
ರಸ್ತೆ ಅಗಲೀಕರಣ ಮತ್ತಿತರ ಕಾಮಗಾರಿ ಕೈಗೊಳ್ಳುವಾಗ ಪುರಾತನ ಕಾಲದಲ್ಲಿ ನೆಲದಡಿ ಹೂತಿಟ್ಟಚಿನ್ನ, ವಜ್ರ ವೈಡೂರ್ಯಗಳು, ದೇವಾಲಯಗಳ ಇರುವಿಕೆಯನ್ನು ಸೂಚಿಸುವ ವಿಗ್ರಹಗಳು ಪತ್ತೆಯಾಗುವುದುಂಟು.
ಸದ್ಯ ಕರ್ನಾಟಕದ ರಾಯಚೂರಿನಲ್ಲಿ ಜೈನರ ಕೋಟೆಯಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು. ಇತ್ತೀಚೆಗೆ ರಸ್ತೆ ಅಗಲೀಕರಣ ಮಾಡಲು ಮಸೀದಿ ಕೆಡವಿದಾಗ ಆ ಸ್ಥಳದಲ್ಲಿ ಪುರಾತನ ಕಾಲದ ಜೈನರ ಕೋಟೆ ಇರುವುದು ಪತ್ತೆಯಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Fact Check; ಮುಂಬೈನಲ್ಲೊಂದು ಜಗಮಗಿಸುವ ಸೇತುವೆ?
3j-jai jinendra ji ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಪುರಾತನ ಕಾಲದ ವಾಸ್ತುಶಿಲ್ಪಗಳನ್ನು ಒಳಗೊಂಡ ಕೋಟೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಅದು 3000 ಬಾರಿ ಶೇರ್ ಆಗಿದೆ. ಅನಂತರ ವಾಟ್ಸ್ ಆ್ಯಪ್ ಮತ್ತು ಟ್ವೀಟರ್ನಲ್ಲೂ ಈ ಫೋಟೋ ವೈರಲ್ ಆಗಿದೆ. ಸುಂದರ ವಾಸ್ತುಶಿಲ್ಪಗಳು, ಮೆಟ್ಟಿಲುಗಳುಳ್ಳ ಪುರಾತನ ಕಾಲದ ಬಾವಿ, ಕೋಟೆ ಆವರಣ ಹೀಗೆ ವಿವಿಧ ಆ್ಯಂಗಲ್ಗಳಲ್ಲಿ ಕೋಟೆಯನ್ನು ಪ್ರಸ್ತುತಪಡಿಸುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.
ಆದರೆ ಈ ಫೋಟೋಗಳು ಕರ್ನಾಟಕದ ರಾಯಚೂರಿನದ್ದೇ ಎಂದು ಪರಿಶೀಲಿಸಿದಾಗ ಇವು ಕರ್ನಾಟದ್ದಲ್ಲ, ಮಧ್ಯಪ್ರದೇಶದ ಹೆಸರಾಂತ ಗ್ವಾಲಿಯರ್ ಕೋಟೆಯ ಫೋಟೋಗಳು ಎಂದು ತಿಳಿದುಬಂದಿದೆ. ಈ ಪ್ರಸಿದ್ಧ ಕೋಟೆಯ ಫೋಟೋಗಳು ಇಂಟರ್ನೆಟ್ನಲ್ಲಿ ಲಭ್ಯವಿವೆ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ