ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಷ್ಟೆಲ್ಲ ಅಭಿ​ವೃದ್ಧಿ ಸಾಧ್ಯ​ವಾ​ಯ್ತು: ಸಿಎಂ ಬೊಮ್ಮಾಯಿ

Published : Sep 03, 2022, 07:00 AM IST
ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಷ್ಟೆಲ್ಲ ಅಭಿ​ವೃದ್ಧಿ ಸಾಧ್ಯ​ವಾ​ಯ್ತು: ಸಿಎಂ ಬೊಮ್ಮಾಯಿ

ಸಾರಾಂಶ

ಸಿಆ​ರ್‌​ಝಡ್‌ ಮಾಸ್ಟ​ರ್‌​ಪ್ಲ್ಯಾ​ನ್‌​ಗೆ ಒಪ್ಪಿ​ಗೆ, ನವ ಕರ್ನಾ​ಟ​ಕದ ಅಭಿ​ವೃ​ದ್ಧಿ​ಯೊಂದಿಗೆ ನವಭಾರ​ತದ ಅಭಿ​ವೃದ್ಧಿ ಆಗ​ಲಿದೆ: ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ 

ಮಂಗ​ಳೂ​ರು(ಸೆ.03):  ಸಿಆ​ರ್‌​ಝ​ಡ್‌(ಕರಾವಳಿ ನಿಯಂತ್ರಣ ವಲಯ)ನ ಕರ್ನಾ​ಟ​ಕದ ಮಾಸ್ಟರ್‌ ಪ್ಲ್ಯಾನ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಅದರ ಆದೇಶ ಕೂಡ ದೊರೆ​ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗ​ಮಿ​ಸುವ ಹೊತ್ತಿ​ನಲ್ಲಿ ಈ ಮಹ​ತ್ವದ ಆದೇಶ ದೊರೆ​ತಿದೆ ಎಂದು ತಿಳಿ​ಸಿ​ದ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಇದಕ್ಕೆ ಕಾರ​ಣ​ಕ​ರ್ತ​ರಾ​ದ ನರೇಂದ್ರ ಮೋದಿ ಅವ​ರಿಗೆ ಅಭಿ​ನಂದನೆ ಸಲ್ಲಿ​ಸಿ​ದ​ರು. ಇದೇ ವೇಳೆ ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಂತಹ ಬಹಳಷ್ಟು ಮಹತ್ವದ ಕಾರ್ಯಗಳು ಸಾಧಿಸಲ್ಪಟ್ಟಿದೆ. ನವಕರ್ನಾಟಕದ ಅಭಿವೃದ್ಧಿಯೊಂದಿಗೆ ನವಭಾರತದ ಅಭಿವೃದ್ಧಿ ಆಗಲಿದೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಭಾಷ​ಣಕ್ಕೆ ಮೊದಲು ಮಾತ​ನಾ​ಡಿದ ಅವರು, ಗೋವಾ ಮತ್ತು ಕೇರಳ ರಾಜ್ಯ​ಗ​ಳಿ​ರುವ ಸಿಆ​ರ್‌​ಝಡ್‌ ನಿಯ​ಮ​ಗ​ಳ ಅನು​ಕೂಲ ನಮ್ಮ ರಾಜ್ಯಕ್ಕೆ ಇರ​ಲಿಲ್ಲ. ಇದ​ಕ್ಕಾಗಿ 30 ವರ್ಷಗಳ ಕಾಲ ಹೋರಾಟ ನಡೆ​ದಿತ್ತು. ಇದೀಗ ಸಿಆ​ರ್‌​ಝಡ್‌ ಮಾಸ್ಟ​ರ್‌​ ಪ್ಲ್ಯಾನ್‌ಗೆ ಒಪ್ಪಿಗೆ ದೊರೆ​ತಿ​ರು​ವು​ದ​ರಿಂದ ಅಭಿ​ವೃದ್ಧಿ ಕಾರ್ಯ ಕೈಗೊ​ಳ್ಳಲು ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ​ರು.

PM MODI IN MANGALURU: ಕರಾವಳಿಯಲ್ಲಿ ಪ್ರಧಾನಿ ಮೋದಿಗೆ 2 ಲಕ್ಷ ಜನರ ಸ್ವಾಗತ

ಡಬಲ್‌ ಎಂಜಿನ್‌ನಿಂದ ಸಾಧ್ಯ​ವಾ​ಯ್ತು​: 

ಡಬಲ್‌ ಎಂಜಿನ್‌ ಸರ್ಕಾರದಿಂದ ಏನಾ​ಗಿದೆ ಎಂದು ಹಲ​ವರು ಕೇಳುತ್ತಾರೆ. ಅದ​ಕ್ಕೆ ಉತ್ತರ ಇಲ್ಲೇ ಇದೆ. ಡಬಲ್‌ ಎಂಜಿ​ನ್‌ ಸರ್ಕಾರ ಇರು​ವು​ದ​ರಿಂದ​ಲೇ ಇಂದು ಸಾಗರಮಾಲಾ ಯೋಜ​ನೆ​ಯಡಿ 18 ಯೋಜ​ನೆ​ಗ​ಳನ್ನು ಮುಕ್ತಾಯ​ಗೊ​ಳಿ​ಸಿ, 950 ಕೋಟಿ ರು. ವೆಚ್ಚ​ದ 14 ಯೋಜ​ನೆ​ಗ​ಳನ್ನು ಮಂಜೂರು ಮಾಡಲು ಸಾಧ್ಯ​ವಾ​ಗಿದೆ. ಕಾರ​ವಾ​ರದ ಮಜಲಿ ಬಂದರಿನ 150 ಕೋಟಿ ರು. ಯೋಜ​ನೆಗೆ ಅನು​ಮೋ​ದನೆ ಸಿಕ್ಕಿದೆ. ಪಿಎಂ ಮತ್ಸ್ಯ ಸಂಪದ ಯೋಜ​ನೆ​ಯಡಿ ಪ್ರಥಮ ಬಾರಿ ಮೀನು​ಗಾ​ರ​ರಿಗೆ ಹೈಸ್ಪೀಡ್‌ ಡೀಪ್‌ ಸೀ ಫಿಶಿಂಗ್‌ನ 100 ಬೋಟ್‌​ಗ​ಳಿ​ಗೆ ಕೇಂದ್ರ ಸರ್ಕಾರ ಮಂಜೂ​ರಾ​ತಿ ನೀಡಿದೆ. ಇಂದು 3800 ಕೋಟಿ ರು.ಗೂ ಅಧಿಕ ಯೋಜ​ನೆ​ಗಳ ಶಿಲಾ​ನ್ಯಾಸ ಮತ್ತು ಲೋಕಾ​ರ್ಪ​ಣೆ​ಯಾ​ಗಿ​ದೆ. ಇದು ಡಬಲ್‌ ಎಂಜಿನ್‌ ಸರ್ಕಾ​ರದ ಸಾಧನೆ ಎಂದು ಮುಖ್ಯ​ಮಂತ್ರಿ ತಿರು​ಗೇಟು ನೀಡಿ​ದ​ರು.

ಮೋದಿ ಮಂಗಳೂರು ಸಮಾವೇಶಕ್ಕೆ ಎಂಟ್ರಿ ಕೊಡಲು ಉದ್ಯಮಿ ಬಿ ಆರ್‌ ಶೆಟ್ಟಿ ಹರಸಾಹಸ

ಕರಾ​ವಳಿ ಅಭಿ​ವೃದ್ಧಿ ನಿಟ್ಟಿ​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೂರ​ದೃ​ಷ್ಟಿಯ ಯೋಜ​ನೆ​ಗ​ಳನ್ನು ನೀಡಿ​ದ್ದಾರೆ. ವಿಶೇ​ಷ​ವಾಗಿ ವಿದೇಶಿ ವಿನಿ​ಮಯ ಹೆಚ್ಚ​ಳ​ವಾ​ಗ​ಬೇ​ಕಾ​ದರೆ ರಫ್ತು- ಆಮದು ಹೆಚ್ಚಾ​ಗ​ಬೇ​ಕಾ​ದರೆ ಪೋರ್ಟ್‌ ಹ್ಯಾಂಡ್ಲಿಂಗ್‌ ಕೆಪ್ಯಾ​ಸಿಟಿ ಹೆಚ್ಚಾ​ಗ​ಬೇಕು ಎನ್ನು​ವುದು ಅವರ ದೂರ​ದೃ​ಷ್ಟಿ​ಯಾ​ಗಿತ್ತು. ಅದ​ಕ್ಕಾ​ಗಿ 8 ವರ್ಷ​ಗ​ಳ ಯೋಜನೆ ಇಂದು ಪ್ರತಿ​ಫಲ ನೀಡುತ್ತಿದೆ. ಬಂದ​ರಿನ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾ​ಗು​ತ್ತಿದೆ ಎಂದು ಶ್ಲಾಘಿ​ಸಿ​ದ​ರು.

ಇದೀ​ಗ ಮಂಗ​ಳೂರು ಮತ್ತು ಕಾರ​ವಾರ ಬಂದ​ರಿನ ವಿಸ್ತ​ರಣೆ ಕಾರ್ಯ​ವನ್ನು ಕೈಗೆ​ತ್ತಿ​ಕೊ​ಳ್ಳ​ಲಾ​ಗಿ​ದೆ. ಫಿಶ​ರೀಸ್‌ ಇನ್ಸ್ಟಿ​ಟ್ಯೂ​ಶನ್‌ ಆರಂಭಿ​ಸ​ಲಿ​ದ್ದೇವೆ. ಈ ಎಲ್ಲ ಯೋಜ​ನೆ​ಗಳ ಮೂಲ​ಕ ಡಬಲ್‌ ಎಂಜಿನ್‌ ಸರ್ಕಾರವು ಕರ್ನಾ​ಟಕ ಮಾತ್ರ​ವಲ್ಲ, ಭಾರ​ತ​ವನ್ನು ಕೂಡ ಮುನ್ನ​ಡೆ​ಸು​ತ್ತಿದೆ. ನವ ಕರ್ನಾ​ಟ​ಕದ ಅಭಿ​ವೃ​ದ್ಧಿ​ಯೊಂದಿಗೆ ನವಭಾರ​ತದ ಅಭಿ​ವೃದ್ಧಿ ಆಗ​ಲಿದೆ ಎಂದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಕಲರ್ಸ್ ಮೊಬೈಲ್ ಅಂಗಡಿ ಮಾಲೀಕನಿಗೆ ಕಲರ್ ಕಲರ್ ಕಾಗೆ ಹಾರಿಸಿದ ಖತರ್ನಾಕ್ ಖದೀಮ!
ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್‌ ಹೆಗಡೆ!