SIT ಘೋಷಣೆ ಹಿಂದೆ ನಾನಿಲ್ಲ. ನನ್ನದು ಸಲಹೆಯಷ್ಟೇ, ಘೋಷಿಸಿದ್ದು ಸಿಎಂ: ಸಿದ್ದು

Published : Feb 15, 2019, 09:19 AM ISTUpdated : Feb 15, 2019, 09:22 AM IST
SIT ಘೋಷಣೆ  ಹಿಂದೆ ನಾನಿಲ್ಲ. ನನ್ನದು ಸಲಹೆಯಷ್ಟೇ, ಘೋಷಿಸಿದ್ದು ಸಿಎಂ: ಸಿದ್ದು

ಸಾರಾಂಶ

ಎಸ್‌ಐಟಿ ಘೋಷಣೆ ಹಿಂದೆ ನಾನಿಲ್ಲ: ಸಿದ್ದು| ನನ್ನದು ಸಲಹೆ ಅಷ್ಟೇ, ಘೋಷಿಸಿದ್ದು ಸಿಎಂ| ನನ್ನ ಒತ್ತಡವೇ ಕಾರಣ ಎಂಬ ಬಿಜೆಪಿ ಆರೋಪ ಮೂರ್ಖತನ| ಆದಷ್ಟುಬೇಗ ಆಡಿಯೋ ಎಸ್‌ಐಟಿ ರಚನೆ

ಬೆಂಗಳೂರು[ಫೆ.15]: ಆಪರೇಷನ್‌ ಕಮಲ ಧ್ವನಿ ಸುರಳಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವುದಾಗಿ ಘೋಷಿಸಿದ್ದು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರೇ ಹೊರತು ನಾನಲ್ಲ. ಸದನದ ಒಬ್ಬ ಸದಸ್ಯನಾಗಿ ನಾನು ಸಲಹೆ ನೀಡಿದ್ದೇನೆ ಅಷ್ಟೆ. ಎಸ್‌​ಐಟಿ ತನಿ​ಖೆಗೆ ನನ್ನ ಒತ್ತ​ಡವೇ ಕಾರಣ ಎಂಬ ಬಿಜೆಪಿಯ ಆರೋಪ ಮೂರ್ಖ​ತ​ನದ್ದು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯ​ಕ ಸಿದ್ದ​ರಾ​ಮಯ್ಯ ಆರೋ​ಪಿ​ಸಿ​ದ್ದಾ​ರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌​ಐಟಿ ರಚ​ನೆಗೆ ಸಿದ್ದ​ರಾ​ಮಯ್ಯ ಒತ್ತಡ ಕಾರಣ ಎಂದು ಬಿಜೆಪಿ ನಾಯ​ಕರು ಆರೋ​ಪಿ​ಸು​ತ್ತಾರೆ. ಆದರೆ, ಸದ​ನದ ಒಬ್ಬ ಸದ​ಸ್ಯ​ನಾಗಿ ನಾನು ಸಲಹೆ ನೀಡಿ​ದ್ದೇನೆ ಅಷ್ಟೇ. ಎಸ್‌​ಐಟಿ ರಚನೆ ಮಾಡು​ವು​ದಾಗಿ ಕುಮಾ​ರ​ಸ್ವಾಮಿ ಅವರೇ ಘೋಷಣೆ ಮಾಡಿದ್ದು ಎಂದ​ರು.

ಎಸ್‌ಐಟಿ ವಿಚಾರದಲ್ಲಿ ಮುಖ್ಯಮಂತ್ರಿ ಅವರು ಸಾಫ್ಟ್‌ ಆಗಿರುವ ಮಾತುಗಳು ಕೇಳುಬರುತ್ತಿವೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಎಸ್‌​ಐಟಿ ರಚಿ​ಸು​ವು​ದಾಗಿ ಘೋಷಿ​ಸಿ​ದ​ವರೆ ಮುಖ್ಯ​ಮಂತ್ರಿ​ಯ​ವರು. ಆ ವಿಚಾರದಲ್ಲಿ ಈಗ ಏಕೆ ಸಾಫ್ಟ್‌ ಆಗುತ್ತಾರೆ? ಆದಷ್ಟುಬೇಗ ಎಸ್‌ಐಟಿ ತಂಡ ರಚನೆ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!