International Yoga Day: 57ರ ಹರೆಯದಲ್ಲೂ ಬಾವಿಯಲ್ಲಿ 2 ಗಂಟೆ ಪವನ್‌ ಕುಮಾರ್‌ ವಳಕೇರಿ ಜಲಯೋಗ!

Published : Jun 21, 2024, 09:22 PM IST
International Yoga Day: 57ರ ಹರೆಯದಲ್ಲೂ ಬಾವಿಯಲ್ಲಿ 2 ಗಂಟೆ ಪವನ್‌ ಕುಮಾರ್‌ ವಳಕೇರಿ ಜಲಯೋಗ!

ಸಾರಾಂಶ

57 ವರ್ಷದ ಪವನ ವಳಕೇರಿ ಕಳೆದ 28 ವರ್ಷದಿಂದ ಜಲಯೋಗವನ್ನು ರೂಢಿ ಮಾಡಿಕೊಂಡಿದ್ದು ನಿತ್ಯ ಮಾಡುತ್ತಿದ್ದಾರೆ. ಈಗಾಗಲೇ ಮನೆಯಲ್ಲಿ ಮಗನಿಗೂ ಈ ಯೋಗ ರೂಢಿಯಾಗಿದೆ.   

ಕಲಬುರಗಿ (ಜೂ.21): ವಿಶ್ವ ಯೋಗ ದಿನದ ಅಂಗವಾಗಿ ಶುಕ್ರವಾರ ಕಲಬುರಗಿ ಹೊರವಲಯ ನಂದಿಕೂರ್‌ನಲ್ಲಿರುವ ಮಲ್ಲೇಶಪ್ಪ ಏವೂರ್‌ ಇವರ ತೋಟದಲ್ಲಿನ ಬಾವಿ ನೀರಲ್ಲಿ ಯೋಗಪಟು, ಗ್ರಾಪಂ ಸದಸ್ಯ ಪವನಕುಮಾರ್‌ ವಳಕೇರಿ ಬೆಳಗಿನ 2 ಗಂಟೆಗಳ ಕಾಲ ಜಲಯೋಗ ಮಾಡಿ ಗಮನ ಸೆಳೆದರು.

57 ವರ್ಷದ ಪವನ ವಳಕೇರಿ ಕಳೆದ 28 ವರ್ಷದಿಂದ ಜಲಯೋಗವನ್ನು ರೂಢಿ ಮಾಡಿಕೊಂಡಿದ್ದು ನಿತ್ಯ ಮಾಡುತ್ತಿದ್ದಾರೆ. ಈಗಾಗಲೇ ಮನೆಯಲ್ಲಿ ಮಗನಿಗೂ ಈ ಯೋಗ ರೂಢಿಯಾಗಿದೆ. ಇದಲ್ಲದೆ ನಾಗನಹಳ್ಳಿಯಲ್ಲಿ, ನಂದಿಕೂರದಲ್ಲಿಯೂ ಪವನ ವಳಕೇರಿಯವರ ಪ್ರಭಾವಕ್ಕೊಳಗಾಗಿ ಹಲವರು ಯುವಕರು ಜಲಯೋಗ ಮೈಗೂಡಿಸಿಕೊಂಡಿದ್ದಾರೆ.

ಜಿನಿವಾದಲ್ಲಿ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟ ರವಿಶಂಕರ್ ಗುರೂಜಿ!

ನಿತ್ಯ ಜಲಯೋಗ ಮಾಡೋದು ನನ್ನ ಹವ್ಯಾಸ. ಸಾಮಾನ್ಯ ಯೋಗಾಸನಗಳನ್ನೇ ಶ್ವಾಸ ನಿಯಂತ್ರಣದೊಂದಿಗೆ ಮಾಡುವುದೇ ಜಲಯೋಗವಾಗಿದೆ. ಈಜುತ್ತ ಶ್ವಾಸ ನಿಯಂತ್ರಣ ಮಾಡುವ ಜಲಯೋಗ ಕಠಿಣವಾದರೂ ಆರೋಗ್ಯಕ್ಕೆ ತುಂಬ ಉಪಯುಕ್ತವೆನ್ನುವ ಪವನ ವಳಕೇರಿಯವರು ಯೋಗ ಎಲ್ಲರೂ ನಿತ್ಯ ರೂಢಿ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.

ಕೊರೋನಾ ನಂತರದಲ್ಲಿ ತೋಟದ ಬಾವಿಗಳೇ ಕಾುತ್ತಿಲ್ಲ. ಇದ್ದರೂ ನೀರು ಸಾಕಷ್ಟು ಇರುತ್ತಿಲ್ಲ. ಆದಾಗ್ಯೂ ಮಲ್ಲೇಶಪ್ಪನವರ ಬಾವಿಯಲ್ಲಿ ನೀರು ಇರೋದರಿಂದ ತಮಗೆ ಜಲಯೋಗಕ್ಕೆ ಹೆಚ್ಚಿನ ಅನುಕೂಲವಾಗಿದೆ. ಎಲ್ಲರು ಜಲಯೋಗವಲ್ಲದೆ ಹೋದರೂ ಸರಳ ಯೋ ರಮಾಗೂಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಪವನ ಕಿವಿಮಾತು ಹೇಳಿದ್ದಾರೆ.

ಡಾಲಿಯ ಕೋಟಿಯಲ್ಲಿ ಎಮೋಷನಲ್ ಆದ ಸಲಗ: ಧನಂಜಯ್‌ಗೂ ದುನಿಯಾ ವಿಜಿಗಿರುವ ಸಂಬಂಧವೇನು?

ಪ್ರತಿದಿನ ಯೋಗ ಮಾಡಿದರೆ ಆರೋಗ್ಯವಾಗಿರಲು ಸಾಧ್ಯ. ಯೋಗ ಮಾಡುವುದರಿಂದ ಯಾವುದೇ ರೋಗವು ನಮ್ಮ ಸಮೀಪ ಬರುವುದಿಲ್ಲ ಆರೋಗ್ಯವಾಗಿರುತ್ತೇವೆ. ನಮ್ಮ ಗ್ರಾಮ, ನಗರ ಜಿಲ್ಲೆ, ರಾಜ್ಯ, ರಾಷ್ಟ್ರ ಆರೋಗ್ಯವಂತವಾಗಿರುತ್ತೆ. ಜಲಯೋಗ ಅನುಕೂಲವಿದ್ದವರು ಮಾಡಿರಿ. ಇದರಿಂದಲೂ ಆರೋಗ್ಯ ಚೆನ್ನಾಗಿರುತ್ತದೆ.
- ಪವನ ವಳಕೇರಿ, ಗ್ರಾಪಂ ಸದಸ್ಯರು, ನಂದೀಕೂರ್‌, ಕಲಬುರಗಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!
ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!