾರು ಹೆಕ್ಟರ್‌ ರೈತರ ಬೆಳೆ ನಷ್ಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌