'ಪ್ರಿಯಕರ ಕೃಷ್ಣನಿಗೆ ಐ ಲವ್ ಯು..'; ದೇವಸ್ಥಾನದ ಹುಂಡಿಯಲ್ಲಿ ಲವ್ ಲೆಟರ್‌ ಪತ್ತೆ!

By Ravi JanekalFirst Published Jul 30, 2024, 5:46 PM IST
Highlights

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಭಕ್ತರು ಭರಪೂರ ಕಾಣಿಕೆ ನೀಡಿದ್ದಾರೆ. ಕಾರ್ಯದ ವೇಳೆ ಹುಂಡಿಯಲ್ಲಿ ಹಣದ ಜೊತೆಗೆ ಲವ್ ಲೆಟರ್ ಪತ್ತೆಯಾಗಿದೆ.

ಕೋಲಾರ (ಜು.30) : ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಭಕ್ತರು ಭರಪೂರ ಕಾಣಿಕೆ ನೀಡಿದ್ದಾರೆ. ಕಾರ್ಯದ ವೇಳೆ ಹುಂಡಿಯಲ್ಲಿ ಹಣದ ಜೊತೆಗೆ ಲವ್ ಲೆಟರ್ ಪತ್ತೆಯಾಗಿದೆ.

ಹೌದು, ತಿರುಮಲ ತಿರುಪತಿ ದೇವಸ್ಥಾನದಂತೆಯೇ ಕೋಲಾರದ ಚಿಕ್ಕತಿರುಪತಿ ಪ್ರಸನ್ನ ವೆಂಕಟೇಶ್ವರ ದೇವಾಲಯವು ಪ್ರಸಿದ್ಧವಾಗಿದೆ. ಪ್ರತಿಮೂರು ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಕಾರ್ಯದಲ್ಲಿ ಚಿನ್ನ ಬೆಳ್ಳಿ ಸಹಿತ ಭಕ್ತರು ಲಕ್ಷಾಂತರು ದೇಣಿಗೆ ನೀಡುತ್ತಾರೆ. ಈ ಬಾರಿ ಹುಂಡಿ ಎಣಿಕೆ ಕಾರ್ಯವೇಳೆ ಹುಂಡಿಯಲ್ಲಿ ಲವ್ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

Latest Videos

ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಲವ್‌ ಲೆಟರ್‌ನಲ್ಲಿ ಏನಿದೆ?

'ಪ್ರಿಯಕರ ಕೃಷ್ಣನಿಗೆ ಐ ಲವ್' ಎಂದು ಬರೆದಿರುವ ಪ್ರಿಯತಮೆ. ಬೆಳಗಾವಿ ಮೂಲದ ಕಾಂಚನ ಮಾಲ ಎಂಬ ಪ್ರಿಯತಮೆ ಹೆಸರಲ್ಲಿ ಬರೆದಿರುವ ಲವ್ ಲೆಟರ್, 'ನಿನ್ನನ್ನು ಬಿಟ್ಟು ನಾನು ಬದುಕಲಾರೆ. ನಾನು ಕಣ್ಣು ಮುಚ್ಚಿದರೂ, ಕಣ್ಣುಬಿಟ್ಟರೂ ನೀನೇ ಕಾಣಿಸುತ್ತೀಯಾ, ನಿನ್ನನ್ನು ನನ್ನಷ್ಟು ಪ್ರೀತಿ ಮಾಡುವವಳು ಈ ಜಗತ್ತಿನಲ್ಲಿ ಯಾರೂ ಇಲ್ಲ..' ಎಂದು ಲೆಟರ್‌ನಲ್ಲಿ ಬರೆದಿರುವ ಪ್ರಿಯತಮೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಬಿಡುಗಡೆಗಾಗಿ ತಿರುಪತಿ ಹುಂಡಿಗೆ 10 ರು. ಕಾಣಿಕೆ..!

ಕೆನರಾ ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ  ಹುಂಡಿ ಎಣಿಕೆ ನಡೆಯಿತು. ಈ ವೇಳೆ ತಹಶೀಲ್ದಾರ್ ರಮೇಶ್,  ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಭಾಗಿಯಾಗಿದ್ದರು.

click me!