Karnataka Assembly Elections 2023: ನಾಳೆಯೇ ಓಟು, ಮಿಸ್‌ ಮಾಡ್ಬೇಡಿ, ಪ್ರತಿ ಮತವೂ ಅಮೂಲ್ಯ..!

Published : May 09, 2023, 07:03 AM IST
Karnataka Assembly Elections 2023: ನಾಳೆಯೇ ಓಟು, ಮಿಸ್‌ ಮಾಡ್ಬೇಡಿ, ಪ್ರತಿ ಮತವೂ ಅಮೂಲ್ಯ..!

ಸಾರಾಂಶ

ಮಳೆ ಸಾಧ್ಯತೆ ಇದೆ. ಹಾಗಂತ ಉದಾಸೀನ ಮಾಡದೆ ಮತ ಚಲಾಯಿಸಿರಿ, ಬೇರೆ ಊರಿನಲ್ಲಿ ನಿಮ್ಮ ಮತವಿದ್ದರೆ ಇಂದೇ ಹೋಗುವ ಸಿದ್ಧತೆ ಮಾಡಿಕೊಳ್ಳಿ, ಸ್ನೇಹಿತರು, ಅಕ್ಕಪಕ್ಕದವರು ಹಾಗೂ ಬಂಧುಗಳಿಗೂ ಮತದಾನಕ್ಕೆ ಪ್ರೇರೇಪಿಸಿ. 

ಬೆಂಗಳೂರು(ಮೇ.09):  ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನಕ್ಕೆ ಇನ್ನು ಒಂದೇ ದಿನ ಬಾಕಿ. ಮೇ 10, ಇದು ನೀವು ನಿಮ್ಮ ಜನಪ್ರತಿನಿಧಿಯನ್ನು ಆರಿಸುವ ದಿನ. ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಲ್ಲ, ನಿಮಗೆ ಸಮರ್ಥರು ಎನಿಸಿದ ಅಭ್ಯರ್ಥಿಯನ್ನು ಆರಿಸಲು ಇದೊಂದೇ ಅವಕಾಶ. ‘ನನ್ನ ಒಂದು ಮತದಿಂದ ಏನು ಮಹಾ ಆದೀತು’ ಎಂಬ ಭಾವನೆ ತಾಳದಿರಿ, ‘ಪ್ರತಿ ಮತವೂ ಅಮೂಲ್ಯ. ಅದರಲ್ಲಿ ನನ್ನದೂ ಒಂದು’ ಎಂಬುದನ್ನು ನೆನಪಿಡಿ. ತಪ್ಪದೇ ಮತ ಚಲಾಯಿಸಿ.

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

- ನಿಮ್ಮ ಮತದಾರರ ಗುರುತಿನ ಚೀಟಿಯನ್ನು (ವೋಟರ್‌ ಐಡಿ) ತೆಗೆದಿಟ್ಟುಕೊಳ್ಳಿ
- ವೋಟರ್‌ ಐಡಿ ಇಲ್ಲದಿದ್ರೆ 12 ಗುರುತಿನ ಚೀಟಿಗಳಲ್ಲಿ ಯಾವುದಾದ್ರೂ ಬಳಸಿ
- nvsp.in ಅಥವಾ chunavana ಆ್ಯಪ್‌ ಬಳಸಿ ನಿಮ್ಮ ಹೆಸರನ್ನು ಖಾತ್ರಿಪಡಿಸಿ
- ವೆಬ್‌ಸೈಟ್‌ ಅಥವಾ ಆ್ಯಪ್‌ ಬಳಸಲು ಗೊತ್ತಾಗದವರು 1950ಗೆ ಕರೆ ಮಾಡಿ
- ನೀವು ಮತದಾನ ಮಾಡಬೇಕಾದ ವಿಧಾನಸಭಾ ಕ್ಷೇತ್ರದ ಕುರಿತೂ ಅರಿವಿರಲಿ
- ನೀವು ಮತ ಚಲಾಯಿಸಬೇಕಾದ ಮತಗಟ್ಟೆಯಾವುದು ಎಂದು ತಿಳಿದುಕೊಳ್ಳಿ
- ನಾಳೆ ಸಾರ್ವತ್ರಿಕ ರಜೆ. ಹಾಗೆಂದು ಮತ ಹಾಕದೆ ಸುತ್ತಾಡಲು ಹೋಗದಿರಿ
- ಸ್ಪರ್ಧಿಸುತ್ತಿರುವ ಅಭ್ಯರ್ಥಿ ಕುರಿತೂ ಮಾಹಿತಿ ಇರಲಿ. ಸಮರ್ಥರನ್ನು ಆರಿಸಿ
- ಮಳೆ ಸಾಧ್ಯತೆ ಇದೆ. ಹಾಗಂತ ಉದಾಸೀನ ಮಾಡದೆ ಮತ ಚಲಾಯಿಸಿರಿ
- ಬೇರೆ ಊರಿನಲ್ಲಿ ನಿಮ್ಮ ಮತವಿದ್ದರೆ ಇಂದೇ ಹೋಗುವ ಸಿದ್ಧತೆ ಮಾಡಿಕೊಳ್ಳಿ
- ಸ್ನೇಹಿತರು, ಅಕ್ಕಪಕ್ಕದವರು ಹಾಗೂ ಬಂಧುಗಳಿಗೂ ಮತದಾನಕ್ಕೆ ಪ್ರೇರೇಪಿಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ