ಹುಬ್ಬಳ್ಳಿ ಗಲಭೆ ಕೇಸ್ ವಾಪಸ್:  ರೈತ ಚಳವಳಿ, ಕನ್ನಡ ಪರ ಹೋರಾಟಗಾರರ ಕೇಸ್‌ಗೆ ಹೋಲಿಕೆ ಮಾಡಿದ ಸಾರಿಗೆ ಸಚಿವ!

Published : Oct 15, 2024, 04:20 PM IST
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್:  ರೈತ ಚಳವಳಿ, ಕನ್ನಡ ಪರ ಹೋರಾಟಗಾರರ ಕೇಸ್‌ಗೆ ಹೋಲಿಕೆ ಮಾಡಿದ ಸಾರಿಗೆ ಸಚಿವ!

ಸಾರಾಂಶ

ರಾಜ್ಯದಲ್ಲಿ ಕೇಸ್ ವಾಪಸ್ ಪಡೆಯುವ ಅಧಿಕಾರ ಸೆಕ್ಷನ್ 321ರ ಅನ್ವಯ ಎಲ್ಲಾ ಸರ್ಕಾರಗಳಿಗೂ ಅಧಿಕಾರವಿದೆ. ಸಹಜವಾಗಿ ಸಾರ್ವಜನಿಕ ಸಂಸ್ಥೆಗಳು ಗೃಹ ಇಲಾಖೆಗಳಿಗೆ ಮನವಿಯನ್ನ ಸಲ್ಲಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು (ಅ.15): ರಾಜ್ಯದಲ್ಲಿ ಕೇಸ್ ವಾಪಸ್ ಪಡೆಯುವ ಅಧಿಕಾರ ಸೆಕ್ಷನ್ 321ರ ಅನ್ವಯ ಎಲ್ಲಾ ಸರ್ಕಾರಗಳಿಗೂ ಅಧಿಕಾರವಿದೆ. ಸಹಜವಾಗಿ ಸಾರ್ವಜನಿಕ ಸಂಸ್ಥೆಗಳು ಗೃಹ ಇಲಾಖೆಗಳಿಗೆ ಮನವಿಯನ್ನ ಸಲ್ಲಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅನೇಕ ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ಅಮಾಯಕರ ಮೇಲೆ ಕೇಸ್‌ಗಳನ್ನ ದಾಖಲಿಸಿರುತ್ತಾರೆ. ರೈತರ ಚಳವಳಿಯಲ್ಲಿ ಅನೇಕ ಮಂದಿ ಭಾಗಿಯಾಗಿರುತ್ತಾರೆ. ಪ್ರಾಂತ್ಯ, ಭಾಷಾ, ನೀರಿಗಾಗಿ ಹೋರಾಟ ಮಾಡಿದವ್ರು ಇದ್ದಾರೆ. ಕೆಲವೊಂದು ಚಳವಳಿಗಳು ಸಹ ನಡೆದಿವೆ. ಆಗ ಅವರು ಕೇಸ್ ವಾಪಾಸ್ ತೆಗೆದುಕೊಳ್ಳಿ  ಅಂತಾ ಮನವಿ ಮಾಡ್ತಾರೆ. ನಾವು ಹೋರಾಟ ಮಾಡಿದ್ದು ರಾಜ್ಯದ ಹಿತಕ್ಕಾಗಿ ಎಂದು ಮನವಿ ಮಾಡುತ್ತಾರೆ. ಆಗ ಸರ್ಕಾರ ಕೇಸ್ ತೆಗೆದುಕೊಳ್ಳುತ್ತದೆ ಇದು ಬಹಳ ಹಿಂದಿನಿಂದಲೂ ಎಲ್ಲ ಸರ್ಕಾರಗಳು  ಮಾಡುತ್ತ ಬಂದಿದೆ. ಅದೇ ರೀತಿ ನಮ್ಮ ಸರ್ಕಾರವೂ ಸಹ ಕೇಸ್ ವಾಪಸ್ ತೆಗೆದುಕೊಂಡಿದೆ ಎಂದರು.

ಹಿಂದೂ ಹಬ್ಬಗಳಲ್ಲಿ ಕಲ್ಲು ತೂರಾಟಕ್ಕೆ ಮಹಾನ್ ನಾಯಕ ರಾಹುಲ್ ಗಾಂಧಿ ಯಾಕೆ ಮೌನ?: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕಿಡಿ

ಹುಬ್ಬಳ್ಳಿ ಗಲಭೆಯಲ್ಲಿ ಸುಮಾರು 43 ಕೇಸ್ ಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿದಾಗ ಸುಮಾರು 381 ಕೇಸ್‌ಗಳನ್ನ ವಾಪಸ್ ಪಡೆಯಲಾಗಿತ್ತು. ಅದರಲ್ಲಿ 183 ಕೇಸ್ ಪೊಲೀಸ್ ನೈತಿಕ ಗಿರಿ, ಹಿಜಾಬ್ ಪ್ರಕರಣ ಆಗಿದೆ. ಒಟ್ಟು ಎರಡು ಸಾವಿರ ಆರೋಪಿಗಳನ್ನ ಇವರು ವಿಥ್ ಡ್ರಾ ಮಾಡಿಕೊಂಡಿದ್ದಾರೆ. 2020ರಲ್ಲಿ 67 ಪ್ರಕರಣಗಳನ್ನ ವಿತ್ ಡ್ರಾ ಮಾಡಿದ್ದಾರೆ. ಅದನ್ನ ಜೆ ಸಿ ಮಾಧುಸ್ವಾಮಿ ಡಿಫೆಂಡ್ ಮಾಡಿಕೊಳ್ತಾರೆ, ಸಿಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಹಾಲಪ್ಪ ಅವರು ಇವರೆಲ್ಲಾ ಆ ಕೇಸ್ ಅಲ್ಲಿದ್ದು ಕೇಸ್‌ಗಳನ್ನ ವಿತ್ ಡ್ರಾ ಮಾಡಿಕೊಂಡಿದ್ದಾರೆ ಇದೀಗ ರಾಜ್ಯ ಸರ್ಕಾರ ಕೇಸ್ ವಾಪಸ್ ಪಡೆದ ಬಗ್ಗೆ ಮಾತನಾಡ್ತಾರೆ ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿರುವ ಬಲಪಂಥಿಯರು ಯಾರಿದ್ದಾರೆ, ಶ್ರೀರಾಮಸೇನೆ ಭಜರಂಗದಳ ಹಾಗೂ ಬಿಜೆಪಿಯ ಬಹುತೇಕ ಕಾರ್ಯಕರ್ತರು 2018 ರಿಂದ 2020 ರವರೆಗೆ 128 ಕೇಸ್‌ಗಳನ್ನ ಹಿಂದಿನ ಬಿಜೆಪಿ ಸರ್ಕಾರ ಕೇಸ್ ವಿತ್ ಡ್ರಾ ಮಾಡಿದೆ. ಬಿಜೆಪಿ ಅವಧಿಯಲ್ಲಿ ಪೊಲೀಸರ ಮೇಲೆ ದೊಂಬಿ ಮಾಡಲಾಗಿತ್ತು. ಎಸ್‌ಡಿಪಿಐ, ಪಿಎಫ್‌ಐ ಕೇಸ್ ವಾಪಸ್ ಪಡೆದಿದ್ರು. ಬಿಜೆಪಿಯವರು ಹುಡುಕಿ ಹುಡುಕಿ ಅವರ ಮೇಲೆ ಕೇಸ್ ಹಾಕ್ತಿದ್ರು. ಅತ್ಯಾಚಾರ ಮಾಡಿ ಜೈಲಿಂದ ಹೊರಗೆ ಬಂದವರಿಗೆ ಬಿಜೆಪಿ ಸನ್ಮಾನ ಮಾಡಿತು. ನಮ್ಮ ಬಗ್ಗೆ ಮಾತನಾಡೋಕೆ ಅವರಿಗೆ ನೈತಿಕತೆ ಇದ್ಯಾ? ಅವರಿಗೆ ದೇಶದ ಬಗ್ಗೆ ಭಕ್ತಿ ಇಲ್ಲ. ಸುಮ್ಮನೆ ನಮ್ಮ‌ ಮೇಲೆ ಆರೋಪ ಮಾಡ್ತಾರೆ. ಎಸ್‌ಡಿಪಿಐ, ಪಿಎಫ್‌ಐ ಕೇಸ್ ಯಾಕೆ ವಾಪಸ್ ಪಡೆದ್ರು? ಯಾವ ಕಾರಣಕ್ಕೆ ಬಿಜೆಪಿ ವಾಪಸ್ ಪಡೆಯಿತು ಉತ್ತರಿಸಲಿ ಎಂದು ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ

ಬಿಜೆಪಿಯವರು ರಾಜಕೀಯ ಮಾಡೋಕೆ ರಣಹದ್ದುಗಳಂತೆ ಕಾಯ್ತಿರ್ತಾರೆ. ಸರ್ಕಾರ ಹುಬ್ಬಳ್ಳಿ ಕೇಸ್‌ಗಳನ್ನ ವಾಪಸ್ ಪಡೆದಿದ್ದಾರೆ. ಇವರು ಉಗ್ರಗಾಮಿಗಳಿಗೆ ಬೆಂಬಲ ನೀಡ್ತಾ ಇದ್ದಾರೆ ಅಂತಾ ಹೇಳ್ತಾರೆ. ಆ ವಿಜಯೇಂದ್ರನಿಂದ ಹಿಡಿದು, ಜೋಶಿವರೆಗೂ  ಸುಳ್ಳು ಹೇಳೊದ್ರಲ್ಲಿ ಎಕ್ಸ್ಪರ್ಟ್ ಇದ್ದಾರೆ. ಬಿಜೆಪಿ ನಾಯಕರ ಹೇಳಿಕೆಯೆಲ್ಲಾ ಬರೀ ಸುಳ್ಳು. ಇದೇ ಬಿಜೆಪಿಯವರು ಲಂಕೇಶ್ ಹತ್ಯೆ ಮಾಡಿದವರಿಗೆ ಸನ್ಮಾನ ಮಾಡಿದ್ರು. ಕೊಲೆಗಡುಕರಿಗೆ ಬಿಜೆಪಿ ಸಪೋರ್ಟ್ ಮಾಡಿದ್ರು. ಬಲ್ಕಿಶ್ ಬಾನು ಅತ್ಯಾಚಾರಿಗಳಿಗೆ ಸನ್ಮಾನ ಮಾಡಿದ್ರಲ್ಲ. ಅವರಿಗೆ ಯಾವ ಮಾನ ಮರ್ಯಾದೆ ಇದೆ ಹೇಳಿ ಎಂದು ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ