3 ಸಲ ಬಿತ್ತೀವಿ, ಮಳಿ ಎಲ್ಲ ಸತ್ಯಾನಾಶ ಮಾಡ್ಯದ: ಕೇಂದ್ರದ ನೆರೆ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟ ರೈತರು

Published : Sep 09, 2022, 01:00 AM IST
3 ಸಲ ಬಿತ್ತೀವಿ, ಮಳಿ ಎಲ್ಲ ಸತ್ಯಾನಾಶ ಮಾಡ್ಯದ: ಕೇಂದ್ರದ ನೆರೆ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟ ರೈತರು

ಸಾರಾಂಶ

ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿದ ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್‌ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ 

ಶೇಷಮೂರ್ತಿ ಅವಧಾನಿ

ಕಲಬುರಗಿ(ಸೆ.09):  ‘ಮೂರು ಸಾರಿ ಮುರ್ದು ಬಿತ್ತೀವಿ, ಒಂದೇ ಸವ್ನೆ ಮಳಿ ಸುರಿಲಿಕತ್ತದ್ರಿ, ಹಂತ್ಯಾಕಿದ್ದ ದುಡ್ಡೆಲ್ಲ ಬೀಜ- ಗೊಬ್ಬರಕ್ಕ ಹಾಕೀವಿ, ಆದ್ರೂ ಏಳ್ಗಿ ಇಲ್ರಿ. ಈ ಮಳಿ ನಮ್ಮ ಬದುಕು, ಬೆಳೆ ಎಲ್ಲವನ್ನ ಸತ್ಯಾನಾಶ ಮಾಡ್ಯದ. ತಿಂಗಳಾದ್ರೂ ಹೊಲ್ದಾಗ ನಿಂತಿರೋ ನೀರ ಇನ್ನ ಹೋಗವಲ್ದು, ಬಿತ್ತಿದಾಗೊಮ್ಮೆ ಎಕರೆಗೆ 5 ರಿಂದ 6 ಸಾವಿರ ಖರ್ಚ ಮಾಡೀವಿ. ಅದೆಲ್ಲಾ ಈ ಮಳ್ಯಾಗ ಹರ್ಕೋಂಡ ಹೊಂಟದ.’ ಹೀಗೆಂದು ಜಿಲ್ಲೆಯ ರೈತರು ಗುರುವಾರ ತಮ್ಮೂರು ಹಾಗೂ ಹೊಲಗದ್ದೆಗೆ ಭೇಟಿ ನೀಡಿದ್ದ ಕೇಂದ್ರ ಅಧ್ಯಯನ ತಂಡದ ಮುಂದೆ ಗೋಳಾಡುತ್ತ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್‌ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿತು.

ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ

ಎಲ್ಲಾ ಲುಕ್ಸಾನ್‌:

ಹೊನ್ನಕಿರಣಗಿ ಹೊರ ವಲಯದಲ್ಲಿರುವ ತನ್ನ 1 ಎಕರೆ 30 ಗುಂಟೆ ತೊಗರಿ ಹೊಲದಲ್ಲಿ ನೀರು ತಿಂಗಳಿಂದ ನಿಂತಿದ್ದು ಇನ್ನೂ ಇಂಗಿಲ್ಲವೆಂದು ಹೇಳುತ್ತಲೇ ಹೊಲದ ಒಡತಿ ರಸೂಲ್‌ ಬಿ ಕಣ್ಣೀರಾದಳು. ‘ಕ್ಯಾ ಕರ್ನಾ ಸಾಬ್‌, ತೀನ್‌ ದಫಾ ಹಮ್‌ ಇಸ್‌ ಖೇತ್‌ ಮೇ ಕಾಮ್‌ ಕಿಯಾ ಹೈ, ಹಮ್‌ ಖೇತ್‌ ಮೇ 18 ಹಜಾರ್‌ ಖರ್ಚ ಕಿಯಾ ಹೈ, ಓ ಸಬ್‌ ಬಾರೀಷ್‌ ಮೇ ಹಮ್‌ ಖೋ ಗಯಾ ಹೈ ಎಂದು ರಸೂಲ್‌ ಬಿ ಮೂರು ಬಾರಿ ಮುರಿದು ಬಿತ್ತಿದ್ರೂ ಫಾಯ್ದಾ ಇಲ್ಲಾ, ಎಲ್ಲಾ ಲುಕ್ಸಾನ್‌ ಎಂದು ಕೇಂದ್ರ ತಂಡದ ಮುಂದೆ ವಿವರಿಸಿದಳು.

ರೈತ ವಿನೋದ ಬಸನಾಳಕರ್‌ ತನಗಿರೋ 10 ಎಕರೆ ಹೊಲದಲ್ಲಿನ ತೊಗರಿ 2 ಬಾರಿ ಹಾಳಾದದ್ದು ಹೇಳಿ ಗೋಳಾಡಿದ. ವೈನಾಗಿ ಬೆಳೆದಿದ್ರ ಎಕರೆಗೆ 6 ಕ್ವಿಂಟಾಲ್‌ನಂತೆ 60 ಕ್ವಿಂಟಾಲ್‌ ಬೆಳ್ದು 5 ಲಕ್ಷ ಆಗತಿತ್ತು. ಈಗ ನೋಡ್ರಿ ಬಲ್ಯಾಕಿದ್ದ ದುಡ್ಡನ್ನೆಲ್ಲ ಸುರದ್ರೂ ತೊಗರಿ ದಾಣಿನೂ ವಾಪಸ್‌ ಬರುವಂಗಿಲ್ಲ. ಮಳಿ ಬದುಕೇ ಮೂರಾಬಟ್ಟೆಮಾಡಿದೆ ಎಂದು ಕಣ್ಣೀರಿಟ್ಟ. ಶೇ.80ರಷ್ಟುಬೆಳೆ ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿದೆ.

Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

ಕಲಬುರಗಿ ಜಿಲ್ಲೆ ಹೊನ್ನಕಿರಣಗಿಗೆ ಭೇಟಿ ನೀಡಿದ ಕೇಂದ್ರ ತಂಡ, 10 ದಿನದಲ್ಲಿ ವರದಿ

ಬೆಂಗಳೂರು: ರಾಜ್ಯದಲ್ಲಿ ಮಳೆಹಾನಿ ಪರಿಶೀಲನೆಗೆ ಕೇಂದ್ರದ 4 ತಂಡ ಆಗಮಿಸಿದ್ದು, ಸಂಚಾರ ಆರಂಭಿಸಿದೆ. ಕಲಬುರಗಿ, ಧಾರವಾಡ, ಗದಗ, ವಿಜಯಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿದೆ. 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದೆ.

ಮಳೆಗೆ 2 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಕೊಂಚ ಕಡಿಮೆಯಾಗಿದ್ದು, ಪ್ರವಾಹದ ಆತಂಕ ಇನ್ನೂ ಇಳಿಕೆಯಾಗಿಲ್ಲ. ಮಳೆ ಸಂಬಂಧಿ ಅನಾಹುತಗಳಲ್ಲಿ ಗುರುವಾರ ಇಬ್ಬರು ಸಾವನ್ನಪ್ಪಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ