
ನಂಜನಗೂಡು (ಸೆ.13) : ನಂಜನಗೂಡು (ಸೆ.13):ಹಾಡ್ಯ ಗ್ರಾಪಂ ಉಪಾಧ್ಯಕ್ಷ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ನಂಜನಗೂಡಿನ ಹಾಡ್ಯಾ ಗ್ರಾಮದಲ್ಲಿ ನಡೆದಿದೆ.
ಹಾಡ್ಯಾ ಗ್ರಾಮಪಂಚಾಯಿತಿ ಉಪಾಧ್ಯಕ್ಷನಾಗಿರುವ ಹರೀಶ್ ಕುಮಾರ ಎಂಬುವವರು ಅರಿಯೂರು ಗ್ರಾಮದ ಬಾಲಕಿಯನ್ನು ಪುಸಲಾಯಿಸಿ ಕಳೆದ (2023) ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದೆ. ಶಾಲಾ ದಾಖಲಾತಿ ಪ್ರಕಾರ ಯುವತಿ ಜನ್ಮದಿನಾಂಕ ಮೇ.19, 2005 ಎಂದಿದೆ. ಅಂದರೆ ಯುವತಿಗೆ ಇನ್ನೂ 18 ವರ್ಷ ತುಂಬಿಲ್ಲ.
ಆದರೆ ಮದುವೆಯಾದ ಬಳಿಕ ಆಧಾರ್ ತಿದ್ದುಪಡಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಯುವತಿ ಈಗ ಗರ್ಭಿಣಿಯಾಗಿರುವುದು ಕಾನೂನು ಉಲ್ಲಂಘಿಸಿದಂತಾಗಿದೆ. ಈ ಪ್ರಕರಣ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಬಾಲ್ಯ ವಿವಾಹ ಕಾಯ್ದೆಯಡಿ ಸೂಕ್ತ ಕ್ರಮ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಗ್ರಾಮಸ್ಥರು. ಗ್ರಾಮಸ್ಥರು ದೂರಿನ ಪತ್ರದ ಮೇಲೆ ಸಹಿ ಸಂಗ್ರಹಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
11ನೇ ವಯಸ್ಸಿನಲ್ಲಿ ಮದುವೆ, 20ರ ವೇಳೆಗೆ ತಂದೆಯಾದ ವ್ಯಕ್ತಿ ನೀಟ್ ಪರೀಕ್ಷೆ ಪಾಸ್ ಆಗಿ ವೈದ್ಯನಾಗಲು ಹೊರಟ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ