
ಬೆಂಗಳೂರು (ಅ.15): ನಗರದಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬೇಗೂರಿನ ನಾಗನಾಥೇಶ್ವರ ಸ್ವಾಮಿ ದೇವಾಲಯದ 60 ಅಡಿ ಎತ್ತರದ ತೇರು ಧರೆಗುರುಳಿದ ದುರ್ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಸುಮಾರು 13 ಶತಮಾನದಲ್ಲಿ ಚೋಳರಿಂದ ನಿರ್ಮಾಣವಾಗಿರುವ ದೇವಾಲಯ. ಪಂಚಲಿಂಗೇಶ್ವರ ದೇವಾಲಯವೆಂದೇ ಖ್ಯಾತಿ ಪಡೆದಿರುವ ಪುರಾತನ ದೇವಾಲಯವಿದು. ದೇವಾಲಯದ ತೇರು ಪುರಾತನವಾದುದು. ಮಳೆ ಗಾಳಿಯಿಂದ ಸುರಕ್ಷಿತವಾಗಿರಲೆಂದು ಶೆಡ್ ನೊಳಗೆ ನಿಲ್ಲಿಸಲಾಗಿತ್ತು. ಆದರೆ ಭಾರೀ ಮಳೆಗೆ ಶೆಡ್ ಕುಸಿದು ತೇರಿನ ಮೇಲೆ ಬಿದ್ದು, ತೇರಿನ ಗೋಪುರ ಮತ್ತು ಪಕ್ಕದ ಮರಗಳು ಮುರಿದುಬಿದ್ದಿವೆ.
ಪ್ರತಿವರ್ಷ ಇಲ್ಲಿ ಕಾರ್ತಿಕ ಮಾಸದಲ್ಲಿ ರಥೋತ್ಸವ ನಡೆಯುತಿತ್ತು. ರಥೋತ್ಸವ ಇನ್ನು ಕೆಲವೇ ದಿನಗಳು ಇರುವಾಗಲೇ ಈ ಅವಘಡ ಸಂಭವಿಸಿರುವುದು ಈ ಬಾರಿ ರಥೋತ್ಸವಕ್ಕೆ ಆಡಳಿತ ಮಂಡಳಿಯವರು ಏನು ಮಾಡುವವರೋ ಎಂಬ ಚಿಂತೆ ಭಕ್ತರನ್ನು ಕಾಡುತ್ತಿದೆ.
ಬಸವೇಶ್ವರ ಭಾವಚಿತ್ರ ಸುಟ್ಟ ಪ್ರಕರಣ: ಕಾಂಗ್ರೆಸ್ ಲಿಂಗಾಯತರು-ಬಿಜೆಪಿ ಲಿಂಗಾಯತರ ಮಧ್ಯೆ ಮಾರಾಮಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ