
ಬೆಂಗಳೂರು (ಅ.01): ಬೆಂಗಳೂರು ಹೊರವಲಯದಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ಅವಘಡ ಸಂಭವಿಸಿದೆ. ಹಿಲೇನಿಯಮ್ ಬ್ಲಾಸ್ಟ್ ಆಗಿ ಐವರಿಗೆ ಗಾಯವಾಗಿದೆ. ನಿನ್ನೆ ಹುಟ್ಟಹಬ್ಬದ ಆಚರಣೆ ವೇಳೆ ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ ಸೇರಿಂದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ.
ಮಗನ ಹುಟ್ಟುಹಬ್ಬದ ಪ್ರಯುಕ್ತ ಹಿಲೇನಿಯಮ್ ಗ್ಯಾಸ್ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು. ಆದರೆ, ಈ ವೇಳೆ ಕೇಕ್ ಕತ್ತರಿಸುವ ಮುನ್ನ ಕ್ಯಾಂಡಲ್ ಹಚ್ಚಲು ಲೈಟರ್ ಹಚ್ಚಿದ ತಕ್ಷಣವೇ ಅಕ್ಕಪಕ್ಕದಲ್ಲಿ ಬಳಕೆ ಮಾಡಲಾಗಿದ್ದ ಹೀಲಿಯಂ ಬಲೂನ್ಗಳು ಬ್ಲಾಸ್ಟ್ ಆಗಿವೆ. ಈ ಘಟನೆಯಲ್ಲಿ ವಿಜಯ್ ಕುಮಾರ್ (44) ಧ್ಯಾನ್(7) , ಸಂಜಯ್(8), ಸೋಹಿಲಾ (3) ಗಾಯಗೊಂಡಿದ್ದಾರೆ. ದೇಹದದಲ್ಲಿ ಕೈ-ಕಾಲು ಮುಖದ ಭಾಗಗಳು ಸುಟ್ಟು ಹೋಗಿದ್ದು, ಚರ್ಮವು ಸುಟ್ಟು ಹೋಗಿದೆ.
ಸ್ಯಾಂಡಲ್ವುಡ್ ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
ಈ ಘಟನೆಯು ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಗಾಯಾಳುಗಳಲ್ಲಿ ಇಬ್ಬರು ಮಕ್ಕಳಿಗೆ ದೇಹದ ಮೇಲಿನ ಶೇ.30ಕ್ಕೂ ಹೆಚ್ಚು ಭಾಗದ ಚರ್ಮವು ಸುಟ್ಟಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಆದರೆ, ಬೆಂಕಿ ಸಮೀಪದಲ್ಲಿ ಹೀಲಿಯಂ ಬಲೂನ್ ಬಳಕೆ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ