ಅಡುಗೆಯಾಟ ಆಡುವಾಗ ಬಣವೆಗೆ ಬೆಂಕಿ: ಮೂರೂವರೆ ವರ್ಷದ ಬಾಲಕಿ ಸಾವು

Published : Jan 27, 2019, 03:17 PM IST
ಅಡುಗೆಯಾಟ ಆಡುವಾಗ ಬಣವೆಗೆ ಬೆಂಕಿ: ಮೂರೂವರೆ ವರ್ಷದ ಬಾಲಕಿ ಸಾವು

ಸಾರಾಂಶ

ಮನೆಯ ಅಂಗಳದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಮೂರೂವರೆ ವರ್ಷದ ಪುಟ್ಟಬಾಲಕಿಯೊಬ್ಬಳು ಸಜೀವ ದಹನ

ಶಿವಮೊಗ್ಗ[ಜ.27]: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪ ತೊರೆಬೈಲು ಗ್ರಾಮದ ಮನೆಯ ಅಂಗಳದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಮೂರೂವರೆ ವರ್ಷದ ಪುಟ್ಟಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ಶನಿವಾರ ನಡೆದಿದೆ. ಮೂರೂವರೆ ವರ್ಷದ ಅರ್ಥ ಮೃತಪಟ್ಟ ಬಾಲಕಿಯಾಗಿದ್ದಾಳೆ.

ಮೃತ ಬಾಲಕಿಯ ತಂದೆ ರಮೇಶ್‌ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ತಾಯಿ ಜಯಲಕ್ಷ್ಮೇ ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದರು. 7 ವರ್ಷದ ಧನಂಜಯ ಮತ್ತು ಪುಟ್ಟಬಾಲಕಿ ಅರ್ಥ ಮಾತ್ರ ಮನೆಯಲ್ಲಿದ್ದರು. ಇವರಿಬ್ಬರು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆಯಾಟ ಆಡತೊಡಗಿದ್ದರು ಎನ್ನಲಾಗಿದೆ.

ಆ ವೇಳೆಯಲ್ಲಿ ಅಂಗಳದ ಹುಲ್ಲು ಬಣವೆಗೆ ಬೆಂಕಿ ತಗುಲಿದೆ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಅರ್ಥ ಬಣವೆಯ ಬೆಂಕಿಗೆ ಬಲಿಯಾಗಿದ್ದಳು. ಧನಂಜಯ ತಕ್ಷಣ ಕೂಲಿ ಕೆಲಸದಲ್ಲಿದ್ದ ತನ್ನ ತಾಯಿಗೆ ವಿಷಯ ತಿಳಿಸಿಬರುವಷ್ಟರಲ್ಲಿ ಅರ್ಥ ಶವವಾಗಿದ್ದಳು. ಕೋಣಂದೂರು ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ