
ಬೆಂಗಳೂರು (ಆ.20): ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಭಾಗವಾಗಿ, ಇಲ್ಲದ ಮಗಳನ್ನೇ ಸೃಷ್ಟಿಸಿ 'ಅನನ್ಯಾ ಭಟ್' ಎಂದು ಕಟ್ಟುಕಥೆ ಹೇಳಿದ ಸುಜಾತಾ ಭಟ್ ಅವರ ಸುಳ್ಳುಗಳ ಸರಣಿ ಇದೀಗ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ (Asianet Suvarna News Reality Check) ಮೂಲಕ ಬಯಲಾಗಿದೆ. ಯೂಟ್ಯೂಬರ್ ಸಮೀರ್ನೊಂದಿಗೆ (YouTuber Sameer) ಸೇರಿಕೊಂಡು, 'ನಿಗೂಢ ಸಾವು' ಎಂದು ಹೇಳಿ ಒಂದು ನಕಲಿ ಫೋಟೋವನ್ನು ಬಿಡುಗಡೆ ಮಾಡಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.
ವಾಸಂತಿ ಫೋಟೋಗೆ 'ಅನನ್ಯಾ' ಪಟ್ಟ!
ಆ. 18 ರಂದು ಸುಜಾತಾ ಭಟ್ (Sujatha Bhat) ಬಿಡುಗಡೆ ಮಾಡಿದ 'ಅನನ್ಯಾ ಭಟ್' (Ananya Bhat) ಎಂಬ ಫೋಟೋ ಯಾರದ್ದು ಎಂಬ ಪ್ರಶ್ನೆಗೆ ಸುವರ್ಣ ನ್ಯೂಸ್ ಉತ್ತರ ಕಂಡುಕೊಂಡಿದೆ. ಇದು ಸುಜಾತಾ ಭಟ್ ಜೊತೆಗೆ 2005 ರಿಂದ 2025 ರವರೆಗೆ ಲಿವಿಂಗ್ ಟುಗೆದರ್ನಲ್ಲಿದ್ದ ರಂಗಪ್ರಸಾದ್ ಅವರ ಸೊಸೆ ವಾಸಂತಿ (Virajapete Vasanthi) ಅವರ ಫೋಟೋ ಎಂದು ಬಯಲಾಗಿದೆ. ವಾಸಂತಿ ಅವರು 2007ರಲ್ಲಿಯೇ ನಿಧನರಾಗಿದ್ದು, ಸಂಬಂಧಿಕರು ಇಲ್ಲದಿರುವ ಈ ಫೋಟೋವನ್ನು ಬಳಸಿಕೊಳ್ಳಲು ಯೂಟ್ಯೂಬರ್ ಸಮೀರ್ ತಂತ್ರ ರೂಪಿಸಿದ್ದ ಎನ್ನಲಾಗಿದೆ. ಈ ಸುಳ್ಳು ಫೋಟೋ ಬಿಡುಗಡೆಯ ಹಿಂದಿನ ಸತ್ಯ ಬಯಲಾದ ನಂತರ, ಇದು ಕೇವಲ ಒಂದು ವದಂತಿಯಲ್ಲ, ಬದಲಾಗಿ ಪೂರ್ವನಿಯೋಜಿತ ಷಡ್ಯಂತ್ರ ಎಂದು ಸ್ಪಷ್ಟವಾಗಿದೆ.
ಷಡ್ಯಂತ್ರದ ರೂವಾರಿ ಯೂಟ್ಯೂಬರ್ ಸಮೀರ್?
'ಅನನ್ಯಾ' ಎಂಬ ಯುವತಿಯೇ ಇಲ್ಲ ಎಂದು ಸುವರ್ಣ ನ್ಯೂಸ್ ವರದಿ ಮಾಡಿದ ನಂತರ, ಧರ್ಮಸ್ಥಳ ವಿರೋಧಿ ಗ್ಯಾಂಗ್ ವಿಚಲಿತಗೊಂಡಿತ್ತು. ಈ ಹಂತದಲ್ಲಿ, ಫೋಟೋಗಾಗಿ ಇಂಟರ್ನೆಟ್ನಲ್ಲಿ ಹುಡುಕಾಟ ನಡೆಸಿದ ಗ್ಯಾಂಗ್, ಸುಲಭವಾಗಿ ಸಿಕ್ಕಿಬೀಳುವ ಭಯದಿಂದ ಹಳೆಯ, ಮೃತಪಟ್ಟ ಹುಡುಗಿಯ ಫೋಟೋ ಬಳಸುವ ನಿರ್ಧಾರಕ್ಕೆ ಬಂದಿತು. ಆಗ, ಸುಜಾತಾ ಭಟ್ ಅವರು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ನೀಡಿದ್ದಾರೆ. ಈ ಫೋಟೋ ಸತ್ತ ಮಹಿಳೆಯದಾಗಿರುವುದರಿಂದ ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂಬುದು ಈ ಗ್ಯಾಂಗ್ನ ಲೆಕ್ಕಾಚಾರವಾಗಿತ್ತು.
1. ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ, ಹುಡುಕಿ ಕೊಡಿ: ರಿಯಾಲಿಟಿ ಚೆಕ್ನಲ್ಲಿ, ಸುಜಾತಾ ಭಟ್ಗೆ ಮಕ್ಕಳೇ ಇಲ್ಲ ಎಂದು ಆಕೆಯ ಭಾವ ಮಹಾಬಲೇಶ್ವರ ಹೇಳಿದ್ದಾರೆ.
2. ನಾನು ಕೊಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡ್ತಿದ್ದೆ: ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಪ್ರಕಾರ, ಎಸ್ಎಸ್ಎಲ್ಸಿ ಮಾತ್ರ ಓದಿರುವ ಸುಜಾತಾ ಭಟ್ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ ಯಾವುದೇ ದಾಖಲೆಗಳು ಇಲ್ಲ. ಬದಲಾಗಿ, 1999ರಿಂದ 2005ರವರೆಗೆ ಶಿವಮೊಗ್ಗದ ರಿಪ್ಪನ್ಪೇಟೆಯಲ್ಲಿ ಪ್ರಭಾಕರ್ ಬಾಳಿಗ ಎಂಬುವವರ ಜೊತೆ ವಾಸವಾಗಿದ್ದರು.
3. ಇವಳೇ ನನ್ನ ಮಗಳು ಅನನ್ಯಾ ಭಟ್: ಫೋಟೋ ರಹಸ್ಯ ಬಯಲಾಗಿದ್ದು, ಅದು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರದು ಎಂದು ದೃಢಪಟ್ಟಿದೆ.
ಸುಜಾತಾ ಭಟ್ ಅವರು 2005ರಲ್ಲಿ ರಂಗಪ್ರಸಾದ್ ಅವರ ಮನೆಗೆ ಸಹಾಯಕಿಯಾಗಿ ಸೇರಿಕೊಂಡಿದ್ದು, ನಂತರ 12 ವರ್ಷಗಳ ಕಾಲ ಅವರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಈ ಅವಧಿಯಲ್ಲಿ, ರಂಗಪ್ರಸಾದ್ ಅವರ ಮಗ ಶ್ರೀವತ್ಸಾ ಮತ್ತು ಸೊಸೆ ವಾಸಂತಿ ಜೊತೆಗೆ ನಿರಂತರ ಜಗಳಗಳಿದ್ದವು. 2007ರಲ್ಲಿ ವಾಸಂತಿ, 2015ರಲ್ಲಿ ಶ್ರೀವತ್ಸಾ ನಿಧನರಾಗಿದ್ದಾರೆ. ರಂಗಪ್ರಸಾದ್ ಹಾಸಿಗೆ ಹಿಡಿದಿದ್ದಾಗ, ಕೆಂಗೇರಿಯಲ್ಲಿದ್ದ ಅವರ ಮನೆಯನ್ನು ಸುಜಾತಾ ಮಾರಾಟ ಮಾಡಿಸಿ, ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಈ ಎಲ್ಲಾ ಸನ್ನಿವೇಶಗಳು ಸುಜಾತಾ ಭಟ್ ಅವರ ನಡೆಗಳ ಮೇಲೆ ಸಂಶಯ ಮೂಡಿಸಿವೆ.
ಒಟ್ಟಾರೆಯಾಗಿ, ಧರ್ಮಸ್ಥಳಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ಇಲ್ಲದ ಮಗಳನ್ನು ಸೃಷ್ಟಿಸಿ, ಅದರ ಸಾವಿಗೆ 'ನಿಗೂಢ' ಎಂಬ ಕಥೆ ಹೆಣೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಗ್ಯಾಂಗ್ನ ಸಂಪೂರ್ಣ ಷಡ್ಯಂತ್ರವನ್ನು ಬಯಲಿಗೆಳೆಯಲು ಹೆಚ್ಚಿನ ತನಿಖೆಯ ಅಗತ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ