ರೈತರ ಪಂಪ್‌ಸೆಟ್ ಕೇಬಲ್ ಕಳ್ಳತನ; ಗಾಯದ ಮೇಲೆ ಬರೆ ಎಳೆದಂತಾಗಿದೆ ಕೋಟೆನಾಡು ರೈತರ ಸ್ಥಿತಿ!

Published : Nov 12, 2023, 04:01 PM ISTUpdated : Nov 12, 2023, 04:04 PM IST
ರೈತರ ಪಂಪ್‌ಸೆಟ್ ಕೇಬಲ್ ಕಳ್ಳತನ; ಗಾಯದ ಮೇಲೆ ಬರೆ ಎಳೆದಂತಾಗಿದೆ ಕೋಟೆನಾಡು ರೈತರ ಸ್ಥಿತಿ!

ಸಾರಾಂಶ

ಮಳೆ ಬೆಳೆ ಇಲ್ಲದೇ ಕೋಟೆನಾಡಿನ ರೈತರು ಕಂಗಾಲಾಗಿದ್ದಾರೆ. ಇಂತಹ ವೇಳೆ ಜಮೀನಿನಲ್ಲಿನ ಕೊಳವೆ ಬಾವಿಯ  ಪಂಪ್ ಸೆಟ್ ಹಾಗು ಕೇಬಲ್ ಗಳನ್ನು ಕದ್ದು ಕಳ್ಳರು ಪರಾರಿಯಾಗ್ತಿದ್ದಾರೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪಂಪ್‌ಸೆಟ್ ಕಳುವುದು ಪ್ರಕರಣದಿಂದ ಅನ್ನದಾತರಿಗೆ ಗಾಯದ ಮೇಲೆ  ಬರೆ ಎಳೆದಂತಾಗಿದೆ. 

ಚಿತ್ರದುರ್ಗ (ನ.12): ಮಳೆ ಬೆಳೆ ಇಲ್ಲದೇ ಕೋಟೆನಾಡಿನ ರೈತರು ಕಂಗಾಲಾಗಿದ್ದಾರೆ. ಇಂತಹ ವೇಳೆ ಜಮೀನಿನಲ್ಲಿನ ಕೊಳವೆ ಬಾವಿಯ  ಪಂಪ್ ಸೆಟ್ ಹಾಗು ಕೇಬಲ್ ಗಳನ್ನು ಕದ್ದು ಕಳ್ಳರು ಪರಾರಿಯಾಗ್ತಿದ್ದಾರೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪಂಪ್‌ಸೆಟ್ ಕಳುವುದು ಪ್ರಕರಣದಿಂದ ಅನ್ನದಾತರಿಗೆ ಗಾಯದ ಮೇಲೆ  ಬರೆ ಎಳೆದಂತಾಗಿದೆ. 

ಪೈಪ್, ಕೇಬಲ್ ಕಳ್ಳತನದಿಂದ ಕಂಗಲಾಗಿ ಕುಳಿತ ಅನ್ನದಾತರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ‌ ತಾಲ್ಲೂಕಿನ ಅನ್ನೆಹಾಳ್ ನಡೆದಿರುವ ಕಳ್ಳತನ. ತಾಲ್ಲೂಕಿನಾದ್ಯಂತ ಮಳೆ ಇಲ್ಲದೇ ಈ ಬಾರಿ ರೈತರು ಜಮೀನುಗಳತ್ತ ತಿರುಗಿ ನೋಡ್ತಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರೊ ಖತರ್ನಾಕ್ ಕಳ್ಳರು,  ಜಮೀನುಗಳಲ್ಲಿ‌ನ ಕೊಳವೆ ಬಾವಿಯ ಪಂಪ್‌ಸೆಟ್, ಸ್ಟ್ರಾಟರ್ಸ್  ಸೇರಿದಂತೆ‌ ಕೇಬಲ್‌ವೈರನ್ನು ಸಹ ಕದ್ದು ಪರಾರಿಯಾಗ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ‌ ಪೊಲೀಸ್ ಠಾಣೆಯಲ್ಲಿ‌ ದೂರು‌ ನೀಡಿದ್ರು ಯಾವುದೇ  ಪ್ರಯೋಜನವಾಗಿಲ್ಲ. ಅಲ್ದೇ ಕಳ್ಳರನ್ನು ಬಂಧಿಸಿ , ಕಳ್ಳತನಕ್ಕೆ ಬ್ರೇಕ್ ಹಾಕಬೇಕಿದ್ದ ಪೊಲೀಸರು ನಿರ್ಲಕ್ಷ್ಯ‌ತೋರಿರುವ ಪರಿಣಾಮ‌ ರೈತರು‌ ಸಾಲದ ಸುಳಿಗೆ ಸಿಲುಕುವಂತಾಗಿದೆ‌ ಅಂತ ಆಕ್ರೋಶ ಹೊರಹಾಕಿದ್ದಾರೆ.

ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ!

ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಕೇಳಿದ್ರೆ, ಜಿಲ್ಲೆಯ ವಿವಿದೆಡೆಯ ಜಮೀನುಗಳಲ್ಲಿ ಕಳ್ಳತನವಾಗಿವೆ. ಅದ್ರಲ್ಲೂ ಹೊಳಲ್ಕೆರೆ, ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ. ಅವರಲ್ಲಿ ಕೆಲವರು ಠಾಣೆಗೆ ದೂರು ನೀಡಿದ್ದು, ಕೆಲವರು‌ ಪ್ರಕರಣ‌ ದಾಖಲಿಸಲು‌ ಹಿಂದೇಟು ಹಾಕಿದ್ದಾರೆ. ಆದರೂ ಸಹ ಕಳ್ಳತನಕ್ಕೆ ಬ್ರೇಕ್ ಹಾಕಲು ಸಂಬಂಧಪಟ್ಟ ಠಾಣಾಧಿಕಾರಿ ನೇತೃತ್ವದಲ್ಲಿ ಟೀಂ‌ ರಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ‌ ಕಳ್ಳರನ್ನು ಬಂಧಿಸ್ತೇವೆಂಬ ಭರವಸೆ ನೀಡಿದ್ದಾರೆ.

ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ: ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿಂದು ಸಿಎಂ ಚಾಲನೆ

ಒಟ್ಟಾರೆ  ಚಿತ್ರದುರ್ಗದಲ್ಲಿ  ಕೊಳವೆ ಬಾವಿಯ ಪಂಪ್‌ಸೆಟ್ ಹಾಗು ಕೇಬಲ್ ಕಳ್ಳರ‌ಹಾವಳಿ‌  ಮಿತಿ ಮೀರಿದೆ. ಮೊದಲೇ ಬರದಿಂದ ಕಂಗಲಾಗಿದ್ದ  ಅನ್ನದಾತರಲ್ಲಿ‌ ಈ ಕಳ್ಳರ‌ ಕರಾಮತ್ತು ಮತ್ತಷ್ಟು ಆತಂಕ‌ ಸೃಷ್ಟಿಸಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿ,ರೈತರ ಜಮೀನುಗಳಲ್ಲಿ ಆಗ್ತಿರುವ ಕಳ್ಳತನಕ್ಕೆ ಬ್ರೇಕ್ ಹಾಕಲು ಮುಂದಾಗಬೇಕಿದೆ

ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್